ಬೆಂಗಳೂರು:ಜ್ಯುವೆಲ್ಲರಿ ಶಾಪ್​​ಗಳಲ್ಲಿ ಯಾರನ್ನಾದರೂ ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಅವರ ಪೂರ್ವಪರ ಬಗ್ಗೆ ಎಚ್ಚರವಹಿಸುವು ತುಂಬಾ ಒಳಿತು. ಕೆಲಸಕ್ಕೆ ಸಿಗ್ತಾರೆ ಅಂತಾ ಸಿಕ್ಕ ಸಿಕ್ಕವರನ್ನು ಸೇರಿಸಿಕೊಂಡರೆ ಕೊನೆಗೆ ಉಂಡೆ ನಾಮ ಬೀಳುವುದು ಗ್ಯಾರೆಂಟಿ ಎನ್ನುವುದಕ್ಕೆ ಈ ಘಟನೆ ತಾಜಾ ನಿದರ್ಶನವಾಗಿದೆ.
ಖತರ್ನಾಕ್​ ಮಹಿಳೆಯೊಬ್ಬಳು ಕೆಲಸಕ್ಕೆ ಸೇರಿದ ಒಂದೇ ವಾರದಲ್ಲಿ ಜುವೆಲ್ಲರಿ ಶಾಪ್​ನಲ್ಲಿ ತನ್ನ ಕೈಚಳಕ ತೋರಿದ್ದಾಳೆ. ಚಿನ್ನ ತೋರಿಸುವ ಕೆಲಸ ಮಾಡುತ್ತಲೇ ಚಿನ್ನಾಭರಣವನ್ನು ಎಗರಿಸಿಕೊಂಡು ಹೋಗಿದ್ದಾಳೆ. ಯಲಹಂಕದ ಪ್ರತಿಷ್ಠಿತ ಜ್ಯುವೆಲ್ಲರ್ಸ್​ನಲ್ಲಿ ಮಹಿಳೆ ಕೆಲಸಕ್ಕೆ ಸೇರಿದ್ದಳು. ಚಿನ್ನ ಮತ್ತು ವಜ್ರದ ಆಭರಣಗಳ ಜಾಗದಲ್ಲಿ ನಕಲಿ ಆಭರಣಯಿಟ್ಟು ಮಾಲೀಕನಿಗೆ ಅನುಮಾನ ಬಾರದಂತೆ ಆತನಿಗೆ ಪಂಗನಾಮ ಹಾಕುತ್ತಿದ್ದವಳನ್ನು ಕೊನೆಗೆ ಬಂಧಿಸಲಾಗಿದೆ.
ಬಂಧಿತಳನ್ನು ವಾಣಿ ವಾಡೇಕರ್ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಬರೋಬ್ಬರಿ 58.60 ಲಕ್ಷ ರೂ. ಮೌಲ್ಯದ ಡೈಮಂಡ್​ ಹಾಗೂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಈಕೆ Rmz galleriya ಮಾಲ್​ನಲ್ಲಿರುವ ತನಿಷ್ಕ್ ಜುವೆಲ್ಲರಿಯಲ್ಲಿ ಸೇಲ್ಸ್ ಆಫೀಸರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು.
ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಕೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ರಾಜ್ಯ ರಾಜಕೀಯದಲ್ಲಿ 2ನೇ ಇನ್ನಿಂಗ್ಸ್ ಶುರು ಮಾಡಿರೋ ಜನಾರ್ದನ ರೆಡ್ಡಿಗೆ ಆರಂಭದಲ್ಲೇ ಹ್ಯಾಕರ್ಸ್​ ಶಾಕ್​!

ನಿಮ್ಮ ಕಣ್ಣಿಗೊಂದು ಸವಾಲ್​: ಸಾಧ್ಯವಾದ್ರೆ ಈ ಫೋಟೋದಲ್ಲಿರುವ ಹೆಲಿಕಾಪ್ಟರ್​ ಪತ್ತೆ ಹಚ್ಚಿ…

ತನ್ನೊಂದಿಗೆ ಬೈಕ್​ನಲ್ಲಿ ಬರಲು ನಿರಾಕರಿಸಿದ ಮಹಿಳೆಯ ಮೇಲೆ ಹೆಲ್ಮೆಟ್​ನಿಂದ ಹಲ್ಲೆ ಮಾಡಿದ ಸವಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − seven =
Remember me
