ಬ್ಯಾಕೋಡು:ಮಣಿಪಾಲ ಆಸ್ಪತ್ರೆಯಲ್ಲಿ ಸಾಗರ ತಾಲೂಕಿನ ಶರಾವತಿ ಕಣಿವೆಯ ದಾರಿಗದ್ದೆಯ ಅತಿಥಿ ಶಿಕ್ಷಕಿಯೊಬ್ಬರಿಗೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಶುಕ್ರವಾರ ಯಶಸ್ವಿಯಾಗಿದೆ. ಶಿಕ್ಷಕಿಗೇ ಅವರ ತಾಯಿಯೇ ಕಿಡ್ನಿದಾನ ಮಾಡಿದ್ದಾರೆ.
ವಿಜಯಾ ಜೈನ್ ದಾರಿಗದ್ದೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರಿಗೆ 2 ವರ್ಷಗಳ ಹಿಂದೆ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿತ್ತು. ಎರಡು ಕಿಡ್ನಿ ವೈಫಲ್ಯವಾಗಿರುವುದು ಪರೀಕ್ಷೆಗಳಿಂದ ದೃಢಪಟ್ಟಿತ್ತು. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಕಿಡ್ನಿ ಜೋಡಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ತುಮರಿ ಗ್ರಾಪಂ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಮತ್ತು ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಹಣಕಾಸಿನ ನೆರವಿಗೆ ‘ನಾವು ಜತೆ ಇದ್ದೇವೆ’ ಅಭಿಯಾನ ಆರಂಭಿಸಿದ್ದರು. ಈ ಕುರಿತು ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿ ಅಭಿಯಾನಕ್ಕೆ ಬೆಂಬಲ ನೀಡಿತ್ತು. ಅಭಿಯಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿ, ರಾಜ್ಯ ಹೊರರಾಜ್ಯಗಳಿಂದ ಮಾತ್ರವಲ್ಲದೇ ವಿದೇಶದಿಂದಲೂ ದಾನಿಗಳು ಹಣಕಾಸು ಬೆಂಬಲ ನೀಡಿದ್ದು 10 ದಿನದಲ್ಲಿ 16 ಲಕ್ಷ ರೂ. ಸಂಗ್ರಹವಾಗಿತ್ತು. ಮಗಳಿಗೆ ತಾಯಿ ಮಣಿರತ್ನ ಅವರೇ ಒಂದು ಕಿಡ್ನಿಯನ್ನು ದಾನ ಮಾಡಿದರು.
ಶಸ್ತ್ರಚಿಕಿತ್ಸೆಗೂ ತೆರಳುವ ಮುನ್ನ ಮಾತನಾಡಿದ ವಿಜಯಾ ಜೈನ್, ಬದುಕು ಮುಕ್ತಾಯ ಎಂದು ಭಾವಿಸಬೇಕಾದ ಹೊತ್ತಿನಲ್ಲಿ ಅಭಿಯಾನ ಮೂಲಕ ಹಣಕಾಸು ನೆರವು ಹರಿದು ಬಂದಿದೆ, ಆತ್ಮವಿಶ್ವಾಸ ಹೆಚ್ಚಿದೆ. ಅಭಿಯಾನ ಬೆಂಬಲಿಸಿದವಿಜಯವಾಣಿಮತ್ತು ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದರು. ಕಿಡ್ನಿ ವರ್ಗಾವಣೆ ಶಸ್ತ್ರಚಿಕಿತ್ಸೆ ಶುಕ್ರವಾರ ಮಣಿಪಾಲ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕುಣಿಗಲ್​ನಲ್ಲಿ 6 ತಿಂಗಳ ಹಿಂದೆ ಪತ್ತೆಯಾಗಿದ್ದ ಬೈಕ್​ನ ಹಿಂದಿದೆ ದುರಂತ ಪ್ರೇಮಕತೆ! ಯುವಕ-ಯುವತಿ-ತಾಯಿ… ಒಬ್ಬರ ಹಿಂದೆ ಒಬ್ಬರ ಸಾವು

ನನ್ನ ಬದಲು ರೇವಣ್ಣಗೆ ಟಿಕೆಟ್​ ನೀಡಿ… ಡಿಕೆಶಿಗೆ ಪತ್ರ ಬರೆದ ಬಾಲಕೃಷ್ಣ! ಕೈ ಹಿಡಿದರೂ ಅವರ ಸಂಬಂಧ ಗಟ್ಟಿ ಆಗಲೇ ಇಲ್ಲ

ಭಾರತ ಕಬಡ್ಡಿ ತಂಡದ ಮಾಜಿ ಆಟಗಾರ, ಏಕಲವ್ಯ ಪ್ರಶಸ್ತಿ ವಿಜೇತ ಉದಯ ಚೌಟ ಇನ್ನಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 8 =
Remember me
