ಬಾಗಲಕೋಟೆ:ನನ್ನ ಬಳಿ ದೈವಿ ಕಲ್ಲು ಇದೆ, ಈ ಕಲ್ಲು ಇರುವವರಿಗೆ ಅದೃಷ್ಟ ಒಲಿಯುತ್ತೆ ಎಂದು ಯೂಟೂಬ್​ನಲ್ಲಿ ವಿಡಿಯೋ ಅಪ್​ಲೋಡ್​ ಮಾಡಿದ್ದವ ಮಾಡಬಾರದ್ದು ಮಾಡಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಬಾಗಲಕೋಟೆ ನಗರದ ನಿವಾಸಿ ಅಜಯ ಅಲಿಯಾಸ್​ ಸಮೀರ್​ ಜಾಫರ್​ ಜಾಹಗೀರದಾರ ಬಂಧಿತ. ನಿಮಗೆ ಅದೃಷ್ಟ ಒಲಿಯಬೇಕೆ? ಹಾಗಿದ್ದರೆ 7 ಲಕ್ಷ ರೂಪಾಯಿ ಕೊಡಿ, ದೈವಿ ಕಲ್ಲು(ಸೊಲೆಮಾನ್​ ಸ್ಟೋನ್​) ನೀಡುವೆ. ಈ ಕಲ್ಲು ನಿಮ್ಮ ಬಳಿ ಇದ್ದರೆ ಅದೃಷ್ಟ ಒಲಿಯುತ್ತೆ ಎಂದು ಯೂಟೂಬ್​ಗೆ ಅಜಯ ವಿಡಿಯೋ ಹಾಕಿದ್ದ.
ಈ ವಿಡಿಯೋ ನೋಡಿದ ಅಶೋಕ ರೇವಣಸಿದ್ದಪ್ಪ ಇಂಡಿ ಎಂಬಾತ, ದೈವಿಕಲ್ಲು ಕೊಡುವಂತೆ ಅಜಯಗೆ 5 ಲಕ್ಷ ರೂ. ನಗದು, ಕೈ​ ಚೈನ್​ (ಚಿನ್ನದ ಆಭರಣ) ನೀಡಿದ್ದರು. ಆದರೆ, ಇದೆಲ್ಲವೂ ಸುಳ್ಳು, ದೈವು ಕಲ್ಲು ಎಂದು ನಂಬಿಸಿ ಹಣ ಪೀಕುವ ದಂಧೆ ಇದು ಎಂದು ಅರಿವಾಗುತ್ತಿದ್ದಂತೆ ಅಶೋಕ ಇಂಡಿ ಅವರು ಬಾಗಲಕೋಟೆಯ ಶಹರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಡಿವೈಎಸ್​ಪಿ ಚಂದ್ರಕಾಂತ ನಂದರಡ್ಡಿ ಮಾರ್ಗದಶನದಲ್ಲಿ ಬಾಗಲಕೋಟೆ ಪಿಎಸ್​ಐ ವಿಜಯ ಮುರಗುಂಡಿ, ಎಎಸ್​ಐ ವಿ.ಕೆ.ಕುಲಕರ್ಣಿ, ಸಿಬ್ಬಂದಿ ಎಂ.ಡಿ.ಸೌದಿ, ವಿ.ಬಿ.ಹಾದಿಮನಿ, ಮುತ್ತು ಅಜಮನಿ, ನಾಸೀರ್​ ಬೀಳಗಿ ಒಳಗೊಂಡ ತಂಡವು ಆರೋಪಿ ಅಜಯನನ್ನು ಬಂಧಿಸಿದ್ದಾರೆ. ಆತನಿಂದ 5 ಲಕ್ಷ ರೂ. ನಗದು, ಒಂದು ಚಿನ್ನದ ಬ್ರಾಸ್​ಲೇಟ್​ ವಶಕ್ಕೆ ಪಡೆದಿದ್ದಾರೆ. ಪೊಲೀಸ್​ ಸಿಬ್ಬಂದಿ ಕಾರ್ಯಾಚರಣೆಗೆ ಎಸ್ಪಿ ಲೋಕೇಶ ಜಗಲಾಸರ್​ ಮೆಚ್ಚುಗೆ ವ್ಯಕ್ತಪಡಿಸಿ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಮನೆಗೆ ಹೋಗುವ ಮಾರ್ಗಮಧ್ಯೆ ಮೂತ್ರ ವಿಸರ್ಜನೆಗೆಂದು ನಿಂತ ಕ್ಷಣಾರ್ಧದಲ್ಲೇ ಸ್ನೇಹಿತರಿಬ್ಬರ ಪ್ರಾಣ ಹೊತ್ತೊಯ್ದ ಜವರಾಯ!

ಪೂಜೆ ನೆಪದಲ್ಲಿ ಪುರೋಹಿತನನ್ನು ಮನೆಗೆ ಕರೆಸಿಕೊಂಡ ಈ ದಂಪತಿ ಅಸಹ್ಯ ಕೆಲಸ ಮಾಡಿಬಿಟ್ರು…

ದೂರು ನೀಡಲು ಬಂದಾಕೆಯನ್ನೇ ಮಂಚಕ್ಕೆ ಕರೆದ ಪೊಲೀಸ್​ ಇನ್​ಸ್ಪೆಕ್ಟರ್​! ಸಂತ್ರಸ್ತೆ ಬಿಚ್ಚಿಟ್ಟ ನೋವು ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
