ಕಲಬುರಗಿ:ಕರೊನಾ ಸೋಂಕಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಅದಕ್ಕೆ ಕಾರಣ ಕಾಂಗ್ರೆಸ್​. ಸೋಂಕು ಹರಡುವಿಕೆ ಮತ್ತು ಸಾವಿಗೂ ಕಾಂಗ್ರೆಸ್ಸೇ ಹೊಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್​ ಕಟೀಲ್​ ಗಂಭೀರ ಆರೋಪ ಮಾಡಿದರು.
ಸುದ್ದಿಗಾರರೊಂದಿಗೆ ಇಂದು(ಶುಕ್ರವಾರ) ಮಾತನಾಡಿದ ನಳೀನ್​ ಕುಮಾರ್​, ಲಸಿಕೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಕುರಿತು ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಸತ್ಯದಿಂದ ಕೂಡಿದೆ. ವ್ಯಾಕ್ಸಿನ್ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನ ಕಾಂಗ್ರೆಸ್ ಮಾಡಿದೆ. ವ್ಯಾಕ್ಸಿನ್ ತಗೊಂಡ್ರೆ ಷಂಡತನ ಬರುತ್ತೆ ಅಂದ್ರು, ಬಿಜೆಪಿ ಲಸಿಕೆ ಅಂದ್ರು, ಮೋದಿ ಲಸಿಕೆ ಅಂದ್ರು. ಕಾಂಗ್ರೆಸ್​ನ ಅಪಹಾಸ್ಯದಿಂದಾಗಿ ಜನ ಭಯಭೀತರಾಗಿ ವ್ಯಾಕ್ಸಿನ್​ನಿಂದ ದೂರ ಉಳಿದರು ಎಂದು ಆಕ್ರೋಶ ಹೊರ ಹಾಕಿದರು.
ಫೆಬ್ರುವರಿಯಲ್ಲಿ ಸ್ವತಃ ಪ್ರಧಾನಿಯವರೇ ಲಸಿಕೆ ತಗೊಂಡು ಜನರಿಗೆ ಪ್ರೇರಣೆ ನೀಡಿದರು. ಆದರೂ ಜನ ಮೇ ವರೆಗೂ ಲಸಿಕೆಗಾಗಿ ಮುಂದೆ ಬರಲಿಲ್ಲ. ಈಗ ಅದೇ ಕಾಂಗ್ರೆಸ್ಸಿಗರು ಲಸಿಕೆ ಇಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ. ಇದು ಕಾಂಗ್ರೆಸ್​ನ ಚಿಲ್ಲರೆ ರಾಜಕಾರಣ. ಇಂತಹದ್ದು ಸರಿಯಲ್ಲ. ಸಿದ್ರಾಮಣ್ಣನೂ ಇದಕ್ಕೆ ಹೊರತಿಲ್ಲ, ಹೈಕಮಾಂಡ್ ಏನು ಮಾಡುತ್ತೋ ಸಿದ್ರಾಮಣ್ಣ ಸಹ ಅದನ್ನೇ ಮಾಡ್ತಾರೆ. ಅಧಿಕಾರಕ್ಕೋಸ್ಕರ ಈ ರೀತಿಯ ವರ್ತನೆಯನ್ನ ಜನ ಸಹಿಸೋದಿಲ್ಲ. ಅದಕ್ಕಾಗಿ ಜನ ಅವರನ್ನು ವರುಣಾ ಕ್ಷೇತ್ರದಿಂದ ಓಡ್ಸಿದ್ದಾರೆ. ಇದೇ ರೀತಿ ಮಾಡಿದ್ರೆ ಬಾದಾಮಿಯಿಂದಲೂ ಓಡಿಸ್ತಾರೆ ಎಂದು ನಳೀನ್ ಕುಮಾರ್​ ಕಟೀಲ್​ ಲೇವಡಿ ಮಾಡಿದರು.
ಇನ್ನೆರಡು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ 24 ವರ್ಷದ ಪಿಎಸ್​ಐ ಕರೊನಾಗೆ ಬಲಿ!

ಪರಸ್ತ್ರೀ ಜತೆ ಯುವಕನ ಸಲ್ಲಾಪ! ಸೆಕ್ಸ್​ ಮಾಡುತ್ತಿರುವಾಗಲೇ ಸಿಕ್ಕಿಬಿದ್ದ ಜೋಡಿ… ಕ್ಷಣಾರ್ಧದಲ್ಲೇ ನಡೆಯಿತು ದುರಂತ

ಕರೊನಾ ಸೋಂಕು ತಡೆಗೆ ಏನು ಮಾಡ್ಬೇಕು? ಗೌರಿಗದ್ದೆಯ ವಿನಯ್ ಗುರೂಜಿ ಕೊಟ್ಟ ಸಲಹೆ ಇಲ್ಲಿದೆ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:1 × three =
Remember me
