ಬೆಂಗಳೂರು:ಆರ್ಥೊಡಾಂಟಿಕ್ ಚಿಕಿತ್ಸೆ ನೀಡುವ ಪ್ರಕ್ರಿಯೆಯಲ್ಲಿ ದಂತವೈದ್ಯರೊಬ್ಬರು ಆಕಸ್ಮಿಕವಾಗಿ ಬೆಂಗಳೂರಿನ ಮಹಿಳೆಯ ತುಟಿಯನ್ನು ಕತ್ತರಿಸಿ ಸಂಕಷ್ಟಕ್ಕೆ ಸಿಲುಕಿ ಕೊಂಡಿದ್ದಾರೆ.
ಮಹಿಳೆಗೆ ವೈದ್ಯರು ಐದು ಹೊಲಿಗೆಗಳು ಮತ್ತು ಪ್ಲಾಸ್ಟಿಕ್ ಸರ್ಜರಿ ಮಾಡಿದ್ದಾರೆ. ಘಟನೆಯಿಂದ ಆಘಾತಕ್ಕೊಳಗಾದ ಮಹಿಳೆ, ಗ್ರಾಹಕ ನ್ಯಾಯಾಲಯದಲ್ಲಿ ದಂತವೈದ್ಯರ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಗ್ರಾಹಕ ನ್ಯಾಯಾಲಯ, ರೋಗಿಯ ಬಗ್ಗೆ ಸಾಂದರ್ಭಿಕ ಮತ್ತು ವೃತ್ತಿಪರವಲ್ಲದ ವರ್ತನೆಗೆ ಅವರನ್ನು ಹೊಣೆಗಾರರನ್ನಾಗಿಸಿ, 60,000 ರೂಪಾಯಿಗಳ ಪರಿಹಾರವನ್ನು ನೀಡುವಂತೆ ಆದೇಶಿಸಿದೆ.
ಇದನ್ನೂ ಓದಿ:ಶ್ವಾನಗಳಿಗೆ ನಡೆಯಿತು ಅದ್ಧೂರಿ ವಿವಾಹ! ನಂತರ ನಡೆದಿದ್ದು ಮದುವೆಯ ಸೈಡ್​ ಎಫೆಕ್ಟ್​, ವಿಡಿಯೋ ವೈರಲ್​​
ನಡೆದಿದ್ದೇನು?:ರಾಮಮೂರ್ತಿನಗರದ 32 ವರ್ಷದ ಇಬ್ಬರು ಮಕ್ಕಳ ತಾಯಿಯು 2020ರ ಜೂನ್ 13ರ ಸಂಜೆ ಹೊರಮಾವುನಲ್ಲಿರುವ ಶ್ಯೂರ್ ಸ್ಮೈಲ್ ಡೆಂಟಲ್ ಕೇರ್‌ಗೆ ಹೋಗಿದ್ದಾರೆ. ಪರಿಚಯವಿದ್ದ ಆರ್ಥೊಡಾಂಟಿಸ್ಟ್ ವಿನೋದ್ ಪಟ್ಟಾಬಿರಾಮನ್ ಬಳಿ ಚಿಕಿತ್ಸೆ ಪಡೆದಿದ್ದಾರೆ. ಮಹಿಳೆಯ ಮುಂಭಾಗದ ಹಲ್ಲಿನ ಮೇಲೆ ಆರ್ಥೊಡಾಂಟಿಕ್ಸ್ ಮಾಡುತ್ತಿದ್ದಾಗ ಡೆಂಟಲ್ ಬ್ಲೇಡ್ ಯಂತ್ರವನ್ನು ಬಳಸುವಾಗ ಆಕಸ್ಮಿಕವಾಗಿ ಆಕೆಯ ಮೇಲಿನ ತುಟಿಯನ್ನು ಕತ್ತರಿಸಿದ್ದಾರೆ.

