ಅಂಕೋಲಾ:ಉತ್ತರಕನ್ನಡ ಜಿಲ್ಲೆಯಲ್ಲಿ ಗಂಗಾವಳಿ, ಕಾಳಿ ನದಿ ಉಕ್ಕಿ ಹರಿಯುತ್ತಿದ್ದು, ಶಿರೂರು, ಬೆಳ್ಸೆ ಕೂರ್ವೆ, ಕೊಡ್ಸಣಿ ಸೇರಿದಂತೆ ಹಲವು ಗ್ರಾಮ ಸಂಪೂರ್ಣ ಮುಳುಗಡೆ‌ಯಾಗಿದೆ. ಮನೆಗೆ ನೀರು ತುಂಬಿದ ಕಾರಣ ಸುರಕ್ಷಿತ ಸ್ಥಳಕ್ಕೆ ತೆರಳುವ ವೇಳೆ ದೋಣಿ ಮಗುಚಿ ನಾಪತ್ತೆಯಾದ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಶಿರೂರು ಗ್ರಾಮದ ಮಹಿಳೆ ಬೀರುಮಾರುಗೌಡ(67) ಹಾಗೂ ಗಂಗಾಧರ ದೇವುಗೌಡ(33) ನಾಪತ್ತೆಯಾದವರು. ಧಾರವಾಡ, ಶಿರಸಿ, ಯಲ್ಲಾಪುರ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಪರಿಣಾಮ ಗಂಗಾವಳಿ ನದಿ‌ಯಲ್ಲಿ ಪ್ರವಾಹ ಬಂದಿದೆ.

ಮನೆಗೆ ನೀರು ತುಂಬಿದ ಕಾರಣ ಸುರಕ್ಷಿತ ಸ್ಥಳಕ್ಕೆ ಜನ-ಜಾನುವಾರು ಸ್ಥಳಾಂತರ ಮಾಡುವ ವೇಳೆ ಅವಘಡ ಸಂಭವಿಸಿದೆ. ನದಿಯ ಇಕ್ಕೆಲದ 7 ಗ್ರಾಮಗಳು ಜಲಾವೃತವಾಗಿವೆ. 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಇತ್ತ ಕಾಳಿ ನದಿಯಲ್ಲೂ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಭವಿಷ್ಯ ಕಟ್ಟಿಕೊಳ್ಳಲು ಹುಟ್ಟೂರು ಬಿಟ್ಟು ಬಂದಿದ್ದ ಅಣ್ಣ-ತಂಗಿ ನಿದ್ರೆಯಲ್ಲಿರುವಾಗಲೇ ಹೆಣವಾದರು!

ರಸ್ತೆಯನ್ನೇ ಸೀಳಿಕೊಂಡು ಹರಿಯುತ್ತಿದೆ ಮಳೆ ನೀರು.. ಖಾನಾಪುರದಲ್ಲಿ ಬದುಕು ಮೂರಾಬಟ್ಟೆ…

ಅಂಕೋಲಾದಲ್ಲಿ ಪ್ರವಾಹ: ನೀರಲ್ಲಿ ಮುಳುಗುತ್ತಿದೆ ಹೋಟೆಲ್​… ಪ್ಲೀಸ್ ಯಾರಾದ್ರೂ ನಮ್ಮನ್ನು ಸ್ಥಳಾಂತರಿಸಿ

ನಡುರಸ್ತೆಯಲ್ಲೇ ಜಲದಿಗ್ಬಂಧನ! ಕುಡಿವ ನೀರು-ಊಟ ಇಲ್ಲದೆ 30ಕ್ಕೂ ಹೆಚ್ಚು ಮಂದಿ ಪರದಾಟ

Sign in to your account
Please enter an answer in digits:20 − seventeen =
Remember me
