ಬೆಂಗಳೂರು:ಸುಮನಹಳ್ಳಿ ಚಿತಾಗಾರದ ಮುಂದೆ ಕರೊನಾ ವಾರಿಯರ್ಸ್​ ಬಿಕ್ಕಿಬಿಕ್ಕಿ ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ರಾತ್ರಿ 10 ಗಂಟೆಯಿಂದ ಸುಮನಹಳ್ಳಿ ಚಿತಾಗಾರದ ಬಳಿ ತಾಯಿ ಲಕ್ಷ್ಮೀ(58) ಅವರ ಶವ ಇಟ್ಟುಕೊಂಡು ಕಾದರೂ ಅಂತ್ಯ ಸಂಸ್ಕಾರ ಆಗಿದ್ದು ಬೆಳಗ್ಗೆ 7.30. ಈ ವೇಳೆ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ ಮೃತಳ ಪುತ್ರ, ಕರೊನಾ ಸೋಂಕು ತಗುಲಿದ ನನ್ನ ತಾಯಿಗೆ ಚಿಕಿತ್ಸೆ ಕೊಡಿಸಲು 100ಕ್ಕೂ ಹೆಚ್ಚು ಆಸ್ಪತ್ರೆಗೆ ಅಲೆದರೂ ಬೆಡ್ ಸಿಗಲಿಲ್ಲ. ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಕಾಲಿಗೆ ಬಿದ್ರೂ ಬೆಡ್ ಕೊಡಲಿಲ್ಲ. ಕೊನೆಗೆ ವಿಜಯನಗರ ಮಾರುತಿ ಆಸ್ಪತ್ರೆಗೆ ದಾಖಲಿಸಿದೆ. ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೆ ನನ್ನ ತಾಯಿ ನಿನ್ನೆಕೊನೆಯುಸಿರೆಳೆದರು. ಒಂದೇ ದಿನಕ್ಕೆ ಆಸ್ಪತ್ರೆಯವರು 1.14 ಲಕ್ಷ ರೂಪಾಯಿ ಬಿಲ್ ಮಾಡಿದ್ದಾರೆ ಎಂದು ಬಿಕ್ಕಿಬಿಕ್ಕಿ ಅತ್ತರು. ಮೃತಪಟ್ಟ ಮಹಿಳೆಯ ಗಂಡ ಮತ್ತು ಮಗ ಇಬ್ಬರೂ ಪೊಲೀಸ್​ ಸಿಬ್ಬಂದಿ.
ಲಕ್ಷ್ಮೀಯ ಅಂತ್ಯಸಂಸ್ಕಾರ ಮಾಡಲು ಬುಧವಾರ ರಾತ್ರಿ 10 ಗಂಟೆಯಿಂದ ಸುಮನಹಳ್ಳಿ ಚಿತಾಗಾರದ ಬಳಿ ಪೊಲೀಸ್ ಸಿಬ್ಬಂದಿಯಾದ ತಂದೆ-ಮಗ ಇಬ್ಬರೂ ಕಾದಿದ್ದಾರೆ. ತಾಯಿ ಕಳೆದುಕೊಂಡು ಪೊಲೀಸ್ ಸಿಬ್ಬಂದಿ, ಆಂಬುಲೆನ್ಸ್ ತಬ್ಬಿ ಕಣ್ಣೀರು ಹಾಕಿದರು. ಕೊನೆಗೆ ಅಂತ್ಯಸಂಸ್ಕಾರ ಗುರುವಾರ ಬೆಳಗ್ಗೆ 7.30ಕ್ಕೆ ನಡೆದಿದೆ.
ಮೃತರ ಸಂಬಂಧಿ ಅನಿಲ್ ಕುಮಾರ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಕರೊನಾ ವಾರಿಯರ್ಸ್ ಅಂತಾರೆ, ಅವರಿಗೇ ಈ ಗತಿ ಬಂದಿದೆ. ಸರ್ಕಾರಕ್ಕೆ ನಿಜವಾಗಿ ನಾಚಿಕೆಯಾಗಬೇಕು. ಎಷ್ಟೇ ಅಲೆದರೂ ಒಂದು ವೆಂಟಿಲೇಟರ್ ಬೆಡ್ ಸಿಗಲಿಲ್ಲ. ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದರು. ಮೃತರ ಪತಿ ನಿವೃತ್ತ ಪೊಲೀಸ್ ಸಿಬ್ಬಂದಿ, ಮಗ ಹಲಸೂರು ಗೇಟ್ ಪೊಲೀಸ್​ ಠಾಣಾ ಸಿಬ್ಬಂದಿ.
ರಾಜ್ಯದಲ್ಲಿ ಕರೊನಾ ಕಂಟ್ರೋಲ್ ತಪ್ಪಿದೆ, ಕೈಮುಗಿಯುವೆ ಮನೆಯಿಂದ ಯಾರೂ ಹೊರ ಬರಬೇಡಿ: ಯಡಿಯೂರಪ್ಪ

ಆಕ್ಸಿಜನ್​ ಸೋರಿಕೆ: ಕೋವಿಡ್​ ವಾರ್ಡ್​ನಲ್ಲಿ 22 ಮಂದಿ ದುರಂತ ಸಾವು

ಹಾಡಹಗಲೇ ಫ್ಯಾನ್ಸಿ ಸ್ಟೋರ್​ಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ, ಬೆಚ್ಚಿಬಿದ್ದ ಸ್ಥಳೀಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 1 =
Remember me
