ಬೆಂಗಳೂರು:18 ವರ್ಷದ ತರುಣ್ ಬಾಲಚಂದ್ರ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದು ಮೆದುಳು ನಿಷ್ಕ್ರಿಯಗೊಂಡಿದ್ದ. ಮಗನ ಸ್ಥಿತಿ ನೋಡಿ ನೊಂದ ಪೋಷಕರು ಆತನ ಅಂಗಾಂಗಗಳನ್ನು ದಾನ ಮಾಡಿ ಆರು ಮಂದಿ ಮಧ್ಯವಯಸ್ಕರಿಗೆ ಜೀವದಾನ ಮಾಡಿದ್ದಾರೆ.
ಕುಟುಂಬದ ಏಕೈಕ ಆಧಾರವಾಗಿರುವ ತರುಣ್ ಶಿವಮೊಗ್ಗ ಜಿಲ್ಲೆಯವರು. ಹಣ ಸಂಪಾದಿಸಲು ಮತ್ತು ಪೋಷಕರನ್ನು ಬೆಂಬಲಿಸಲು, ತರುಣ್ ಬೆಂಗಳೂರಿಗೆ ತೆರಳಿ ರೆಸ್ಟೋರೆಂಟ್ ಮತ್ತು ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು. ತರುಣ್ ಬಾಲಚಂದ್ರನ್ ನಗರದ ಕೆಂಗೇರಿ ಬಳಿಯ ನಿರ್ಮಾಣ ಹಂತದಲ್ಲಿರುವ ಕಟ್ಟಡದ 2ನೇ ಮಹಡಿಯಿಂದ ಡಿ.19ರಂದು ಆಯತಪ್ಪಿ ಬಿದ್ದಿದ್ದ ಗಂಭೀರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗಾಗಿ ಹತ್ತಿರದ ಗ್ಲೆನಿಗಲ್ ಅಸ್ಪತ್ರೆಗೆ ದಾಖಲಿಸಲಾಗಿತ್ತು.
ತಪಾಸಣೆ ನಡೆಸಿದ ವೈದ್ಯರು ಮಿದುಳು ನಿಷ್ಕ್ರಿಯಗೊಂಡಿದೆ. ಸಾಮಾನ್ಯವಾಗಿ 1-2 ದಿನಗಳವರೆಗೆ ಬದುಕುಳಿಯುತ್ತಾರೆ ಮತ್ತು ನಂತರ ಸಾವಿಗೆ ಬಲಿಯಾಗುತ್ತಾರೆ ಎಂದು ತಿಳಿಸಿದ್ದರು.
ಗಾರೆ ಕೆಲಸದ ಸಹಾಯಕರಾಗಿ ಕೆಲಸ ಮಾಡುವ ಬಾಲಚಂದ್ರ ಹಾಗೂ ಲತಾ ದಂಪತಿ ತಮ್ಮ ಮಗನ ಅಂಗಾಂಗ ದಾನ ಮಾಡಲು ಇಷ್ಟವಿರಲಿಲ್ಲ. ಮಗನ ದೇಹವನ್ನು ಬೇರ್ಪಡಿಸುವ ಆಲೋಚನೆಯೇ ಅವರಿಗೆ ತುಂಬಾ ಆಘಾತಕಾರಿಯಾಗಿತ್ತು.  ವೈದ್ಯರು ಅವರೊಂದಿಗೆ 45 ನಿಮಿಷಗಳ ಕಾಲ ಮಾತನಾಡಿದ ನಂತರ ಅಂತಿಮವಾಗಿ ಅವರು ಒಪ್ಪಿಗೆ ನೀಡಿದರು.
ಎಲ್ಲಾ ಅಂಗಗಳನ್ನು ಸ್ವೀಕರಿಸಿದವರು ಪುರುಷರು. ತರುಣ್ ಅವರ ಕಣ್ಣುಗಳನ್ನು ಪ್ರಭಾ ನೇತ್ರ ಬ್ಯಾಂಕ್‌ಗೆ ದಾನ ಮಾಡಲಾಗಿದೆ. ಯಕೃತ್ತು ಮತ್ತು ಹೃದಯ ಕಸಿಗಳನ್ನು ಬಿಜಿಎಸ್‌ನಲ್ಲಿ ನಡೆಸಲಾಗಿದ್ದು, ಮೂತ್ರಪಿಂಡ ಸ್ವೀಕರಿಸುವವರಿಗೆ ನಾರಾಯಣ ಹೆಲ್ತ್‌ನಲ್ಲಿ ಕಸಿ ಮಾಡಲಾಗಿದೆ.
Gold, Silver Price; ಹೊಸ ವರ್ಷದಂದು ಚಿನ್ನಾಭರಣ ಪ್ರಿಯರಿಗೆ ಗುಡ್​ ನ್ಯೂಸ್​; ಚಿನ್ನ, ಬೆಳ್ಳಿ ದರ ಪಟ್ಟಿ ಇಲ್ಲಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
