ಬೆಂಗಳೂರು:ಸಿಗರೇಟ್ ಮತ್ತು ಮಾಸ್ಕ್ ಸಗಟು ವ್ಯಾಪಾರಿಗಳಿಂದ ಸಿಸಿಬಿಯ ಎಸಿಪಿ ಮತ್ತು ಇನ್​ಸ್ಪೆಕ್ಟರ್​ಗಳು ಕೋಟ್ಯಂತರ ರೂ. ಲಂಚ ಪಡೆದ ಪ್ರಕರಣವನ್ನು ಎಸಿಬಿ ತನಿಖೆಗೂ ಸಹ ಸೂಚಿಸಲಾಗಿದೆ.
ಅಮಾನತುಗೊಂಡಿರುವ ಸಿಸಿಬಿಯ ಎಸಿಪಿ ಪ್ರಭುಶಂಕರ್ ಹಾಗೂ ಇನ್​ಸ್ಪೆಕ್ಟರ್​ಗಳಾದ ಅಜಯ್ ಮತ್ತು ನಿರಂಜನ್​ಕುಮಾರ್ ಆರೋಪಿಗಳು. ಮೂವರ ವಿರುದ್ಧ ಲಂಚ ಸ್ವೀಕಾರ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಆರೋಪದಡಿ ಎಫ್​ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಎಸಿಬಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶಿಸಿದ್ದಾರೆ.
ಇದನ್ನೂ ಓದಿ:ರೇಪಿಸ್ಟ್​ ತಂದೆಯನ್ನು ಬರ್ಬರ ಹತ್ಯೆಗೈದಿದ್ದ ಮೂವರು ಸಹೋದರಿಯರ ಬೆನ್ನಿಗೆ ನಿಂತ ಕೋರ್ಟ್​, ತನಿಖಾ ಸಮಿತಿ!
ಕರೊನಾ ಲಾಕ್​ಡೌನ್ ಸಮಯ ದುರುಪಯೋಗ ಮಾಡಿಕೊಂಡ ಎಸಿಪಿ ಮತ್ತು ಇನ್​ಸ್ಪೆಕ್ಟರ್​ಗಳು, ಅಕ್ರಮ ದಾಸ್ತಾನು ಮತ್ತು ದುಬಾರಿ ಬೆಲೆಗೆ ಮಾರಾಟದ ನೆಪದಲ್ಲಿ ನಗರದ ಹಲವೆಡೆ ದಾಳಿ ನಡೆಸಿದ್ದರು. ಕೆ.ಆರ್. ಪುರ, ಬಾಣಸವಾಡಿಯಲ್ಲಿ ಸಿಗರೇಟ್ ಮತ್ತು ಮಾಸ್ಕ್ ಸಗಟು ವ್ಯಾಪಾರಿಗಳ ಮೇಲೆ ದಾಳಿ ನಡೆಸಿದ್ದರು. ಅಜಯ್ ಮತ್ತು ನಿರಂಜನಕುಮಾರ್ ಸಿಗರೇಟ್ ವಿತರಕರಿಂದ ಪ್ರತ್ಯೇಕವಾಗಿ ಹಣ ಸುಲಿಗೆ ಮಾಡಿದ ಎಸಿಪಿ, ದಾಳಿ ನಡೆಸುವುದಿಲ್ಲ ಎಂದು ಭರವಸೆ ನೀಡಿದ್ದರು. ಎಂ.ಡಿ. ಆಂಡ್ ಸನ್ಸ್ ಕಂಪನಿಯಿಂದ ಪ್ರಭುಶಂಕರ್ 62.5 ಲಕ್ಷ ರೂ. ಹಾಗೂ ಅಜಯ್ ಮತ್ತು ನಿರಂಜನ್ ಶ್ರೀನಗರದಲ್ಲಿ ಸಿಗರೇಟ್ ವ್ಯಾಪಾರಿ ಸಂತೋಷ್ ಮತ್ತು ಮಾಸ್ಕ್ ವ್ಯಾಪಾರಿಯಿಂದ 30 ಲಕ್ಷ ರೂ. ಪಡೆದಿದ್ದಾರೆಂದು ಆರೋಪಿಸಲಾಗಿದೆ.
