ಚಾಮರಾಜನಗರ: ಕರೋನಾ ವೈರಸ್ Covid19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಎಲ್ಲೆಡೆ, ಎಲ್ಲರೂ ತೆಗೆದುಕೊಳ್ಳುತ್ತಿದ್ದಾರೆ. ಈ ವೈರಸ್​ ತಡೆಗೆ ಔಷಧ ಇನ್ನೂ ಅಭಿವೃದ್ಧಿ ಪಡಿಸಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ Covid-19 ಎಂಬ ಕರೋನಾ ವೈರಾಣುವಿಗೆ ಪರಿಣಾಮಕಾರಿ ಔಷಧವನ್ನು ಇದುವರೆಗೆ ಪತ್ತೆ ಮಾಡಲಾಗಿಲ್ಲ. ಇದಕ್ಕೊಂದು ಔಷಧ ಕಂಡು ಹುಡುಕಬೇಕು ಎಂದು ಜಾಗತಿಕ ಮಟ್ಟದಲ್ಲಿ ಸಂಶೋಧನೆಗಳು ನಡೆದಿವೆ. ಫಾರ್ಮಾ ಕಂಪನಿಗಳು ಇದಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿವೆ.
ಔಷಧಗಳು ಪರಿಣಾಮಕಾರಿಯಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಜನರನ್ನು ಅರಸುತ್ತಿವೆ ಈ ಕಂಪನಿಗಳು. ಇದಕ್ಕಾಗಿ ಅಂತಹ ಜನರಿಗೆ ಸಾವಿರಾರು ಡಾಲರ್ ಹಣವನ್ನು ಪಾವತಿಸುವುದಕ್ಕೂ ಮುಂದಾಗಿವೆ. ಆದರೆ ಭಾರತದಲ್ಲಿ ಇಂತಹ ಪ್ರಯೋಗ ಮನುಷ್ಯರ ಮೇಲೆ ನಡೆಯುತ್ತಿರುವ ಸುದ್ದಿ ಕೇಳಿ ಬಂದಿಲ್ಲ. ಆದಾಗ್ಯೂ, ಕೊಳ್ಳೇಗಾಲದ ವಕೀಲರೊಬ್ಬರು ಪ್ರಯೋಗ ಪಶುವಾಗಲು ನಾನು ರೆಡಿ ಎಂದಿದ್ದು, ಅವರ ಹೇಳಿಕೆಯ ವಿಡಿಯೋ ವೈರಲ್ ಆಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ವಕೀಲ ಬಸವರಾಜು ಎಂಬುವವರು ಕರೊನಾ ಔಷಧಿ ಕಂಡು ಹಿಡಿಯಲು ನನ್ನ ದೇಹವನ್ನು ಪ್ರಯೋಗಕ್ಕಾಗಿ ಬಳಸಿಕೊಳ್ಳಿ ಎಂದು ತಿಳಿಸಿದ್ದಾರೆ. ನನ್ನ ದೇಹಕ್ಕೆ ಕರೊನಾ ಇಂಜೆಕ್ಟ್ ಮಾಡಿ ಪ್ರಯೋಗಕ್ಕಾಗಿ ಬಳಸಿಕೊಳ್ಳಿ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ PowerNewz ಆ್ಯಪ್​ನಲ್ಲಿ ಅಪ್ಲೋಡ್ ಆಗಿದ್ದು ಜನರ ಗಮನಸೆಳೆದಿದೆ.
ಕರೋನಾ ವೈರಸ್ ಸೋಂಕು ತಗಲಿಸಿಕೊಳ್ಳಲು ರೆಡಿ ಇದ್ದೀರಾ?- ನಿಮಗೆ ಓಕೆ ಅಂದ್ರೆ ದುಡ್ಡು ಕೊಡೋಕೆ ರೆಡಿ ಇದೆ ಲಂಡನ್ನಿನ ಲ್ಯಾಬ್​

VIDEO: ಕರೋನಾ ವೈರಸ್ ಸೋಂಕಿಗೆ ಔಷಧ ಅಭಿವೃದ್ಧಿಪಡಿಸಲು ಬರೋಬ್ಬರಿ ಎರಡು ವರ್ಷ ಬೇಕಾದೀತು ಎಂದ ಆರೋಗ್ಯ ಸಚಿವಾಲಯ

https://twitter.com/i/status/1241187362555584512
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
