
ಬೆಂಗಳೂರು:ಪೀಣ್ಯ 2ನೇ ಹಂತದ ಅಂದ್ರಳ್ಳಿ ಮುಖ್ಯರಸ್ತೆಯಲ್ಲಿರುವ ಅನುಪಮ ವಿದ್ಯಾಮಂದಿರದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ವಿದ್ಯೆಗೆ ಅಧಿದೇವತೆಗಳಾದ ಸರಸ್ವತಿ ಹಾಗೂ ಗಣಪತಿಯನ್ನು ಪೂಜಿಸಲಾಯಿತು. ಗಣಹೋಮವನ್ನು ವಿಧಿವತ್ತಾಗಿ ಮಾಡಿ ಮಕ್ಕಳಿಗೆ ಪೋಷಕರ ಹಸ್ತಗಳಿಂದ ಮಕ್ಕಳ ಕೈಯಲ್ಲಿ ಓಂ, ಶ್ರೀ, ಅ ಎಂಬ ಅಕ್ಷರಗಳನ್ನು ತಿದ್ದಿಸಲಾಯಿತು.ವಿದ್ಯಾವಾಚಸ್ವತೆಗಳಾದ ಸಂತೋಷ ಗುರೂಜಿ ಅವರು ಮಾತನಾಡಿ, ಮಕ್ಕಳ ಪೋಷಣೆ ಲಾಲನೆ ಪಾಲನೆ ಬಹಳ ಮುಖ್ಯ. ಅಕ್ಷರವನ್ನು ಕಲಿಯಬೇಕು ಹಾಗೂ ಅದರಿಂದ ಸದೃಢವಾದ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.ಮಕ್ಕಳ ಹಿತವನ್ನು ಬಯಸಿ ಸ್ಲೇಟ್‌ಗಳಿಗೆ ಪೂಜೆಯನ್ನು ಮಾಡಿ ಮಕ್ಕಳ ಕೈಯಲ್ಲಿ ಓಂ ಶ್ರೀ ಆ ಎಂಬ ಅಕ್ಷರಗಳನ್ನು ಗುರೂಜಿ ತಿದ್ದಿಸಿದರು. ಪೋಷಕರು ಉತ್ಸಾಹದಿಂದ ತಮ್ಮಮಕ್ಕಳು ಅಭ್ಯಾಸವನ್ನು ಮಾಡುವುದನ್ನು ನೋಡಿ ಸಂತಸ ಪಟ್ಟರು.ಭಾರತೀಯ ಸಂಸ್ಕೃತಿಯೇ ಮಾಯವಾದ ಈ ಸಮಾಜದಲ್ಲಿ ಮಗುವಿನ ಹಿತಕ್ಕಾಗಿ ನಮ್ಮ ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಸಂಸ್ಕಾರವನ್ನು ಕೊಡಲಾಯಿತು.ಅನುಪಮಾ ವಿದ್ಯಾಮಂದಿರ ಸಂಸ್ಥೆಯ ಸಂಸ್ಥಾಪಕರಾದ ಎಸ್.ಎಲ್. ಕೃಷ್ಣಮೂರ್ತಿಯವರ ಅನುಪಸ್ಥಿತಿಯಲ್ಲಿ ಶಾಲೆ ಮುಖ್ಯೋಪಾಧ್ಯಾಯ ವೆಂಕಟೇಶ್ ಹಾಜರಿದ್ದರು.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:15 − 2 =
Remember me