ಗಾಯದಿಂದ ರಕ್ತವು ಹೊರಬರಲು ಪ್ರಾರಂಭಿಸಿತು. ಆಘಾತಕ್ಕೊಳಗಾದ ಮಹಿಳೆ ತನ್ನ ಗಾಯವನ್ನು ನೋಡಿಕೊಳ್ಳಲು ಕನ್ನಡಿಯನ್ನು ಕೇಳಿದ್ದಾರೆ. ಆದರೆ ಕನ್ನಡಿ ಕೊಡಲು ದಂತವೈದ್ಯರು ನಿರಾಕರಿಸಿದ್ದಾರೆ. ಇದು ಕೇವಲ ಒಂದು ಸಣ್ಣ ಗಾಯ ಎಂದು ಹೇಳಿ ಬ್ಯಾಂಡೇಜ್​ ಹಾಕಿ 5,000 ರೂ. ಜಾರ್ಜ್​​ ಮಾಡಿ ಮೆನಗೆ ಕಳುಹಿಸಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ 2 ಸಾವಿರ ಗಡಿ ದಾಟಿದ ಡೆಂಘಿ ಕೇಸ್: ಎಚ್ಚರಿಕೆ ವಹಿಸುವಂತೆ ವೈದ್ಯರ ಸಲಹೆ
ಮನೆಗೆ ಬಂದು ಮಹಿಳೆ ಗಾಯವನ್ನು ನೋಡಿಕೊಂಡಿದ್ದಾರೆ. ಗಾಯದ ತೀವ್ರತೆಯನ್ನು ಅರಿತು, ರಕ್ತಸ್ರಾವ ನಿಲ್ಲದ ಕಾರಣ ಮಹಿಳೆ ಬೇರೆ ಆಸ್ಪತ್ರೆಗೆ ಹೋಗಿದ್ದಾರೆ. ವೈದ್ಯರು ಪರೀಕ್ಷೆ ಮಾಡಿ, ತಕ್ಷಣವೇ ಐದು ಹೊಲಿಗೆಗಳನ್ನು ಹಾಕಬೇಕೆಂದು ತಿಳಿಸಿದ್ದಾರೆ. ನಂತರ ಮಹಿಳೆ ಚಿಕಿತ್ಸೆ ಪಡೆದುಕೊಂಡು ಮನೆಗೆ ಬಂದಿದ್ದಾರೆ. ಆಕೆಯ ಪತಿ ದಂತವೈದ್ಯರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿದಾಗ, ಕ್ಲಿನಿಕ್‌ಗೆ ಬರುವಂತೆ ಹೇಳಿದ್ದಾರೆ. ಆಘಾತಕ್ಕೊಳಗಾದ ಮಹಿಳೆ ಬೇರೆ ಆಸ್ಪತ್ರೆಗೆ ಹೋಗಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಡಿದ್ದಾರೆ. ಆದಾಗ್ಯೂ, ಎರಡು ದಿನಗಳ ನಂತರ, ಬ್ಯಾಂಡೇಜ್ ತೆಗೆದ ನಂತರ ಮಹಿಳೆ ಕನ್ನಡಿಯಲ್ಲಿ ತನ್ನನ್ನು ನೋಡಿ ಬೇಸಗೊಂಡಿದ್ದಾರೆ. ಅವಳ ತುಟಿಯಿಂದ ಮೂಗಿನವರೆಗೆ ದೊಡ್ಡ ಗಾಯದ ಗುರುತು ಹಾಗೆ ಇತ್ತು.

ತನಗೆ ಜೀವನಪರ್ಯಂತ ಈ ಗಾಯದ ಗುರುತು ಹಾಗೆ ಇರುತ್ತದೆ ಎಂದು ಅರಿತು ಮಹಿಳೆ ಆಸ್ಪತ್ರೆಯ ದಂತ ವೈದ್ಯರಿಗೆ ನೋಟಿಸ್​ ಕಳಿಸಿದ್ದಾರೆ. 30 ಲಕ್ಷ ರೂ. ಪರಿಹಾರ ಕೋರಿ, ಅವರು ಶಾಂತಿನಗರದಲ್ಲಿರುವ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಸಂಪರ್ಕಿಸಿದ್ದಾರೆ. ಸೆಪ್ಟೆಂಬರ್ 2020 ರಲ್ಲಿ ಮೊಕದ್ದಮೆ ಪ್ರಾರಂಭವಾಯಿತು ಮತ್ತು ಮಹಿಳೆಯ ವಕೀಲರು ತಮ್ಮ ವಾದವನ್ನು ಮಂಡಿಸಿದರು.
