ಬೆಂಗಳೂರು:ಆರೋಪಿತ ಮುಖ್ಯಮಂತ್ರಿಯನ್ನು ಒಬ್ಬ ಪೊಲೀಸ್ ಇನ್‍ಸ್ಪೆಕ್ಟರ್ ಪ್ರಶ್ನಿಸಿ ತನಿಖೆ ಮಾಡಲು ಸಾಧ್ಯವಿಲ್ಲ. ನಗರಾಭಿವೃದ್ಧಿ ಸಚಿವರಾಗಿ ಬೈರತಿ ಸುರೇಶ್ ಮುಂದುವರಿದೃ ತನಿಖಾಧಿಕಾರಿ ಪ್ರಶ್ನಿಸಲು ಸಾಧ್ಯವೆ ? ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಪ್ರಶ್ನಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಬುಧವಾರ ಮಾತನಾಡಿದ ಅವರು, ಒಬ್ಬ ತನಿಖಾಧಿಕಾರಿ ಮುಖ್ಯಮಂತ್ರಿಯನ್ನು ಹೇಗೆ ತನಿಖೆ ಮಾಡಲು ಸಾಧ್ಯವಿದೆ. ಬೈರತಿ ಸುರೇಶ್ ಅವರೇ ಸಚಿವರಾಗಿ ಮುಂದುವರಿದರೆ ಅವರನ್ನು ತನಿಖಾಧಿಕಾರಿ ಪ್ರಶ್ನೆ ಕೇಳಲು ಸಾಧ್ಯವಿದೆಯೇ?
ವೈಟ್ನರ್ ಖರೀದಿ, ವೈಟ್ನರ್ ಹಚ್ಚುವಾಗ ಫ್ಲೈಟಿನಲ್ಲಿ ಕುಳಿತೇ ಹಚ್ಚಿದ್ದೀರಾ? ಕಾರ್ಯಾಲಯಕ್ಕೆ ಬಂದು ಹಚ್ಚಿದ್ದೀರಾ? ಈ ವೈಟ್ನರ್ ತರಿಸಲು ಯಾರ್ಯಾರನ್ನು ಬಳಸಿಕೊಂಡಿದ್ದೀರಿ?- ಇಂಥ ಪ್ರಶ್ನೆಗಳನ್ನು ಕೇಳಲು ಆಗುವುದಿಲ್ಲ ಎಂದರು.
ಬೈರತಿ ಸುರೇಶ್ ಅವರು ವಾಯುಯಾನ ಮಾಡಿ ಮುಡಾ ಕಡತಗಳನ್ನು ತಂದಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ಅವರ ಏರ್ ಟ್ರಾವೆಲ್‍ಗೆ ಬಳಕೆ ಆಗಿದೆ. ವೈಟ್ನರ್ ಹಚ್ಚಿದ್ದು, ಸಾರ್ವಜನಿಕರ ತೆರಿಗೆ ಹಣವನ್ನು ವೈಟ್ನರ್ ಖರೀದಿಗೆ ಬಳಸಲಾಗಿದೆ. ಯಾಕೆ ಆರೋಪಿತ ವ್ಯಕ್ತಿ ಸಂವಿಧಾನಾತ್ಮಕ ಹುದ್ದೆಯಲ್ಲಿ ಮುಂದುವರಿಯಬಾರದು ಎಂಬುದಕ್ಕೆ ಇದೇ ಉದಾಹರಣೆ ಎಂದು ಸ್ಪಷ್ಟಪಡಿಸಿದರು.
ತಮ್ಮ ಹುದ್ದೆ ಬಳಸಿಕೊಂಡು ಸಾಕ್ಷ್ಯನಾಶ ಮಾಡುವುದು ಮತ್ತು ದಾಖಲೆ ತಿದ್ದುವುದನ್ನು ಮಾಡುತ್ತಿದ್ದಾರೆ. ಇದು ಕ್ರಿಮಿನಲ್ ಬ್ರೀಚ್ ಆಫ್ ಟ್ರಸ್ಟ್. ತಕ್ಷಣವೇ ಬೈರತಿ ಸುರೇಶ್ ಅವರ ಮೇಲೆ ಪ್ರಕರಣ ದಾಖಲಿಸಬೇಕು. ರಾಜ್ಯಪಾಲರು ಆ ವ್ಯಕ್ತಿಯನ್ನು ಸಚಿವಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು. ಇದೇ ಕಾರಣಕ್ಕೆ ಮುಖ್ಯಮಂತ್ರಿಗಳೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲು ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು.
