| ಗುರುಪ್ರಸಾದ್ ತುಂಬಸೋಗೆಮೈಸೂರುಎಲ್ಲೆಡೆ ಉಷ್ಣಮಾರುತದ ಅಬ್ಬರ ಮುಂದುವರಿದಿದ್ದು, ತೀವ್ರ ಬಿಸಿಲು, ಸೆಖೆ ಜನರನ್ನು ಹೈರಾಣ ಮಾಡಿದೆ. ಆದರೆ ಉತ್ತಮ ಮಳೆ ಸುರಿದಿರುವುದರಿಂದ ಹಳೇ ಮೈಸೂರು ಭಾಗದ ಅರಣ್ಯಗಳಿಗೆ ಬೆಂಕಿ ಆತಂಕ ದೂರವಾಗಿದ್ದು, ವನ್ಯಜೀವಿಗಳಿಗೆ ನೆಮ್ಮದಿ ತಂದಿದೆ.
ಪ್ರತಿವರ್ಷ ತೀವ್ರವಾಗಿ ಬೆಂಕಿ ಆತಂಕ ಎದುರಿಸುವ ಬಂಡೀಪುರ, ನಾಗರಹೊಳೆ, ಬಿಆರ್‌ಟಿ ಮತ್ತು ಮಲೆಮಹದೇಶ್ವರ ವನ್ಯಜೀವಿಧಾಮಗಳ ವ್ಯಾಪ್ತಿಯಲ್ಲಿ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದು, ಹಲವೆಡೆ ಹಸಿರು ಕಂಗೊಳಿಸುತ್ತಿದೆ. ಕಾಡುಗಳಲ್ಲಿ ಆನೆ, ಜಿಂಕೆ, ಕಾಟಿ, ಕಡವೆಯಂಥ ಪ್ರಾಣಿಗಳು ಗುಂಪುಗುಂಪಾಗಿ ಮೇಯುವ ದೃಶ್ಯ ಕಣ್ಮನ ತಣಿಸುತ್ತಿದೆ.
ಈ ವರ್ಷ ಯಾವುದೇ ಕಾಳ್ಗಿಚ್ಚು ಬೀಳದಿರುವುದು ಮತ್ತು ಮುಂದಿನ ದಿನಗಳಲ್ಲಿಯೂ ಅಂತಹ ಆತಂಕ ಇಲ್ಲ ಎಂದು ಅರಣ್ಯ ಇಲಾಖೆ ಸದ್ಯ ನಿಟ್ಟುಸಿರು ಬಿಟ್ಟಿದೆ. ಇದು ಇತ್ತೀಚಿನ ಐದಾರು ವರ್ಷಗಳಲ್ಲಿ ಬಹುಬೇಗ ಬೆಂಕಿ ಅವಧಿ ಮುಗಿದ ದಾಖಲೆಯಾಗಿದೆ. ಸಾಮಾನ್ಯವಾಗಿ ಪ್ರತಿ ವರ್ಷ ನವೆಂಬರ್‌ನಿಂದ ಅರಣ್ಯ ಸಿಬ್ಬಂದಿ ಕಾಡಿನಲ್ಲಿ ಫೈರ್‌ಲೈನ್ ಮಾಡಲು ಪ್ರಾರಂಭಿಸುತ್ತಿದ್ದರು. ಜನವರಿಯಿಂದ ಏಪ್ರಿಲ್‌ವರೆಗೂ ಬೆಂಕಿ ಅವಧಿ ಇರುತ್ತಿತ್ತು. ಅಲ್ಲಿಯವರೆಗೆ ಕಾಳ್ಗಿಚ್ಚು ಬೀಳದಂತೆ ಅರಣ್ಯ ಇಲಾಖೆ ಕಣ್ಗಾವಲು ಇಟ್ಟುಕೊಂಡು ಕಾಯಬೇಕಾಗುತ್ತಿತ್ತು. ಆದರೆ ಈ ವರ್ಷ ಫೆಬ್ರವರಿ ಹೊತ್ತಿಗೆ ಬೆಂಕಿಯ ಅವಧಿ ಪ್ರಾರಂಭವಾಯಿತು. ವರುಣನ ಕೃಪೆಯಿಂದ ಮಾರ್ಚ್ ಮಧ್ಯಭಾಗದ ಹೊತ್ತಿನಿಂದ ಮಳೆ ಆಗಾಗ ಬೀಳಲು ಪ್ರಾರಂಭವಾಯಿತು. ಪರಿಣಾಮ, ನೆಲದಲ್ಲಿ ಹುಲ್ಲು ಚಿಗುರಿ, ಅರಣ್ಯದಲ್ಲಿ ಹಸಿರು ಮೂಡಲು ಪ್ರಾರಂಭಿಸಿದೆ. ಜತೆಗೆ, ಸಣ್ಣಪುಟ್ಟ ಕೆರೆಗಳಲ್ಲಿ ನೀರು ಸಂಗ್ರಹವಾಗುತ್ತಿದೆ. ಆದ್ದರಿಂದ ಏಪ್ರಿಲ್ ‘ಬೆಂಕಿ ಅವಧಿ’ ಬೇಗ ಮುಕ್ತಾಯವಾಗಿದೆ.