ಸಿಗರೇಟ್ ವ್ಯಾಪಾರಿಗಳಿಂದಲೇ ಅಂದಾಜು 1.75 ಕೋಟಿ ರೂ. ಸುಲಿಗೆ ಮಾಡಲಾಗಿದೆ. ಅಲ್ಲದೆ, ಬಾಣಸವಾಡಿಯಲ್ಲಿ ಮಾಸ್ಕ್ ವ್ಯಾಪಾರಿಯ ಮೇಲೆ ದಾಳಿ ನಡೆಸಿ 20 ಲಕ್ಷ ರೂ. ಮೌಲ್ಯದ ನಕಲಿ ಎನ್ 95 ಮಾಸ್ಕ್ ಜಪ್ತಿ ಮಾಡುವ ಜತೆಗೆ 30 ಲಕ್ಷ ರೂ. ಕಿಕ್​ಬ್ಯಾಕ್ ಪಡೆದಿದ್ದರು. ಎಸಿಪಿ ಮತ್ತು ಇನ್​ಸ್ಪೆಕ್ಟರ್​ಗಳ ಕಳ್ಳಾಟ ಮೇಲಧಿಕಾರಿಗಳಿಗೆ ಗೊತ್ತಾದ ಕೂಡಲೇ ಸಿಸಿಬಿಯ ಡಿಸಿಪಿ-2 ಕೆ.ಪಿ. ರವಿಕುಮಾರ್ ಮತ್ತು ಡಿಸಿಪಿ-1 ಕುಲದೀಪ್ ಜೈನ್ ಕಡೆಯಿಂದ ಪ್ರತ್ಯೇಕವಾಗಿ ಆಂತರಿಕ ತನಿಖೆ ನಡೆಸಿದಾಗ ವ್ಯಾಪಾರಿಗಳಿಗೆ ಬೆದರಿಸಿ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ. ಆಂತರಿಕ ತನಿಖೆ ವರದಿಯನ್ನು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮೂಲಕ ಡಿಜಿಪಿ ಪ್ರವೀಣ್ ಸೂದ್​ಗೆ ಸಲ್ಲಿಸಿದ್ದರು.
ಇದನ್ನೂ ಓದಿ:ಈಜುಕೊಳದಲ್ಲಿ ಮೋಜು ಮಾಡುತ್ತಿದ್ದ ಬ್ಯೂಟಿ ಕ್ವೀನ್-​ ಸ್ನೇಹಿತ ಸಮೇತ ಸೀದಾ ಕ್ವಾರಂಟೈನ್​ಗೆ ಒಯ್ದ ಪೊಲೀಸರು!
ಡಿಜಿಪಿ ಸೂಚನೆ ಮೇರೆಗೆ ಕಾಟನ್​ಪೇಟೆ ಠಾಣೆಯಲ್ಲಿ ಎಸಿಪಿ ಮತ್ತು ಇಬ್ಬರು ಇನ್​ಸ್ಪೆಕ್ಟರ್​ಗಳ ವಿರುದ್ಧ ಬೆದರಿಸಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಪ್ರತ್ಯೇಕ ಎಫ್​ಐಆರ್ ದಾಖಲಾಗಿವೆ. ಪ್ರಕರಣದ ಗಂಭೀರತೆ ಅರಿತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ತನಿಖೆ ನಡೆಸಬೇಕೆಂದು ಎಸಿಬಿಗೂ ಪ್ರಕರಣವನ್ನು ವಹಿಸಲಾಗಿದೆ. ಇದೀಗ ಎಸಿಬಿಯಲ್ಲಿಯೂ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪೊಲೀಸರ ಬಂಧನ ಯಾಕಿಲ್ಲ?