ಸಂವಿಧಾನದ ಗೌರವಯುತ ಸ್ಥಾನದಲ್ಲಿರುವ ಮಾನ್ಯ ರಾಜ್ಯಪಾಲರನ್ನು ಅತ್ಯಂತ ಅವಮಾನಿಸುವ ರೀತಿಯಲ್ಲಿ ವರ್ತಿಸಿದ್ದನ್ನು ಇಡೀ ದೇಶದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಖಂಡಿಸುತ್ತಿದ್ದಾರೆ. ಇದರ ವಿರುದ್ಧ ನಾಳೆ ರಾಜ್ಯಾದ್ಯಂತ ತೀವ್ರತರವಾದ ಹೋರಾಟ ನಡೆಸಲಿದ್ದೇವೆ ಎಂದು ಪಿ. ರಾಜೀವ್ ಹೇಳಿದರು.
ಯಾರಿಂದ ಪ್ರಮಾಣವಚನ ಬೋಧಿಸಲ್ಪಟ್ಟಿದ್ದಾರೋ, ಯಾರು ಸಂವಿಧಾನದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವುದಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೋ ಅಂಥ ಸಚಿವರುಗಳೇ ರಾಜ್ಯಪಾಲರ ರಾಜಭವನಕ್ಕೆ ನುಗ್ಗುತ್ತೇವೆ ಎಂದಿದ್ದಲ್ಲದೇ, ರಾಜ್ಯಪಾಲರಿಗೆ ನಾಲಾಯಕ್ ಎಂಬ ಪದ ಬಳಸಿದ್ದನ್ನು ಖಂಡಿಸಿ, ಹೋರಾಟ ನಡೆಯಲಿದೆ ಎಂದರು.
ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ- ಪ್ರತಿಭಟನೆಯನ್ನು ಸಂವಿಧಾನದ ಚೌಕಟ್ಟಿನಲ್ಲೇ ನಾವು ಕೈಗೊಳ್ಳುತ್ತೇವೆ. ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಈ ಹೋರಾಟದ ಎಲ್ಲ ಕ್ಷಣದ ಬೆಳವಣಿಗೆಗಳ ಸೂಚನೆ ಕೊಟ್ಟಿದ್ದಾರೆ. ಅವರೂ ಹೋರಾಟದಲ್ಲಿ ಇರುತ್ತಾರೆ ಎಂದು ತಿಳಿಸಿದರು.
ಡಿ.ವಿ.ಸದಾನಂದಗೌಡರು ತುಮಕೂರಿನಲ್ಲಿ, ಬಸವರಾಜ ಬೊಮ್ಮಾಯಿ- ದಾವಣಗೆರೆ, ಗೋವಿಂದ ಕಾರಜೋಳ- ಚಿತ್ರದುರ್ಗ, ಆರ್.ಅಶೋಕ್- ಮಂಡ್ಯ, ಡಾ.ಸಿ.ಎನ್.ಅಶ್ವತ್ಥನಾರಾಯಣ್ ಮತ್ತು ಛಲವಾದಿ ನಾರಾಯಣಸ್ವಾಮಿ -ಬೆಂಗಳೂರು, ಬಿ.ಶ್ರೀರಾಮುಲು- ಬಳ್ಳಾರಿ, ಸಿ.ಟಿ.ರವಿ- ಚಿಕ್ಕಮಗಳೂರು, ನಳಿನ್‍ಕುಮಾರ್ ಕಟೀಲ್- ಮಂಗಳೂರಿನಲ್ಲಿ ಭಾಗವಹಿಸುತ್ತಾರೆ. ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು ಆಯಾ ಜಿಲ್ಲೆಗಳಲ್ಲಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಪಿ.ರಾಜೀವ್  ವಿವರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 3 =
Remember me