ಬಂಡೀಪುರ, ನಾಗರಹೊಳೆ ಮುಂತಾದ ಕಡೆ ಅರಣ್ಯದ ಬೆಂಕಿ ಆತಂಕದ ಹಿನ್ನೆಲೆಯಲ್ಲಿ ವರ್ಷದ ಕೊನೆಗೆ ಬೆಂಕಿ ವಾಚರ್‌ಗಳನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡರೆ, ಏಪ್ರಿಲ್ ಕೊನೆಯ ತನಕ ಉಳಿಸಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಮಳೆ ಚೆನ್ನಾಗಿ ಆದ ಕಾರಣ ಬೆಂಕಿ ವಾಚರ್‌ಗಳ ಸೇವೆಯನ್ನು ಮಾ.31ಕ್ಕೆ ಕೊನೇ ಮಾಡಲಾಗಿದೆ. ಜತೆಗೆ, ಅಲ್ಲಲ್ಲಿ ಅಗ್ನಿಶಾಮಕ ವಾಹನಗಳನ್ನು ನಿಲ್ಲಿಸಿಕೊಳ್ಳಲಾಗುತ್ತಿತ್ತು. ಕಾಡಂಚಿನ ಗ್ರಾಮಗಳಲ್ಲಿ ಬೀದಿ ನಾಟಕಗಳ ಮೂಲಕ ಅರಿವು ಮೂಡಿಸಲಾಗುತ್ತಿತ್ತು. ಅರಣ್ಯಾಧಿಕಾರಿಗಳಿಂದ ಹಿಡಿದು ಸೆಲಬ್ರಿಟಿ ತನಕ ಕಾಳ್ಗಿಚ್ಚಿನ ವಿರುದ್ಧ ಜಾಗೃತಿ ಮೂಡಿಸುತ್ತಿದ್ದರು. ಈ ವರ್ಷ ಅಂತಹ ಪ್ರಮೇಯವೇ ಬರಲಿಲ್ಲ.
ಸದ್ಯ ಬಂಡೀಪುರ ವ್ಯಾಪ್ತಿಯಲ್ಲಿ ಕುಂದಕೆರೆ ಒಂದನ್ನು ಬಿಟ್ಟು ಬಹುತೇಕ 12 ವಲಯಗಳಲ್ಲಿ ಮಳೆಯಾಗಿದ್ದು, ನುಗು ನದಿಗೆ ಕಾಡಿನಿಂದ ನೀರು ಹರಿದು ಬರುತ್ತದೆ. ಆದರೆ ಕೇರಳ ಭಾಗದಿಂದ ನೀರು ಬೇಕಿದ್ದು, ಅಲ್ಲಿಂದಲೂ ಒಳಹರಿವು ಹೆಚ್ಚಾದರೆ ಅನುಕೂಲ. ಬಿಆರ್‌ಟಿ ಅರಣ್ಯ ಪ್ರದೇಶದಲ್ಲೂ ಅರಣ್ಯ ಹಸಿರು ಚಿಗುರಿದೆ.
ಕಬಿನಿ ಒಳಹರಿವು ಹೆಚ್ಚಳ:ಕಳೆದ ವಾರದಲ್ಲಿ ಕೇರಳದ ವಯನಾಡು ಭಾಗದಲ್ಲಿ ಕೆಲವು ದಿನಗಳಿಂದ ಒಳ್ಳೆಯ ಮಳೆಯಾಗಿದೆ. ಹೀಗೆಯೇ ಮುಂದುವರಿದರೆ ಗಡಿಯಲ್ಲಿರುವ ಬಂಡೀಪುರ ವ್ಯಾಪ್ತಿಯ ಮೂಲೆಹೊಳೆ, ಗುಂಡ್ರೆ, ನಾಗರಹೊಳೆಯ ಡಿ.ಬಿ.ಕುಪ್ಪೆ ಮತ್ತು ನಾಗರಹೊಳೆ ವ್ಯಾಪ್ತಿಯಲ್ಲಿ ತಂಪಿನ ವಾತಾವರಣ ನಿರ್ಮಾಣವಾಗಲಿದೆ. ಜತೆಗೆ, ಕಳೆದ ವಾರ ಉತ್ತಮ ಮಳೆಯಾಗಿದ್ದು, ಕಬಿನಿ ಹಿನ್ನೀರನ್ನೇ ಅವಲಂಬಿಸಿರುವ ನಾಗರಹೊಳೆ ಮತ್ತು ಬಂಡೀಪುರ ಭಾಗದ ವನ್ಯಜೀವಿಗಳಿಗೆ ತುಸು ನೆಮ್ಮದಿ ತರಲಿದೆ. 2284 ಅಡಿ ಗರಿಷ್ಠ ಮಟ್ಟ ಹೊಂದಿರುವ ಕಬಿನಿ ಜಲಾಶಯದಲ್ಲಿ ಮೇ 10ರಂದು 2260.86 ಅಡಿ ನೀರಿದ್ದು, 413 ಕ್ಯೂಸೆಕ್ ಒಳಹರಿವಿತ್ತು. 2021ರಲ್ಲಿ ಇದೇ ದಿನ 507 ಕ್ಯೂ., 2020ರಲ್ಲಿ 253 ಕ್ಯೂ., 2019ರಲ್ಲಿ 1553 ಕ್ಯೂ. ಮತ್ತು 2018ರಲ್ಲಿ 350 ಕ್ಯೂಸೆಕ್ ಇತ್ತು.