ಸಿಸಿಬಿಯ ಎಸಿಪಿ ಮತ್ತು ಇನ್​ಸ್ಪೆಕ್ಟರ್​ಗಳ ವಿರುದ್ಧ ಸುಲಿಗೆ ಹಾಗೂ ಲಂಚ ಪಡೆದ ಆರೋಪವಿದೆ. ಕಾಟನ್​ಪೇಟೆ ಠಾಣೆಯಲ್ಲಿ ಮೇ 12ರಂದೇ ಎರಡು ಎಫ್​ಐಆರ್ ದಾಖಲಾಗಿವೆ. ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್​ಗೆ ತನಿಖೆಯ ಜವಾಬ್ದಾರಿ ವಹಿಸಲಾಗಿದೆ. ಇದೇ ಪ್ರಕರಣವನ್ನು ಎಸಿಬಿ ತನಿಖೆಗೂ ವಹಿಸಲಾಗಿದೆ. ಆದರೆ, ಇಲ್ಲಿಯವರೆಗೂ ಆರೋಪಿಗಳನ್ನು ಬಂಧಿಸಲಾಗಿಲ್ಲ. ಪ್ರಕರಣದ ಬಗ್ಗೆ ಮಾಹಿತಿ ನೀಡಲು ಸಹ ಸಂಬಂಧಪಟ್ಟ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ಎಸಿಬಿಯಲ್ಲಿ ಪ್ರತ್ಯೇಕ ಎಫ್​ಐಆರ್
ಎಸಿಪಿ ಪ್ರಭುಶಂಕರ್, ಇನ್​ಸ್ಪೆಕ್ಟರ್​ಗಳಾದ ಅಜಯ್ ಮತ್ತು ನಿರಂಜನ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್​ಐಆರ್ ದಾಖಲಿಸಿ ಎಸಿಬಿ ಅಧಿಕಾರಿಗಳು ತನಿಖೆ ಕೈಗೊಳ್ಳಲಿದ್ದಾರೆ. ಪ್ರಕರಣದಲ್ಲಿ ಎಸಿಪಿಯೇ ಆರೋಪಿಯಾಗಿರುವ ಕಾರಣಕ್ಕೆ ಎಸ್​ಪಿ ದರ್ಜೆ ಅಧಿಕಾರಿಯಿಂದ ತನಿಖೆ ನಡೆಯಲಿದೆ. ಸಿಗರೇಟ್, ಮಾಸ್ಕ್ ಸಗಟು ವ್ಯಾಪಾರಿಗಳಿಂದ ಲಂಚ ಪಡೆದ ಆರೋಪಕ್ಕೆ ತನಿಖೆ ಸೀಮಿತವೋ ಅಥವಾ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದಡಿಯೂ ತನಿಖೆ ನಡೆಸುತ್ತಾರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಶಾಪಿಂಗ್​ನಿಂದ ಪತ್ನಿ ತಂದ ವಸ್ತುವನ್ನು ನೋಡಿ ತಬ್ಬಿಬ್ಬಾದ ಪತಿ…ಆತನೀಗ ಅಸಂತೃಪ್ತ…!
ಸರ್ಕಾರದ ಅನುಮತಿಗೆ ಪತ್ರ
ಮೇ 13ರಂದು ಎಸಿಪಿ ಮತ್ತು ಇಬ್ಬರು ಇನ್​ಸ್ಪೆಕ್ಟರ್​ಗಳ ವಿರುದ್ಧದ ಲಂಚ ಪಡೆದ ಆರೋಪ ಪ್ರಕರಣದ ವರದಿಯನ್ನು ಎಸಿಬಿಗೆ ಸಿಸಿಬಿ ಅಧಿಕಾರಿಗಳು ಒಪ್ಪಿಸಿದ್ದಾರೆ. ಆರೋಪಿಗಳ ವಿರುದ್ಧ ಎಫ್​ಐಆರ್ ದಾಖಲಿಸುವ ಮುನ್ನ ಭ್ರಷ್ಟಾಚಾರ ತಡೆ ಕಾಯ್ದೆ 17ಎ ಅಡಿ ಅನುಮತಿ ಪಡೆಯಲು ರಾಜ್ಯ ಸರ್ಕಾರಕ್ಕೆ ಶುಕ್ರವಾರ ಅಥವಾ ಶನಿವಾರ ಪತ್ರ ಬರೆದು ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ.ಆ ನಂತರ ತನಿಖೆ ಆರಂಭವಾಗಲಿದೆ ಎಂದು ಎಸಿಬಿ ಮೂಲಗಳು ವಿಜಯವಾಣಿಗೆ ತಿಳಿಸಿವೆ.
ನಗರಕ್ಕೆ ಗುಡ್​ಬೈ ಹಳ್ಳಿಕಡೆಗೆ ಜೈ: ಗಗನಮುಖಿಯಾಗಿದ್ದ ಮನೆ ಬಾಡಿಗೆಯಲ್ಲಿ ಇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