ಇದನ್ನೂ ಓದಿ:108 ಆ್ಯಂಬುಲೆನ್ಸ್​ ಸಿಬ್ಬಂದಿಗೆ ಪಾವತಿಯಾಗದ ವೇತನ; ಮತ್ತೆ ಹೋರಾಟದ ಎಚ್ಚರಿಕೆ ಕೊಟ್ಟ ನೌಕರರು
ದಂತ ವೈದ್ಯರ ಪರ ವಕೀಲರು ವಾದಿಸಿ, ಚಿಕಿತ್ಸೆ ವೇಳೆ ದೂರುದಾರರ ಮೇಲಿನ ತುಟಿಯಲ್ಲಿ ಗಾಯವಾಗಿದ್ದು, ವೈದ್ಯರ ನಿರ್ಲಕ್ಷ್ಯದಿಂದಾಗಲೀ ಅಥವಾ ಉದ್ದೇಶಪೂರ್ವಕವಾಗಿಯಾಗಲೀ ಆಗಿಲ್ಲ. ಹಲ್ಲಿನ ಚಿಕಿತ್ಸಾ ವಿಧಾನದ ಪ್ರಕ್ರಿಯೆಯಲ್ಲಿ ಮೃದು ಅಂಗಾಂಶಕ್ಕೆ ಗಾಯವು ಒಂದು ಸಂಭವನೀಯತೆಯಾಗಿದೆ ಮತ್ತು ರಕ್ತಸ್ರಾವವಾಗುತ್ತದೆ. ಇದು ಯಾವುದೇ ಗಂಭೀರ ಸಮಸ್ಯೆ ಅಲ್ಲ. ಹೊಲಿಗೆಗಳ ಅಗತ್ಯವೂ ಇರಲಿಲ್ಲ ಎಂದು ವಕೀಲರು ವಾದಿಸಿದರು.

ರೋಗಿಯು ದಂತವೈದ್ಯರ ಚಿಕಿತ್ಸಾಲಯಕ್ಕೆ ಮತ್ತೆ ಬಂದಿಲ್ಲ ಅವರು ಇನ್ನೂ 85,000 ರೂ. ಚಿಕಿತ್ಸೆಯ ಮೊತ್ತವನ್ನು ಕೊಡುವುದು ಬಾಕಿಯಿರುವ ಶುಲ್ಕವನ್ನು ಪಾವತಿಸಬೇಕಾಗಿದೆ. ಗಾಯವನ್ನು ಸರಿಪಡಿಸಲು ಮತ್ತೆ ಕ್ಲಿನಿಕ್‌ಗೆ ಬರುವಂತೆ ದಂತವೈದ್ಯರು ಮಹಿಳೆಯನ್ನು ಕೇಳಿದರು, ಆದರೆ ಅವರು ನಿರಾಕರಿಸಿದರು ಮತ್ತು ಬೇರೆಡೆ ಹೆಚ್ಚಿನ ಚಿಕಿತ್ಸೆ ತೆಗೆದುಕೊಂಡರು, ಅದು ಸಣ್ಣ ಗಾಯವನ್ನು ಉಲ್ಬಣಗೊಳಿಸಿತು ಎಂದು ವಕೀಲರು ಹೇಳಿದರು.
ಸಂತ್ರಸ್ತ ಮಹಿಳೆಯ ಪರ ವಕೀಲರು ಮತ್ತು ದಂತ ವೈದ್ಯರ ಪರ ವಕೀಲರು ವಾದವನ್ನು ಪರಿಗಣಿಸಿದ ಗ್ರಾಹಕ ನ್ಯಾಯಾಲಯ, ಇದು ರೋಗಿಯ ಬಗ್ಗೆ ಸಾಂದರ್ಭಿಕ ಮತ್ತು ವೃತ್ತಿಪರವಲ್ಲದ ವರ್ತನೆಗೆ ಅವರನ್ನು ಹೊಣೆಗಾರರನ್ನಾಗಿಸಿತು ಮತ್ತು 60,000 ರೂಪಾಯಿಗಳ ಪರಿಹಾರವನ್ನು ನೀಡುವಂತೆ ಆದೇಶಿಸಿದೆ.
ಮಧ್ಯಮ ವರ್ಗದಿಂದ ಬಂದ ಈ ಜನಪ್ರಿಯ ಯೂಟ್ಯೂಬರ್ ಸಂಪಾದನೆ ಕೇಳಿದ್ರೆ ಹುಬ್ಬೇರಿಸ್ತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 1 =
Remember me