ಚಾಮುಂಡಿಬೆಟ್ಟಕ್ಕೂ ಇಲ್ಲ ಆತಂಕ:ಮೈಸೂರು ನಗರಕ್ಕೆ ಹೊಂದಿಕೊಂಡಿರುವ ಚಾಮುಂಡಿಬೆಟ್ಟಕ್ಕೆ ಸಾಮಾನ್ಯವಾಗಿ ಪ್ರತಿವರ್ಷ ಬೆಂಕಿ ಕಾಟ ಇದ್ದೇ ಇತ್ತು. ಆದರೆ ಈ ವರ್ಷ ಬೇಗ ಫೈರ್‌ಲೈನ್ ಮಾಡಿದ್ದರಿಂದ ಮತ್ತು ಉತ್ತಮ ಮಳೆಯಾಗಿದ್ದರಿಂದ ಹಸಿರು ಚಿಗುರೊಡೆದು ಕಾಳ್ಗಿಚ್ಚಿನ ಆತಂಕ ಇಲ್ಲವಾಗಿದೆ. ಮಹದೇಶ್ವರ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು ಬೆಂಕಿ ಆತಂಕ ಇಲ್ಲ ಎಂದು ಡಿಸಿಎಫ್ ಏಡುಕೊಂಡಲು ತಿಳಿಸಿದ್ದಾರೆ.
ಈ ಸಲ ಸಕಾಲಕ್ಕೆ ಸರಿಯಾಗಿ ಮಳೆಯಾಗಿರುವುದರಿಂದ ಬೆಂಕಿ ಆತಂಕವನ್ನು ದೂರ ಮಾಡಿದೆ. ಮೇಟಿಕುಪ್ಪೆ ವಿಭಾಗ ವ್ಯಾಪ್ತಿಯ ಮೇಟಿಕುಪ್ಪೆ, ಡಿ.ಬಿ.ಕುಪ್ಪೆ ಮತ್ತು ಅಂತರಸಂತೆ ವಲಯದಲ್ಲಿ ಉತ್ತಮ ಮಳೆಯಾಗಿದ್ದು, ಹಸಿರು ಚಿಗುರಿದೆ. ಜತೆಗೆ ಕೆರೆಕಟ್ಟೆಗಳಲ್ಲೂ ನೀರಿರುವುದರಿಂದ ಪ್ರಾಣಿಗಳಿಗೂ ಯಾವುದೇ ರೀತಿಯ ತೊಂದರೆಯಿಲ್ಲ.| ಎಸ್.ಪಿ.ಮಹಾದೇವ್ಎಸಿಎಫ್ ಮೇಟಿಕುಪ್ಪೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ! ರಾಜ್ಯದಲ್ಲೇ ಮೊದಲ ಪ್ರಯೋಗ, 50 ಎಕರೆ ಜಾಗದಲ್ಲಿ ಡೇ ಕ್ರಾಲ್​ ನಿರ್ಮಾಣ

ಸಾವಲ್ಲೂ 8 ಜನ್ರಿಗೆ ಜೀವ ಕೊಟ್ಟ ಚಂದ್ರಶೇಖರ್​: ಪತಿಯ ಅಗಲಿಕೆ ನೋವಲ್ಲೂ ಸಾರ್ಥಕತೆ ಮೆರೆದ ಗರ್ಭಿಣಿ ಪತ್ನಿ

ತಾಳಿ ಕಟ್ಟಿಸಿಕೊಂಡ ಮರುಕ್ಷಣವೇ ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿದ ಮದುಮಗಳು! ಮಂಡ್ಯ ಯುವತಿಯ ನಡೆಗೆ ಎಲ್ಲೆಡೆ ಮೆಚ್ಚುಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − eight =
Remember me
