ಬೆಂಗಳೂರು: ಕೇಂದ್ರ ಸರ್ಕಾರ ಸಿಎಎ ಹಾಗೂ ಎನ್ ಆರ್ ಸಿ ವಿರೋಧಿಸಿ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಹಿಂದೂ-ಮುಸ್ಲಿಂ-ಸಿಖ್- ಈಸಾಯಿ ಫೆಡರೇಷನ್ ಬೆಂಗಳೂರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದ ಯುವತಿ ಅಮೂಲ್ಯ ಲಿಯೋನಾ ಕೊಪ್ಪ ಮೂಲದವಳು ಎಂಬುದು ಈಗ ಜಗಜ್ಜಾಹೀರು.
ಪ್ರತಿಭಟನಾ ವೇದಿಕೆ ಮೇಲಿದ್ದ ಮುಖಂಡರು ಅನಿರೀಕ್ಷಿತ ಬೆಳವಣಿಗೆಯಿಂದ ಬೆಚ್ಚಿಬಿದ್ದಿದ್ದಾರೆ. ಎಲ್ಲರೂ ಆ ಯುವತಿಯಿಂದ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆಕೆಯ ಅಪ್ಪ ಅಮ್ಮ ಇರುವ ಮನೆ ಸಮೀಪಕ್ಕೆ ಅನೇಕರು ಧಾವಿಸಿದ್ದಾರೆ. ಅಲ್ಲಿ ಮಾಧ್ಯಮಗಳಿಗೆ ಆಕೆಯ ತಂದೆ ವಾಜಿ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಅವರಲ್ಲೂ ಆತಂಕ ಮನೆ ಮಾಡಿದೆ.
ಕಳೆದ ಐದು ದಿನಗಳಿಂದ ಆಕೆ ಸಂಪರ್ಕದಲ್ಲಿ ಇಲ್ಲ. ಮಗಳಿಗೆ ಸಾಕಷ್ಟು ಬುದ್ಧಿವಾದ ಹೇಳಿದರೂ ಆಕೆ ಕೇಳುತ್ತಿರಲಿಲ್ಲ. ಈಗ ಐದು ದಿನಗಳ ಹಿಂದೆ ಆಕೆಗೆ ಕರೆ ಮಾಡಿದ್ದೆ, ನನ್ನ ಆರೋಗ್ಯ ಸರಿ ಇಲ್ಲ, ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದಿದ್ದೆ. ಆದರೆ, ನಿನ್ನ ಆರೋಗ್ಯದ ಕಡೆಗೆ ನೀನೇ ಗಮನಕೊಡು ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಳು. ಅಲ್ಲಿಂದೀಚೆಗೆ ಆಕೆಯನ್ನು ನಾನೂ ಸಂಪರ್ಕಿಸಿಲ್ಲ ಎಂದು ವಾಜಿ ಹೇಳಿಕೊಂಡಿದ್ದಾರೆ. ಅವರ ಪೂರ್ಣ ಮಾತುಗಳಿಗೆ ದಿಗ್ವಿಜಯ ನ್ಯೂಸ್​ನ ಈ ವಿಡಿಯೋ ನೋಡಿ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + four =
Remember me
