ವಿಜಯಪುರ:ಇಲ್ಲೊಬ್ಬ ಭೂಪ ಪತ್ನಿ ಮೇಲಿನ ಕೋಪಕ್ಕೆ ಎಗ್​ರೈಸ್​ನಲ್ಲಿ ವಿಷ ಬೆರೆಸಿ ಎರಡೂವರೆ ವರ್ಷದ ಮಗನನ್ನೇ ಕೊಂದಿದ್ದಾನೆ. ಮತ್ತೊಬ್ಬ ಮಗಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಇಂತಹ ಅಮಾನುಷ ಘಟನೆ ತಾಳಿಕೋಟೆ ತಾಲೂಕಿನ ಗೋನಾಳ ಎಸ್​.ಎಚ್​. ಗ್ರಾಮದಲ್ಲಿ ಜೂ.2ರಂದೇ ನಡೆದಿದ್ದು ಜೂ. 6ರಂದು ಪ್ರಕರಣ ದಾಖಲಾಗಿದೆ. ಅದೊಂದು ವಿಚಾರಕ್ಕೆ ಏನೂ ಅರಿಯದ ಪುಟ್ಟ ಕಂದನನ್ನ ಕೊಂದ ಸುದ್ದಿ ಕೇಳಿ ಸ್ಥಳೀಯರೇ ಬೆಚ್ಚಿಬಿದ್ದಿದ್ದಾರೆ. ಮಕ್ಕಳ ದುರಂತ ಸ್ಥಿತಿ ಕಂಡು ತಾಯಿಯ ಆಕ್ರಂದ ಮುಗಿಲು ಮುಟ್ಟಿದೆ.
ಏನಿದು ಘಟನೆ?:ನಿಡಗುಂದಿ ತಾಲೂಕಿನ ಇಟಗಿ ಗ್ರಾಮದ ಚಂದ್ರಶೇಖರ ಶಿವಪ್ಪ ಅರಸನಾಳ ಮತ್ತು ಸಾವಿತ್ರಿ ಅವರ ಮದುವೆ ಕೆಲ ವರ್ಷಗಳ ಹಿಂದೆ ಮದುವೆ ಆಗಿತ್ತು. ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದರು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಗಂಡ ಸಾಲದ ಸುಳಿಗೆ ಸಿಲುಕಿದ್ದ. ಕಳೆದ 2 ತಿಂಗಳ ಹಿಂದೆ ಮಕ್ಕಳನ್ನು ಸಾವಿತ್ರಿ ತನ್ನ ತವರು ಮನೆಗೆ ಬಿಟ್ಟಿದ್ದಳು. ಅತ್ತ ಸಾಲ ತೀರಿಸಲು ಜಮೀನು ಮಾರಬೇಕು ಎಂದು ಚಂದ್ರಶೇಖರ ಒತ್ತಡ ಹಾಕುತ್ತಿದ್ದ. ಇದಕ್ಕೆ ಸಾವಿತ್ರಿ ಒಪ್ಪಿರಲಿಲ್ಲ. ಇದೇ ವಿಚಾರಕ್ಕೆ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಬೇಸತ್ತ ಪತ್ನಿ, ತವರು ಮನೆ ಸೇರಿದ್ದಳು.
