ಹೊಸಕೋಟೆ:ನೀರು ಬರಬೇಕಿದ್ದ ಕೊಳವೆ ಬಾಯಿಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದೆ. ಅಪ್ಪಿತಪ್ಪಿ ಈ ನೀರನ್ನೇನಾದರೂ ಕೃಷಿಗೆ ಬಳಸಿದರೆ ಸುಟ್ಟುಹೋಗುತ್ತವೆ!
ಹೌದು, ಇಂತಹದ್ದೊಂದು ಸಮಸ್ಯೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ದೇವನಗುಂಡಿ ಗ್ರಾಮದ ರೈತರ ಕೊಳವೆ ಬಾವಿಗಳಲ್ಲಿ ವಿಪರೀತವಾಗಿ ಕಾಡುತ್ತಿದೆ. ವಿಷಪೂರಿತ ನೀರಿನಿಂದಾಗುತ್ತಿರುವ ತೊಂದರೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ರೈತರು ಅಳಲು ತೋಡಿಕೊಂಡಿದ್ದರೂ ಪರಿಹಾರ ಸಿಕ್ಕಿಲ್ಲ.
ಇದನ್ನೂ ಓದಿರಿಸೋಂಕಿತಳ ಜತೆ ವೈದ್ಯರ ಹೆಸರು ತಳುಕು ಹಾಕಿದ ವಕೀಲರ ವಿರುದ್ಧ ಎಫ್​ಐಆರ್​!
ದೇವನಗುಂಡಿ ಬಳಿ ಆಯಿಲ್ ಕಂಪನಿಗಳಿದ್ದು, ಅಲ್ಲಿನ ವೇಸ್ಟೇಜ್ ಮಳೆಗಾಲದಲ್ಲಿ ಸಮೀಪದ ಬಾವಿಗಳಿಗೆ ಹರಿದು ಬರುತ್ತಿತ್ತು. ಈಗ ​ನಿರುಪಯುಕ್ತ ಕೊಳವೆಬಾವಿಗಳಿಗೆ ಕಂಪನಿಯವರು ಬಿಡುತ್ತಿದ್ದಾರೆ. ಪರಿಣಾಮ ಪಕ್ಕದಲ್ಲಿರುವ ರೈತರ ಜಮೀನುಗಳ ಕೊಳವೆಬಾವಿಯಲ್ಲಿ ಅನಿಲ ಮಿಶ್ರಿತ ನೀರು ಬರುತ್ತಿದ್ದು, ಬೆಂಕಿ ಹೊತ್ತಿಕೊಳ್ಳುತ್ತಿದೆ ಎಂಬ ಆರೋಪ ರೈತರದ್ದು.
ಆಯಿಲ್​ ಕಂಪನಿಗಳು ನಿರುಪಯುಕ್ತ ಕೊಳವೆಬಾವಿಗಳಿಗೆ ಹರಿಸುತ್ತಿರುವ ವೇಸ್ಟೇಜ್​ ಅಂತರ್ಜಲ ಸೇರುತ್ತಿದ್ದು, ನೀರು ವಿಷಕಾರಿಯಾಗುತ್ತಿದೆ. ಅಕ್ಕಪಕ್ಕದ ಕೊಳವೆಬಾವಿಗಳಲ್ಲೂ ಅನಿಲ ಮಿಶ್ರಿತ ನೀರು ಬರುತ್ತಿದ್ದು, ಕೃಷಿ ಮಾಡಲು ಆಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ರೋಗದ ಭೀತಿಯೂ ಕಾಡುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ನೋಡಿ…
https://www.facebook.com/VVani4U/videos/1094560647584350/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + thirteen =
Remember me
