ಬೆಳಗಾವಿ:ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎಂಬ ಹೋರಾಟ ಇಂದು ನಿನ್ನೆಯದಲ್ಲಿ. ಇಂದಿಗೆ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕೊಟ್ಟಿದ್ದ ಗಡುವು ಮುಗಿಯಲಿದ್ದು ಅನೇಕರು ಹೋರಾಟಕ್ಕೆ ಸಿದ್ಧರಾಗಿದ್ದಾರೆ.
ಈ ಹಿಂದೆ ಜಯಮೃತ್ಯುಂಜಯ ಸ್ವಾಮೀಜಿ, ‘ಸಿಎಂ ಕೊಟ್ಟ ಭರವಸೆಯಂತೆ ಡಿಸೆಂಬರ್ 19 ರ ಒಳಗೆ ಮೀಸಲಾತಿ ಘೋಷಣೆ ಮಾಡಬೇಕು. ಭರವಸೆ ಈಡೇರಿಸಿದರೆ ವಿರಾಟ ಸಮಾವೇಶದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಗೆ ಸನ್ಮಾನ ಮಾಡುತ್ತೇವೆ. ಎಲ್ಲಾದರೂ ಮೀಸಲಾತಿ ಘೋಷಣೆ ಮಾಡದಿದ್ದರೆ ಪಂಚಮಸಾಲಿ ಸಮಾಜದ ಶಕ್ತಿ ಪ್ರದೇಶನ ಮಾಡ್ತಿವಿ’ ಎಂದಿದ್ದರು. ಈಗ ಅದರಂತೆಯೆ ಈಗ ಜಯ ಮೃತ್ಯುಂಜಯ ಸ್ವಾಮೀಜಿ ಸಮಾವೇಶ ಶುರು ಮಾಡಿದ್ದಾರೆ.
ಹೋರಾಟದ ಸಂದರ್ಭ ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿ ‘ಇವತ್ತು ನಮ್ಮದು ಅಂತಿಮ ಘಟ್ಟದ ಹೋರಾಟ. ನಮ್ಮ ಸಮಾವೇಶ ಮುಗಿಯೋದ್ರೊಳಗೆ ಸರ್ಕಾರ ಮೀಸಲಾತಿ ಘೋಷಿಸಬೇಕು. ಬೆಳಗಾವಿಯಲ್ಲಿ ಸಿಎಂ ಸುದ್ದಿಗೋಷ್ಠಿ ಮಾಡಿ ತಮ್ಮ ನಿಲುವು ಸಿಎಂ ಸ್ವಷ್ಟಪಡಿಸಬೇಕು. ಮೀಸಲಾತಿ ವಿಚಾರವಾಗಿ ಸ್ಪಷ್ಟತೆ ನೀಡಲಿ. ಕೊಡ್ತಿವಿ ಅಂತಾದರೂ ಹೇಳಲಿ. ಇಲ್ಲ ಅಂತಾದರೂ ಹೇಳಲಿ. ಆಗ ನಮ್ಮ ನಡೆ ನಾವು ಹೇಳುತ್ತೇವೆ. ಮೀಸಲಾತಿ ಸಿಕ್ಕಿಲ್ಲ ಎಂದಾದರೆ ನಾವಂತೂ ಪಾದಯಾತ್ರೆ ಮಾಡೋದು ಶತಸಿದ್ಧ. ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಹೋಗಿಯೇ ಹೋಗ್ತಿವಿ’ ಎಂದಿದ್ದಾರೆ.
ಜೊತೆಗೆ, ‘ಹಿಂದೆ ಯಡಿಯೂರಪ್ಪ ಭರವಸೆ ನಂಬಿದ್ದೆವು. ಆದರೆ ಇನ್ನು ಯಾರ ಭರವಸೆಯನ್ನೂ ನಂಬುವುದಿಲ್ಲ. ಬಸವರಾಜ ಬೊಮ್ಮಾಯಿ ಮೀಸಲಾತಿ ಕೊಡ್ತಾರಾ ಇಲ್ಲವಾ ಅಂತಾ ಈಗಲೇ ಹೇಳಬೇಕು’ ಎಂದು ಸ್ಪಷ್ಟನೆ ಕೇಳಿದ್ದಾರೆ.
ಪಂಚಮಸಾಲಿ ಮೀಸಲಾತಿ ಹೋರಾಟ ಹಿನ್ನೆಲೆ ಸವದತ್ತಿ ಪಟ್ಟಣದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶದ ಹಿನ್ನೆಲೆ ಪೂರ್ಣಕುಂಭ ಮೆರವಣಿಗೆ ಕೂಡ ನಡೆಯಲಿದೆ. ಪಟ್ಟಣದ ಎಪಿಎಂಸಿ ಯಿಂದ ಮೆರವಣಿಗೆ ಆರಂಭವಾಗಿ ತಾಲೂಕು ಕ್ರೀಡಾಂಗಣವೆರೆಗೆ ಪೂರ್ಣಕುಂಭಮೇಳ ಮೆರವಣಿಗೆ ಸಾಗಲಿದೆ. ಮೆರವಣಿಗೆ ಆನಿ ಅಗಸಿ, ಗಾಂಧಿಚೌಕ್, ಎಸ್‌ಎಲ್ಎಒ ಕ್ರಾಸ್, ಮಾರ್ಗವಾಗಿ ಸಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 5 =
Remember me
