ಕೊಳ್ಳೇಗಾಲ:ಮಹಾಮಾರಿ ಕರೊನಾದಿಂದ ಗಂಡನನ್ನು ಕಳೆದುಕೊಂಡು ವಿಧವೆಯಾಗಿದ್ದ ಮಹಿಳೆಗೆ ಮೃತನ ಸ್ನೇಹಿತ ಹೊಸ ಬಾಳು ನೀಡಿದ್ದಾನೆ. ಆಕೆಗೆ 7 ವರ್ಷದ ಮಗನಿದ್ದರೂ ಕೈಹಿಡಿದು ದಿಕ್ಕೆಟ್ಟವರಿಗೆ ಆಸರೆಯಾಗಿದ್ದಾನೆ. ಇಂತಹ ಪ್ರಸಂಗ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಸಾರ್ವಜನಕಿರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರ್ತಿದೆ. ಸಂಸಾರ ಸುಖಕರವಾಗಿರಲಿ ಎಂದು ಹಾರೈಸುತ್ತಿದ್ದಾರೆ.
ಮಳ್ಳೂರಿನ ಗ್ರಾಮದ ನಿವಾಸಿ ಚೇತನ್​ ಕುಮಾರ್​(41) ಮತ್ತು ಹನೂರಿನ ಅಂಬಿಕಾ(30) ಅವರು 8 ವರ್ಷದ ಹಿಂದೆ ವಿವಾಹವಾಗಿ ಬೆಂಗಳೂರಿನಲ್ಲಿ ವಾಸವಿದ್ದರು. ಇವರಿಗೆ 7 ವರ್ಷದ ಮಗನಿದ್ದಾನೆ. ಕೋವಿಡ್​ 2ನೇ ಅಲೆಯಲ್ಲಿ ಚೇತನ್​ಕುಮಾರ್​ ಮೃತಪಟ್ಟರು.
ಗಂಡನ ಸಾವಿನಿಂದ ಅಂಬಿಕಾ ಮಾನಸಿಕವಾಗಿ ಅಸ್ವಸ್ಥರಾದರು. ಅವರನ್ನು ಸಂತೈಸುವಲ್ಲಿ ಮೃತ ಚೇತನ್​ಕುಮಾರ್​ ಸ್ನೇಹ ಬಳಗ ಸಾಕಷ್ಟು ಶ್ರಮಿಸಿತು. ಕಂಗಾಲಾಗಿದ್ದ ಅಂಬಿಕಾ ಅವರಿಗೆ ಹೊಸ ಬಾಳು ನೀಡುವ ನಿಟ್ಟಿನಲ್ಲಿ ಚಾಮರಾಜನಗರ ತಾಲೂಕಿನ ನಂಜೇದೇವನಪುರದ ಲೋಕೇಶ್​ ಸಂಕಲ್ಪ ಮಾಡಿದರು. ಜ.27ರಂದು ಬೆಂಗಳೂರಿನ ಸರ್ಪಭೂಷಣ ಶಿವಯೋಗಿಗಳ ಮಠದಲ್ಲಿ ಅಂಬಿಕಾ ಅವರನ್ನು ವಿವಾಹವಾಗಿ ಮಾನವೀಯತೆ ಮೆರೆದರು.
ಚೇತನ್​ಕುಮಾರ್​ ಮತ್ತು ಲೋಕೇಶ್​ಗೆ 13 ವರ್ಷದ ಹಿಂದಿನಿಂದಲೂ ಗೆಳೆತನವಿತ್ತು. ಬೆಂಗಳೂರಿನ ಸರ್ಪಭೂಷಣ ಶಿವಯೋಗಿ ಮಠದ ಹಾಸ್ಟೆಲ್​ನಲ್ಲಿ ಇಬ್ಬರೂ ಒಟ್ಟಿಗಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದರು. ಸರ್ಪಭೂಷಣ ಶಿವಯೋಗಿ ಸಂಸ್ಥೆಯಲ್ಲೇ ಲೋಕೇಶ್​ ಉದ್ಯೋಗ ಆರಂಭಿಸಿದರು. ಚೇತನ್​ ಕುಮಾರ್​ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದರೂ ಇಬ್ಬರ ನಡುವೆ ಸ್ನೇಹ ಮುಂದುವರಿದಿತ್ತು. ಸ್ನೇಹಿತನ ಪತ್ನಿ ಅತಂತ್ರವಾಗಬಾರದು ಎಂಬ ಧ್ಯೇಯದಿಂದ ಆಕೆಗೆ ಲೋಕೇಶ್​ ಹೊಸ ಬಾಳು ನೀಡಿದ್ದಾರೆ.
ಲವರ್​ ಜತೆ ಮದ್ವೆ ಆಗ್ಬೇಕು, 18 ವರ್ಷ ಆಗುವರೆಗೂ ನನ್ನನ್ನು ಬಾಲಮಂದಿರದಲ್ಲಿಡಿ… ಠಾಣೆ ಮೆಟ್ಟಿಲೇರಿದ ಪಿಯು ವಿದ್ಯಾರ್ಥಿನಿ

ಮದ್ವೆ ಆಸೆ ಹುಟ್ಟಿಸಿ ದೈಹಿಕ ಸಂಪರ್ಕ ಬೆಳೆಸಿದ, ಕೊನೆಗೆ ಹೇಳಬಾರದ್ದು ಹೇಳಿದ, ಪ್ಲೀಸ್​ ನ್ಯಾಯ ಕೊಡಿಸಿ… ಕಣ್ಣೀರಿಟ್ಟ ಸಂತ್ರಸ್ತೆ

ಅಪ್ರಾಪ್ತ ನಾದಿನಿಯನ್ನ ಲೈಂಗಿಕವಾಗಿ ಬಳಸಿ ವಿಕೃತಿ ಮೆರೆದ ಬಾವ! ಪ್ರಸವಪೂರ್ವ ಹೆರಿಗೆಯಾದ ಮಗು ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 15 =
Remember me
