ನಾಯಕನಹಟ್ಟಿ(ಚಿತ್ರದುರ್ಗ):ಯುವತಿಯೊಬ್ಬಳು ತಂಬಿಗೆಯಲ್ಲಿ ವಿಷ ಹಾಕಿ ಸೇವನೆ ಮಾಡಿ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಮಗು ಕೂಡ ಅದೇ ತಂಬಿಗೆಯಲ್ಲಿ ನೀರು ಕುಡಿದು, ಮೃತಪಟ್ಟ ಹೃದಯವಿದ್ರಾವಕ ಘಟನೆ ಪಟ್ಟಣದ ಸಮೀಪದ ನರ್ಸರಿಯಲ್ಲಿ ಸಂಭವಿಸಿದೆ.
ಚಂದನ(18) ಮತ್ತು ಗಗನ್​(2) ಮೃತರು. ಗುಂತಕೋಲಮ್ಮನಹಳ್ಳಿಯ ರಾಜಣ್ಣ ತನ್ನ ಮಕ್ಕಳೊಂದಿಗೆ ಪಟ್ಟಣದ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದರು. ಚಂದನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ಅನಾರೋಗ್ಯದಿಂದ ಬೇಸತ್ತು ಸೋಮವಾರ ವಿಷ ಸೇವಿಸಿದ್ದಳು. ಈ ಸುದ್ದಿ ತಿಳಿದು ಕೂಡಲೇ ಆಕೆಯನ್ನು ಚಿಕಿತ್ಸೆಗಾಗಿ ಚಳ್ಳಕೆರೆಯ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದರು. ತಂಬಿಗೆಯಲ್ಲಿ ವಿಷ ಇರುವುದನ್ನು ಅರಿಯದೇ ರಾಜಣ್ಣನ ಹಿರಿಯ ಮಗಳು ಪುಷ್ಪಾ, ತನ್ನ ಮಗು ಗಗನ್​ಗೆ ಅದರಿಂದಲೇ ನೀರು ಕುಡಿಸಿದ್ದಾರೆ. ಮಗು ನಿತ್ರಾಣಗೊಳ್ಳುತ್ತಿದ್ದಂತೆ ನಾಯಕನಹಟ್ಟಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಅತ್ತ ಯುವತಿ ಚಂದನ ಕೂಡ ಮೃತಪಟ್ಟಿದ್ದಾಳೆ.
ಅದೇ ತಂಬಿಗೆಯಲ್ಲಿ ಸಂಬಂಧಿಕರಾದ ಬೊಮ್ಮಣ್ಣ ಹಾಗೂ ತನುಜಾ ಎನ್ನುವವರು ನೀರು ಕುಡಿದು ಅಸ್ವಸ್ಥರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿಕೆಶಿ ಮುಖ್ಯಮಂತ್ರಿ ಆಗೋದು ಖಚಿತ! ಆಗ ಕುಣಿಗಲ್​ಗೆ ನಾನೇ ಸಿಎಂ ಎಂದ ಶಾಸಕ ರಂಗನಾಥ್

ರಜೆ ಬೇಕಂದ್ರೆ ಲಾಡ್ಜ್​ಗೆ ಬಂದು ಬಟ್ಟೆ‌ ಬಿಚ್ಚಬೇಕಂತೆ… ಕೊಪ್ಪಳದ ಸರ್ಕಾರಿ ಕಚೇರಿ ಮಹಿಳಾ ಸಿಬ್ಬಂದಿಯ ಕಣ್ಣೀರ ಕಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + six =
Remember me
