ಶ್ರೀಶೈಲಂ (ಆಂಧ್ರಪ್ರದೇಶ): ಪಂಚಪೀಠಗಳ ಪೀಠಾಚಾರ್ಯರಲ್ಲಿ ಒಬ್ಬರಾದ ಶ್ರೀಶೈಲದ ಜಗದ್ಗುರು ಪಂಡಿತಾರಾಧ್ಯರು ತಮ್ಮಲ್ಲಿರುವ ಪಾಂಡಿತ್ಯ ಮತ್ತು ತಪಸ್ಶಕ್ತಿ ಮೂಲಕ ಪಂಡಿತರೆಲ್ಲರಿಗೂ ಪೂಜ್ಯರಾಗಿದ್ದರು ಎಂದು ಶ್ರೀಶೈಲದ ಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಶಿವರಾತ್ರಿ ನಿಮಿತ್ತ ಶ್ರೀಶೈಲದ ಜಗದ್ಗುರು ಸೂರ್ಯಸಿಂಹಾಸನ ಮಹಾಪೀಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಗದ್ಗುರು ಪಂಡಿತಾರಾಧ್ಯ ಜಯಂತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಶಿವಾಗಮಗಳ ಉಲ್ಲೇಖದನ್ವಯ ಕಲಿಯುಗದ ಪ್ರಾರಂಭದಲ್ಲಿ ಶಿವರಾತ್ರಿಯ ಪವಿತ್ರ ದಿನದಂದು ಜಗದ್ಗುರು ಪಂಡಿತಾರಾಧ್ಯರು ಶ್ರೀಶೈಲದ ಮಲ್ಲಿಕಾರ್ಜುನ ಜ್ಯೋತಿರ್ಲಿಂಗದಿಂದ ಪ್ರಾದುರ್ಭವಿಸಿ ದೇವಸ್ಥಾನದ ನೈಋತ್ಯ ದಿಕ್ಕಿಗೆ ಸಮೀಪದಲ್ಲಿಯೇ ಸೂರ್ಯ ಸಿಂಹಾಸನ ಮಹಾಪೀಠವನ್ನು ಸಂಸ್ಥಾಪಿಸಿದರು. ಈ ಪೀಠದ ಮೂಲಕ ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮುಂತಾದ ಅನೇಕ ರಾಜ್ಯಗಳಲ್ಲಿ ಸಂಚರಿಸಿ ವೀರಶೈವ ಲಿಂಗಾಯತ ಧರ್ಮವನ್ನು ಪ್ರಸಾರ ಮತ್ತು ಪ್ರಚಾರಗೊಳಿಸಿದರು. ಈ ಸಂದರ್ಭದಲ್ಲಿ ಇವರ ಸಂಪರ್ಕಕ್ಕೆ ಬಂದ ಎಲ್ಲ ಪಂಡಿತರಿಗೆ ಶಿವೋಪದಿಷ್ಟವಾದ ವೀರಶೈವ ಧರ್ಮದ ತತ್ವ ಸಿದ್ಧಾಂತಗಳನ್ನು ಉಪದೇಶ ಮಾಡಿದರು ಎಂದರು.
ಜಯಂತಿ ಪ್ರಯುಕ್ತ ಜಗದ್ಗುರು ಪಂಡಿತಾರಾಧ್ಯರ ಲಿಂಗೋದ್ಭವ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಮತ್ತು ಮಹಾ ಮಂಗಳಾರತಿ ಪೂಜೆಗಳು ವೈಭವದಿಂದ ಜರುಗಿದವು. ಜೈನಾಪುರದ ರೇಣುಕ ಶಿವಾಚಾರ್ಯರು, ಹಿರೇಜೇವರ್ಗಿಯ ಜಯಶಾಂತಲಿಂಗ ಶಿವಾಚಾರ್ಯರು, ಗಂಗಾವತಿ ಕಟ್ಟಿ ಶ್ರೀಗಳು ಉಪದೇಶಾಮೃತ ನೀಡಿದರು. ಸಾಹಿತಿ, ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ, ಪ್ರಭುಗೌಡ ಜಂಗಮಶೆಟ್ಟಿ, ನಂದಬಸಪ್ಪ ಚೌದ್ರಿ ಇದ್ದರು. ಐನಳ್ಳಿಯ ಶರಣೆ ನೀಲಮ್ಮ ಪ್ರಾರ್ಥಿಸಿದರು. ಕಲ್ಲಯ್ಯ ಶಾಸ್ತ್ರಿಗಳು ವೇದಘೊಷ ಪಠಿಸಿದರು. ಅರಣ್ಯಾಧಿಕಾರಿ ಕೆ.ಎನ್. ರಾವ್ ಶಂಖನಾದ ಊದಿದರು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × 3 =
Remember me
