ಬೆಂಗಳೂರು:ಕರೊನಾ ಮೂರನೇ ಅಲೆಯ ಬಗ್ಗೆ ತಜ್ಞರು ಮತ್ತು ಸರ್ಕಾರ ಎಚ್ಚರಿಕೆ ನೀಡಿದ್ದರೂ ಜನಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಾರಿ ಸಾರಿ ಹೇಳಿದರೂ ಅದನ್ನು ಲೆಕ್ಕಿಸದ ಜನರು ಮತ್ತೊಮ್ಮೆ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ.
ನಗರದ ವಿವಿಪುರಂನ ಸಜ್ಜನ್​ ರಾವ್​ ವೃತ್ತದ ಬಳಿಯಿರುವ ಫುಡ್​ ಸ್ಟ್ರೀಟ್​ನಲ್ಲಿ ಕೋವಿಡ್​ ನಿಯಮ ಮಾಯಮಾಗಿದೆ. ಪ್ರತಿದಿನ ಸಂಜೆ ನೂರಾರು ಮಂದಿ ಆಹಾರ ಸವಿಯಲು ಫುಡ್​ ಸ್ಟ್ರೀಟ್​ ಬಳಿ ಸೇರುತ್ತಿದ್ದಾರೆ. ಯಾರೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಸರಿಯಾಗಿ ಮಾಸ್ಕ್​ ಧರಿಸದೇ ಗುಂಪು ಗುಂಪಾಗಿ ಒಂದೆಡೆ ಸೇರಿರುವುದು ಕರೊನಾ ಮೂರನೇ ಅಲೆಗೆ ಆಹ್ವಾನ ನೀಡಿದಂತಿದೆ.
ಸರ್ಕಾರ ಪ್ರತಿದಿನ ಕರೊನಾ ನಿಯಮ ಪಾಲಿಸಿ ಎಂದು ಮನವಿ ಮಾಡುತ್ತಲೇ ಬಂದಿದೆ. ಹೀಗಿದ್ದರೂ ಜನ ಸೇರಿರುವುದು ದುರ್ದೈವದ ಸಂಗತಿ. ಫುಡ್​ ಕೋರ್ಟ್​ನಲ್ಲಿ ಅಷ್ಟೊಂದು ಜನ ಸೇರುತ್ತಿದ್ದರೂ ಅಧಿಕಾರಿಗಳು ಸುಮ್ಮನಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಕೂಡಲೇ ಎಚ್ಚೆತ್ತು ಕಟ್ಟುನಿಟ್ಟಾಗಿ ಕರೊನಾ ನಿಯಮ ಪಾಲಿಸುವಂತೆ ಕ್ರಮ ಕೈಗೊಳ್ಳಬೇಕಿದೆ.
ಪೆಗಾಸಸ್ ಸ್ಪೈವೇರ್​ ಎಂದರೇನು? ಹೇಗೆ ಕೆಲಸ ಮಾಡುತ್ತದೆ? ವಾಟ್ಸ್​ಆ್ಯಪ್​ ಮೇಲಿನ ದಾಳಿ ಹೀಗಿರುತ್ತಾ!?

ಆಲ್​ ದಿ ಬೆಸ್ಟ್​ ಮಕ್ಕಳೇ: ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ

ವಿಶ್ವದ 6 ಪ್ರತಿಭಾವಂತ ಮಹಿಳೆಯರಲ್ಲಿ ನಿರ್ಭಯಾ ಪ್ರಕರಣದ ವಕೀಲೆಯು ಒಬ್ಬರು! ಹುಬ್ಬೇರಿಸುವ ಮುನ್ನ ಅಸಲಿ ವಿಚಾರ ಓದಿ

Sign in to your account
Please enter an answer in digits:sixteen − 8 =
Remember me
