ಬೆಂಗಳೂರು:ಸಮಗ್ರ ಕೃಷಿ ಪದ್ಧತಿಯಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ರೈತರು ತಮ್ಮ ಆದಾಯವನ್ನು ದುಪ್ಪಟ್ಟು ಅಲ್ಲ, ಹತ್ತು ಪಟ್ಟು ವೃದ್ಧಿಸಿಕೊಳ್ಳಬಹುದು. ಅದರಲ್ಲೂ ಸಾವಯವ ಪದ್ಧತಿಯಲ್ಲಿ ಬೆಳೆದ ಬೆಳೆಗಳಿಗೆ ನಾಡಿನಾಚೆಗೂ ಮಾರುಕಟ್ಟೆ ಇರುವುದರಿಂದ ಜಮೀನಿಗೆ ಹಾಕಿದ ಬಂಡವಾಳ ಕೆಲವೇ ವರ್ಷಗಳಲ್ಲಿ ದೊಡ್ಡ ಇಡಗಂಟಾಗಿ ಕೈಸೇರುವುದು ಖಚಿತ.
ಅನನ್ಯ ಪ್ರೀತಿ, ಶ್ರದ್ಧೆ, ಪರಿಶ್ರಮದಿಂದಾಗಿ ಬಂಗಾರದ ಬೆಳೆ ಬೆಳೆಯುತ್ತಿರುವ ತುಮಕೂರು ಜಿಲ್ಲೆಯ ಮಷಣಾಪುರದ ಪ್ರಗತಿಪರ ರೈತ ಎಂ.ಎಸ್​.ಮೃತ್ಯುಂಜಯ ಅವರು ಇಂತಹ ಮಾತುಗಳನ್ನು ನಿಜವಾಗಿಸುವ ಸಾಧನೆ ಮಾಡಿದ್ದಾರೆ.

ತಮ್ಮ ಜಮೀನನ್ನೇ ಕರ್ಮಭೂಮಿಯನ್ನಾಗಿಸಿಕೊಂಡಿರುವ ಇವರು ತೋಟದ ಮನೆಯಲ್ಲೇ ವಾಸವಿದ್ದಾರೆ. ಇಡೀ ದಿನ ಗಿಡಗಳ ಆರೈಕೆಗೆ ಅಧಿಕ ಸಮಯ ಮೀಸಲಿಡುತ್ತಾರೆ. ದೂರದ ಪ್ರದೇಶಗಳಿಂದ ತಂದು ನೆಟ್ಟಿರುವ ಗಿಡಗಳ ಬೆಳವಣಿಗೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ. ಕೃಷಿ ತಜ್ಞರು ನೀಡುವ ಸಲಹೆಗಳನ್ನು ಪಾಲಿಸುವ ಜತೆಗೆ ಸರ್ಕಾರದ ವಿವಿಧ ಸಬ್ಸಿಡಿ ಕಾರ್ಯಕ್ರಮಗಳ ಪ್ರಯೋಜನ ಪಡೆದು ಕೃಷಿ ಮುಂದುವರಿಸಿದ್ದಾರೆ. ತೋಟದಲ್ಲೇ ಬೆಳೆಸಿದ ಗಿಡಗಳಿಂದ ಕಸಿ ಮಾಡಿ ಮಾರಾಟ ಮಾಡಲು ನರ್ಸರಿ ಆರಂಭಿಸಿದ್ದಾರೆ. ಜೇನುಕೃಷಿ, ನಾಯಿಮರಿ ಸಾಕಣೆ, ಅಲಂಕಾರಿಕ ಪಕ್ಷಗಳನ್ನು ಸಾಕಿ ಅದರಿಂದಲೂ ಆದಾಯದ ಮಾರ್ಗ ಕಂಡುಕೊಂಡಿದ್ದಾರೆ. ಇವರ ತೋಟದ ವೈಶಿಷ್ಟ್ಯವೆಂದರೆ ಅಡಿಗಡಿಗೂ ವೈವಿಧ್ಯಮಯ ಗಿಡಗಳು ಸೊಂಪಾಗಿ ಬೆಳೆದು ಅರಣ್ಯ ಹೊಕ್ಕಿ ಬಂದ ಅನುಭವ ನೀಡುತ್ತದೆ.



ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven − 4 =
Remember me
