ಜಯಪುರ (ಕೊಪ್ಪ): ಲಾಕ್​ಡೌನ್ ಕಾರಣ ಮಟನ್ ಬೆಲೆ ಗಗನಕ್ಕೇರಿದ್ದನ್ನೇ ಬಂಡವಾಳ ಮಾಡಿಕೊಂಡಿದ್ದು, ಕುರಿ ಮಾಂಸದೊಂದಿಗೆ ದನದ ಮಾಂಸ ಸೇರಿಸಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಮಕ್ಕಿಕೊಪ್ಪದ ಅನಿಲ್ ಡಿಮೆಲ್ಲೋ, ಸಿರಾಜ್, ಡೆಂಜಿಲ್ ಹಾಗೂ ಡೆನಿಸ್ ಡಿಸೋಜಾ ಬಂಧಿತರು. ಜಯಪುರದ ಗ್ರಾಮ ಪಂಚಾಯಿತಿಯ ಬಭಾಡಿಗೆ ಮಳಿಗೆ ಇಂಡಿಯನ್ ಮಟನ್ ಸ್ಟಾಲ್​ನಲ್ಲಿ ದನದ ಮಾಂಸವಿರುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಅಂಗಡಿ ಮಾಲೀಕ ಸಿರಾಜ್​ನನ್ನು ಬಂಧಿಸಿದರು. ವಿಚಾರಣೆ ನಡೆಸಿದಾಗ ರೈತರೊಬ್ಬರ ಹಸು ಕಳ್ಳತನ ಮಾಡಿ ಕೊಂದು ಮಕ್ಕಿಕೊಪ್ಪದ ಅನಿಲ್ ಡಿಮೆಲ್ಲೋನ ತೋಟದಲ್ಲಿ ಮಾಂಸ ತಯಾರಿಸಿರುವುದಾಗಿ ಒಪ್ಪಿಕೊಂಡರು. ಕೃತ್ಯಕ್ಕೆ ಬಳಸಿರುವ ಆಯುಧ ಹಾಗೂ 40 ಕೆಜಿ ದನದ ಮಾಂಸ ವಶಪಡಿಸಿಕೊಂಡಿದ್ದಾರೆ.
ಪೊಲೀಸರೊಂದಿಗೆ ವಾಗ್ವಾದ:ದನದ ಮಾಂಸ ವಶಪಡಿಸಿಕೊಳ್ಳಲು ಮಟನ್ ಸ್ಟಾಲ್​ಗೆ ತೆರಳುವ ವೇಳೆ ಪತ್ರಕರ್ತರು ಬರಬಾರದು ಎಂದು ತಡೆದ ಎಎಸ್​ಐ ಸತೀಶ್ ನಡವಳಿಕೆ ಅನುಮಾನಕ್ಕೆ ಕಾರಣವಾಗಿದ್ದು, ಪತ್ರಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.
ಕರೊನಾ ಲಾಕ್​ಡೌನ್​ ನಡುವೆಯೂ ಕಾನೂನಿನ ಅಂಜಿಕೆ ಇಲ್ಲದೇ ಬಯಲಿನಲ್ಲಿಯೇ ಗೋಹತ್ಯೆ?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:twelve + four =
Remember me
