ಬಳ್ಳಾರಿ:ಮದುವೆಗೆ ಬಂದ ಬೀಗರ ವಾಸ್ತವ್ಯಕ್ಕೆ ಗ್ರಾಮ ಪಂಚಾಯಿತಿ ಕಾರ್ಯಾಲಯವನ್ನೇ ಪಿಡಿಒ ಬಿಟ್ಟುಕೊಟ್ಟ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಸಿರಗುಪ್ಪ ತಾಲೂಕಿನ ಬೀರಹಳ್ಳಿಯಲ್ಲಿ ಗುರುವಾರ ಗ್ರಾಮದ ಹನುಮಂತ ಎಂಬುವವರ ಮದುವೆ ನೆರವೇರಿತು. ಬುಧವಾರ ರಾತ್ರಿಯೇ ಹೆಣ್ಣಿನ ಕಡೆಯವರು ಮದುವೆಗೆ ಬಂದಿದ್ದರು. ಅವರಿಗೆಲ್ಲ ಉಳಿದುಕೊಳ್ಳಲು ಗ್ರಾಪಂ ಕಾರ್ಯಾಲಯದಲ್ಲೇ ಗಂಡಿನ ಕಡೆಯವರು ವ್ಯವಸ್ಥೆ ಮಾಡಿಸಿದ್ದರು!
ಹೆಣ್ಣಿನ‌ ಕಡೆಯುವರಿಗೆ ಉಳಿದುಕೊಳ್ಳಲು ಗ್ರಾಪಂ ಕಾರ್ಯಾಲಯವನ್ನೇ ಕೊಡಿಸಿದ ಗಂಡಿನ ಕಡೆಯವರು ಮತ್ತು ಇದಕ್ಕೆ ಅವಕಾಶ ಮಾಡಿಕೊಟ್ಟ ಪಿಡಿಒ ಮಾನಪ್ಪ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರ ಒತ್ತಡಕ್ಕೆ ಮಣಿದು ಗ್ರಾಪಂ ಕಾರ್ಯಾಲಯದಲ್ಲಿ ಮದುವೆ ಹೆಣ್ಣಿನ ಸಂಬಂಧಿಕರಿಗೆ ಉಳಿಯಲು ವ್ಯವಸ್ಥೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಗ್ರಾಮದ ಸರ್ವತೋಮುಖ ಅಭಿವೃದ್ಧಿ ಕೇಂದ್ರವಾಗಿರುವ ಗ್ರಾಪಂ ಕಾರ್ಯಾಲಯವನ್ನು ವೈಯಕ್ತಿಕ ಕಾರ್ಯಕ್ರಮಕ್ಕೆ ಬಳಸಿಕೊಂಡದ್ದು ಸರಿಯಲ್ಲ ಎಂದು ಕೆಲವರು ಅಸಮಾಧಾನ ಹೊರಹಾಕಿದ್ದಾರೆ.
ಇದು ಅಂತಿಂಥ ಮದ್ವೆ ಅಲ್ಲ! ವಿವಾಹ ಆಮಂತ್ರಣದಲ್ಲೇ ಇದೆ ಭಾರಿ ವಿಶೇಷತೆ

ಧ್ರುವ ಸರ್ಜಾ ಪ್ರೀತಿಯಿಂದ ತಂದ ತೊಟ್ಟಿಲಲ್ಲಿ ಜೂ.ಚಿರುವನ್ನು ಹಾಕದ ಮೇಘನಾ! ಬೇರೆ ತೊಟ್ಟಿಲು ತರಿಸಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 3 =
Remember me
