ವಿಜಯಪುರ: ವಿಜಯವಾಣಿ ಹಾಗೂ ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆ ಹಾಗೂ ಸಹಯೋಗದಲ್ಲಿ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ತಾಯಿ- ಮಗು ವೇಷ ಭೂಷಣ ಸ್ಪರ್ಧೆ ಜನರ ಗಮನ ಸೆಳೆಯಿತು.
ಒಟ್ಟು 9 ಸ್ಪರ್ಧಾಳುಗಳು ತಮ್ಮ ಮಕ್ಕಳೊಂದಿಗೆ ಭಾಗವಹಿಸಿದ್ದರು. ಉತ್ತರ ಕರ್ನಾಟಕದ ಗ್ರಾಮೀಣ ವೇಷ ಭೂಷಣದಲ್ಲಿ ಗಮನ ಸೆಳೆದ ವಿಜಯಲಕ್ಷ್ಮಿ ಹಂದ್ರಾಳ- ಸುಮಾ ಹಂದ್ರಾಳ (ಪ್ರಥಮ), ಅಯ್ಯಪ್ಪ ಸ್ವಾಮಿ ಸನ್ನಿವೇಶ ಪ್ರದರ್ಶಿಸಿದ ನೇಹಾ ಕಮತಗಿ- ತನುಶ್ರೀ ಕಮತಗಿ (ದ್ವಿತೀಯ) ಹಾಗೂ ರಾಮ-ಕೌಶಲ್ಯ ಪಾತ್ರಧಾರಿಗಳಾದ ಉಮಾಮಹೇಶ್ವರಿ- ಐಶ್ವರ್ಯ ಗಂಟಿ ಅವರು ತೃತೀಯ ಬಹುಮಾನ ಪಡೆದರು.
ಸ್ಪರ್ಧೆಯಲ್ಲಿ ಕಾಳಿಮಾತಾ ವೇಷ ಭೂಷಣ ಗಮನ ಸೆಳೆಯಿತು. ಸ್ಪರ್ಧೆಯ ನಿರ್ಣಾಯಕಿ, ಸ್ವಸ್ತಿ ಡಾನ್ಸ್- ಪಿಟ್ನೆಸ್ ಸಂಸ್ಥೆಯ ಅನುರಾಧಾ ಸುತಾರ ಮಾತನಾಡಿ, ಸ್ಪರ್ಧಾಗಳ ಡೈಲಾಗ್, ಸನ್ನಿವೇಶ, ಆಂಗಿಕ ಭಾಷೆ, ವೇಷ-ಭೂಷಣದ ಪರಿಣಾಮಕಾರಿ ಪ್ರದರ್ಶನ ಗಮನಿಸಿ ವಿಜೇತರನ್ನು ಆಯ್ಕೆ ಮಾಡಲಾಗಿದೆ ಎಂದರು.
ವೇಷ- ಭೂಷಣ ಸ್ಪರ್ಧೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರು ಹಾಗೂ ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿದ ಬಾಲ ಕಲಾವಿದರನ್ನು ಸನ್ಮಾನಿಸಲಾಯಿತು. ಮೈಸೂರು ದಸರಾ ಭರತನಾಟ್ಯ ಕಲಾವಿದೆ ಶ್ರೇಯಾ ಪಾಟೀಲ, ಪ್ರಾಣೇಶ ಪಾಟೀಲ, ಸೃಷ್ಟಿ ಹಂಗರಗಿ ಇತರರಿದ್ದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + twenty =
Remember me
