ಮಂಗಳೂರು:ಎರಡು ಆಂಬ್ಯುಲೆನ್ಸ್​​​ಗಳಿಗೆ ದಾರಿ ಬಿಡದೆ ಪುಂಡತನ ತೋರಿದ್ದ ಚಾಲಕನನ್ನು ಕಾರು ಸಮೇತ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮೋನಿಶ್ ಬಂಧಿತ ಕಾರು ಚಾಲಕ. ಬುಧವಾರ ಮಂಗಳೂರಿನಿಂದ ಭಟ್ಕಳಕ್ಕೆ ರೋಗಿಯೊಬ್ಬರು ಆಂಬ್ಯುಲೆನ್ಸ್​​​ನಲ್ಲಿ ತೆರಳುತ್ತಿದ್ದಾಗ ಈ ಪುಂಡ ಕಾರು ಚಾಲಕ ಸುಮಾರು 40 ಕಿ.ಮೀ ದಾರಿ ಬಿಡದೆ ಸತಾಯಿಸಿದ್ದ.
ಈ ಸಂಬಂಧ ಕಾರು ಚಾಲಕನ ವಿರುದ್ಧ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 279, 184 ಐಎಂವಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿತ್ತು.ಇಷ್ಟು ಮಾತ್ರವಲ್ಲದೇ ರಾತ್ರಿ ಮಣಿಪಾಲದಿಂದ ಮಂಗಳೂರಿಗೆ ಬರುತ್ತಿದ್ದ ಆಂಬ್ಯುಲೆನ್ಸ್​​​ಗೂ ಈತ ದಾರಿ ಬಿಡದೆ ಸತಾಯಿಸಿದ್ದಾನೆ. ಇದನ್ನು ಆಂಬ್ಯುಲೆನ್ಸ್ ನಲ್ಲಿದ್ದ ಸಿಬ್ಬಂದಿ ವಿಡಿಯೋ ಮಾಡಿದ್ದರು.
ಈತನ‌ ದುರ್ವರ್ತನೆಯ ವಿಡಿಯೋ ಇಂದು ವೈರಲ್ ಆದ ಬೆನ್ನಲ್ಲೇ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಕಾರು ಚಾಲಕನನ್ನು ಬಂಧಿಸಿರುವ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ.
Sign in to your account
Please enter an answer in digits:12 − 8 =
Remember me
