ಕೋಲಾರ:ಸರ್ಕಾರಿ ಭೂಮಿ ಕಬಳಿಸಲು ಹೊಂಚು ಹಾಕಿದ ಖತರ್ನಾಕ್​ ಕಳ್ಳರು ಕೋಲಾರ ಜಿಲ್ಲಾಧಿಕಾರಿ ಅವರ ಸಹಿಯನ್ನೇ ನಕಲು ಮಾಡಿ ಸರ್ಕಾರಿ ಖರಾಬು ಕಟ್ಟೆ ಜಮೀನನ್ನು ಕಾರ್ಖಾನೆಗಾಗಿ ಲಪಟಾಯಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದೆ.
ಕೋಲಾರ ತಾಲೂಕಿನ ಆಲಹಳ್ಳಿಯ ಸರ್ವೇ ನಂ.127ರಲ್ಲಿ 3 ಎಕರೆ 23 ಗುಂಟೆ ಸರ್ಕಾರಿ ಖರಾಬು ಕಟ್ಟೆ ಜಮೀನಿದೆ. ಇದನ್ನು ಮಧ್ಯವರ್ತಿಗಳು ಮತ್ತು ತಾಲೂಕು ಕಚೇರಿ ಸಿಬ್ಬಂದಿ ಸೇರಿ ಕಬಳಿಸಿ ಸನ್​ಲಾರ್ಜ್​ ಪ್ರೈವೇಟ್​ ಲಿಮಿಟೆಡ್​ ಕಾರ್ಖಾನೆಗೆ ಹಸ್ತಾಂತರಿಸಲು ಯತ್ನಿಸಲಾಗಿದೆ. ಜಮೀನು ಮಂಜೂರು ಮಾಡುವ ಹಂತದಲ್ಲಿ ತಹಸೀಲ್ದಾರ್​ ನಾಗರಾಜ್​ ಅವರು ಜಿಲ್ಲಾಧಿಕಾರಿ ಅವರ ಸಹಿ ನಕಲಿ ಎಂಬುದನ್ನು ಪತ್ತೆ ಮಾಡಿದ್ದರಿಂದ, ಪ್ರಕರಣ ಬಹಿರಂಗವಾಗಿದೆ.
ಆಲಹಳ್ಳಿಯಲ್ಲಿ 15 ಎಕರೆ ಜಮೀನನ್ನು ರೈತರಿಂದ ಖರೀದಿಸಿರುವ ಸನ್​ಲಾರ್ಜ್​ ಕಾರ್ಖಾನೆ ತನ್ನ ಘಟಕ ಸ್ಥಾಪಿಸಿದೆ. ಆದರೆ ಈ ಜಮೀನಿನ ಮಧ್ಯೆ ಸರ್ಕಾರಿ ಖರಾಬು ಕಟ್ಟೆ ಜಮೀನಿದ್ದು, ಇದು ಲ್ಯಾಂಡ್​ ಲಾಕ್ಡ್​ ಜಮೀನಾಗಿದೆ. ಈ ಜಾಗವನ್ನು ತಮಗೆ ಕೊಡುವಂತೆ ಕಾರ್ಖಾನೆ ಆಡಳಿತ ಮಂಡಳಿ ಸಲ್ಲಿಸಿದ್ದ ಕಾರ್ಖಾನೆಯ ಮನವಿಯನ್ನು ಈ ಹಿಂದಿನ ಜಿಲ್ಲಾಧಿಕಾರಿ ಸೆಲ್ವಮಣಿ ತಿರಸ್ಕರಿಸಿದ್ದರು. ಆದರೆ ಕಾರ್ಖಾನೆ ಮತ್ತೆ ಮನವಿ ಮಾಡಿಕೊಂಡಾಗ ಸರ್ವೇ ಅಧಿಕಾರಿಗಳಿಂದ ಸರ್ವೇ ಮಾಡಿಸಿ, ವರದಿ ತರಿಸಿಕೊಂಡು ಪರಿಶೀಲಿಸಿ ಮನವಿ ತಿರಸ್ಕರಿಸಲಾಗಿದೆ ಎಂದು ತಾಲೂಕು ಕಚೇರಿಗೆ ಪತ್ರ ಸಂಖ್ಯೆ 69/22ರಲ್ಲಿ ಸೆಲ್ವಮಣಿ ತಿಳಿಸಿದ್ದರು.
ಆದರೆ ಜಿಲ್ಲಾಧಿಕಾರಿ ವೆಂಕಟ್​ರಾಜಾ ಅವರು ಬಂದ ನಂತರ ಜಮೀನು ಮಂಜೂರು ಮಾಡಲು ಪರಿಶೀಲಿಸಿದ ರೀತಿಯಲ್ಲಿ ಪತ್ರ ತಯಾರಿಸಿ, ಜಿಲ್ಲಾಧಿಕಾರಿ ಅವರ ನಕಲಿ ಸಹಿ ಹಾಕಿ ಫೆಬ್ರವರಿಯಲ್ಲಿ ತಹಸೀಲ್ದಾರ್​ ಅವರಿಗೆ ಕಡತವನ್ನು ಸಲ್ಲಿಸಲಾಗಿತ್ತು. ಕಡತ ಪರಿಶೀಲಿಸಿದ ತಹಸೀಲ್ದಾರ್​ ನಾಗರಾಜ್​ ಅವರಿಗೆ ಜಿಲ್ಲಾಧಿಕಾರಿಯ ಸಹಿ ಬಗ್ಗೆ ಅನುಮಾನ ಮೂಡಿತ್ತು. ತಕ್ಷಣವೇ ಅವರು ಈ ವಿಷಯವನ್ನು ಜಿಲ್ಲಾಧಿಕಾರಿ ವೆಂಕಟ್​ರಾಜಾ ಮತ್ತು ಎಸ್​ಪಿ ಡಿ. ದೇವರಾಜ ಅವರ ಗಮನಕ್ಕೆ ತಂದರು ಎನ್ನಲಾಗಿದೆ.
ಹೆಂಡ್ತಿ ಬಂದ್ಲು, ಗಂಡ ಹೋದ! ಕಾಡಿಬೇಡಿ ಪತ್ನಿಯನ್ನು ತವರಿಂದ ಕರೆತಂದವ ಮರುದಿನ ಹೀಗಾ ಮಾಡ್ಹೋದು?

ಮದ್ವೆಯಾಗಿ ಇಬ್ಬರು ಮಕ್ಕಳಿದ್ರೂ 21 ವರ್ಷದ ಅರ್ಚಕನ ಜತೆ 35ರ ಮಹಿಳೆ ಪರಾರಿ! ಮಧ್ಯರಾತ್ರಿ ಕಾಡಲ್ಲಿ ಈಕೆ ಪಟ್ಟ ಪಾಡು ಅಷ್ಟಿಷ್ಟಲ್ಲ

ಕಂಠದಲ್ಲಿ ಶ್ರೀಕೃಷ್ಣ! ಗಂಟಲು ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿಗೆ ಕಾದಿತ್ತು ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