ಜೂ.2ರಂದು ಸಾವಿತ್ರಿಯ ತವರು ಮನೆಗೆ ತನ್ನ ಸಹೋದರರೊಂದಿಗೆ ಬಂದ ಚಂದ್ರಶೇಖರ, ಆಸ್ತಿ ಮಾರಲು ಒಪ್ಪಿಗೆ ಕೇಳಿದ್ದಾರೆ. ಆಗಲೂ ಸಾವಿತ್ರಿ ಯಾವುದೇ ಕಾರಣಕ್ಕೂ ಆಸ್ತಿ ಮಾರುವುದಿಲ್ಲ, ಬೇಕಾದರೆ ಎಲ್ಲರೂ ದುಡಿದು ಸಾಲ ತೀರಿಸೋಣ ಎಂದಿದ್ದಾಳೆ. ಬಂದ ದಾರಿಗೆ ಸುಂಕವಿಲ್ಲ ಎಂದು ಸಂಬಂಧಿಕರೆಲ್ಲ ವಾಪಸ್​ ಹಿಂತಿರುಗಿದ್ದಾರೆ. ಆದರೆ ಚಂದ್ರಶೇಖರ ಮಾತ್ರ ಅಲ್ಲಿಯೇ ಉಳಿದುಕೊಂಡಿದ್ದ. ಅಂದು ಸಂಜೆ ಹೋಟೆಲ್​ನಿಂದ ಎಗ್​ರೈಸ್​ ತಂದು ಪತ್ನಿಗೆ ಕೊಟ್ಟಿದ್ದ. ಮನೆ ಕೆಲಸದಲ್ಲಿ ಬಿಜಿಯಾದ ಸಾವಿತ್ರಿ, ಮಕ್ಕಳಿಗೆ ತಿನ್ನಲು ಕೊಟ್ಟಿದ್ದಳು. ಎಗ್​ರೈಸ್​ ತಿನ್ನುತ್ತಿದ್ದಂತೆ ವಾತಿ ಮಾಡಿಕೊಂಡ ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ಮಕ್ಕಳನ್ನು ಆಸ್ಪತ್ರೆಗೆ ಕರೆತರಲಾಯಿತಾದರೂ ಎರಡೂವರೆ ವರ್ಷದ ಮಗ ಶಿವರಾಜ ಕೊನೆಯುಸಿರೆಳೆದ. ಗಂಭೀರ ಸ್ಥಿತಿಯಲ್ಲಿದ್ದ 5 ವರ್ಷದ ಮಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪತ್ನಿಯ ಅನುಮಾನ ನಿಜವಾಯ್ತು:ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತಾಯಿ ಸಾವಿತ್ರಿ, ಜೂ.3ರಂದೇ ಮಗನ ಸಾವಿನಲ್ಲಿ ಸಂಶಯವಿದೆ ಎಂದು ದೂರು ನೀಡಿದ್ದಳು. ವಿಜಯಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗಳನ್ನು ನೋಡಿಕೊಳ್ಳಲು ತಂದೆಯನ್ನು ಬಿಟ್ಟು ಆಸ್ಪತ್ರೆಯ ವೆಚ್ಚ ಭರಿಸಲು ಹಣಕ್ಕಾಗಿ ಸಾವಿತ್ರಿ ತವರೂರು ಗೋನಾಳಕ್ಕೆ ಹೋಗಿದ್ದಳು. ಆ ವೇಳೆ ಮನೆಗೆ ಬಂದ ಚಂದ್ರಶೇಖರ, ಸಾಲಕ್ಕೆ ಅಂಜಿ ಸಾಯಲು ನಿರ್ಧರಿಸಿದೆ. ಅದಕ್ಕಾಗಿ ಎಲ್ಲರೂ ಒಟ್ಟಿಗೆ ಸಾಯಲೆಂದು ಎಗ್​ರೈಸ್​ನಲ್ಲಿ ವಿಷ ಬೆರೆಸಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಜೂ.6ರಂದು ತಾಳಿಕೋಟೆ ಠಾಣೆಯಲ್ಲಿ ಚಂದ್ರಶೇಖರ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ.
ಪತ್ನಿಗೆ PSI ಕಿರುಕುಳ: ಬೇರೆ ಸ್ತ್ರೀಯರ ಜತೆ ನನ್ನ ಗಂಡನಿಗೆ ಸಂಪರ್ಕ ಇದೆ, ದಯವಿಟ್ಟು​ ನನಗೆ ನ್ಯಾಯ ಕೊಡ್ಸಿ… ಕಣ್ಣೀರಿಟ್ಟ ಪತ್ನಿ

ಪೊಲೀಸ್​ ಠಾಣೆ ಮೆಟ್ಟಿಲೇರಿದ ನಟಿ ರಮ್ಯಾ! ಆರೋಪಿ ಬಂಧನಕ್ಕೆ ಪಟ್ಟು

ಜೆಡಿಎಸ್​ -ಕಾಂಗ್ರೆಸ್​ನ ಘಟಾನುಘಟಿಗಳಿಗೆ ಕೋಟಿ-ಕೋಟಿ ಸಾಲ ಕೊಟ್ಟ ಕುಪೇಂದ್ರರೆಡ್ಡಿ! ದೇವೇಗೌಡರ ಕುಟುಂಬಕ್ಕೂ ಸಾಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
