ಕೊಳ್ಳೇಗಾಲ:ಅನಾರೋಗ್ಯವನ್ನೇ ಬಂಡವಾಳ ಮಾಡಿಕೊಂಡ ಮಂತ್ರವಾದಿಯೊಬ್ಬ ಮಹಿಳೆಯ ಹಣೆಗೆ ಕಪ್ಪಿಟ್ಟು ಲಕ್ಷಾಂತರ ಹಣ ಮತ್ತು ಚಿನ್ನಾಭಾರಣ ದೋಚಿದ್ದಾನೆ.
ಇಂತಹ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ನಡೆದಿದೆ. ಮಂತ್ರವಾದಿ ಮಾತು ನಂಬಿ ಮೋಸ ಹೋದಾಕೆ ಹೆಸರು ಭವ್ಯ. ಭವ್ಯಾ ಅವರಿಗೆ ಇತ್ತೀಚಿಗೆ ಅನಾರೋಗ್ಯ ತೀವ್ರವಾಗಿ ಕಾಡುತ್ತಿದೆ. ಈ ಬಗ್ಗೆ ಜಿನಕನಹಳ್ಳಿ ಗ್ರಾಮದ ಮಂತ್ರವಾದಿ ಮಹದೇವಸ್ವಾಮಿ ಎಂಬಾತನ ಬಳಿ ಭವ್ಯ ಅಳಲು ತೋಡಿಕೊಂಡಿದ್ದಾರೆ. ಯಾರೋ ಮಾಟ-ಮಂತ್ರ ಮಾಡಿಸಿದ್ದಾರೆ. ಪೂಜೆ ಮಾಡಿಸಿದರೆ ಎಲ್ಲವೂ ಸರಿ ಹೋಗಲಿದೆ ಎಂದು ನಂಬಿಸಿದ್ದಾನೆ.
ಮಂತ್ರವಾದಿಯ ಮಾತು ನಂಬಿದ ಭವ್ಯಾ ಪೂಜೆ ಮಾಡಿಸಲು ಒಪ್ಪಿದ್ದಾರೆ. ಅದರಂತೆ 2021ರ ಆಗಸ್ಟ್ 9ರ ರಾತ್ರಿ ಭವ್ಯಾರ ಮನೆಗೆ ಬಂದ ಮಂತ್ರವಾದಿ ಕುಡಿಕೆ ಇಟ್ಟು ಪೂಜೆ ಮಾಡಬೇಕಿದೆ ಇದರಲ್ಲಿ ಒಡವೆ, ನಗದು ಇಡುವಂತೆ ಸೂಚಿಸಿದ್ದಾನೆ. ಭವ್ಯಾ ಮನೆಯಲ್ಲಿದ್ದ 2 ಲಕ್ಷ ರೂ‌. ಮೌಲ್ಯದ ಚಿನ್ನಾಭರಣ ಮತ್ತು 2.5 ಲಕ್ಷ ರೂ. ನಗದು ಇಟ್ಟಿದ್ದಾರೆ. ಪೂಜೆ ಮಾಡುತ್ತಲೇ ಭವ್ಯಾರ ಹಣೆ ಮಂತ್ರವಾದಿ ಕಪ್ಪಿಟ್ಟಿದ್ದೇ ತಡ ಅವರು ಮೂರ್ಛೆ ಹೋಗಿದ್ದಾರೆ. ಬಳಿಕ ಕುಡಿಕೆಯಲ್ಲಿದ್ದ ಚಿನ್ನ ಮತ್ತು ಹಣ ಲಪಟಾಯಿಸಿ ಮಂತ್ರವಾದಿ ಎಸ್ಕೇಪ್​ ಆಗಿದ್ದ.
ಹಣ-ಚಿನ್ನ ಕಳೆದುಕೊಂಡ ಮಹಿಳೆ ಕಳೆದ ಜ.1ರಂದು ಕೊಳ್ಳೇಗಾಲ ಪಟ್ಟಣ ಪೊಲೀಸ್​ ಠಾಣೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ವಿದೇಶದಲ್ಲಿರುವೆ, ಬೆಂಗಳೂರಿಗೆ ಬಂದು ಮದ್ವೆ ಆಗ್ತೀನಿ… ಎಂದು ಯುವತಿಗೆ ಆಸೆ ಹುಟ್ಟಿಸಿದವ ಮಾಡಬಾರದು ಮಾಡಿಬಿಟ್ಟ

ಚಿಕ್ಕಮ್ಮನ ಜತೆ ಮಗನ ಲವ್ವಿಡವ್ವಿ! ಕಲಬುರಗಿಯಲ್ಲಿ ನಡೆದೇ ಹೋಯ್ತು ಘೋರ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
