ಬೆಂಗಳೂರು:ಎಡ್ಟೆಕ್ ಮೇಜರ್ ಬೈಜುಸ್‌ನ ಸಂಸ್ಥಾಪಕರಾದ ಬೈಜು ರವೀಂದ್ರನ್, ಕಂಪನಿಯು ಹಣದ ಕೊರತೆಯನ್ನು ಎದುರಿಸುತ್ತಿದ್ದನ್ನು ಗಮನಿಸಿ, ತಮ್ಮ ಉದ್ಯೋಗಿಗಳಿಗೆ ತಿಂಗಳ ಸಂಬಳವನ್ನು ಪಾವತಿಸಲು ತಮ್ಮದೇ ಸ್ವಂತ ಮನೆ ಹಾಗೂ ಕುಟುಂಬದವರ ಒಡೆತನದ ಮನೆಗಳನ್ನು ಅಡ ಇಟ್ಟಿರುವ ಸುದ್ದಿ ಸದ್ಯ ಅನೇಕರನ್ನು ಭಾರೀ ಅಚ್ಚರಿಗೆ ದೂಡಿದೆ.
ಇದನ್ನೂ ಓದಿ:ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಗೆ ಬಿಗ್ ಶಾಕ್ : ವಿಜಯೇಂದ್ರ ಸಂಬಂಧಿ ಯಾದಗಿರಿ ಡಿಎಚ್ ಒ ‌ಮಾನಕರ್ ಮನೆ ಮೇಲೆ ಲೋಕಾಯುಕ್ತ ದಾಳಿ
ಬ್ಲೂಮ್‌ಬರ್ಗ್‌ನ ವರದಿಯ ಪ್ರಕಾರ, ಬೆಂಗಳೂರಿನಲ್ಲಿ ರವೀಂದ್ರನ್ ಅವರ ಕುಟುಂಬದ ಒಡೆತನದ ಎರಡು ಮನೆಗಳು ಮತ್ತು ನಗರದ ಎಪ್ಸಿಲಾನ್‌ನಲ್ಲಿರುವ ಅವರ ನಿರ್ಮಾಣ ಹಂತದ ವಿಲ್ಲಾವನ್ನು 12 ಡಾಲರ್ ಮಿಲಿಯನ್​ಗೆ ಅಡವಿಟ್ಟು ಅದರ ಮೇಲಾಧಾರವಾಗಿ ಬರುವ ಹಣವನ್ನು ತಮ್ಮ ಬೈಜು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 15,000 ಉದ್ಯೋಗಿಗಳಿಗೆ ಸಂಬಳ ನೀಡಲು ಬಳಸಿಕೊಂಡಿದ್ದಾರೆ ಎನ್ನಲಾಗಿದೆ.
ಹಲವು ದಿನಗಳಿಂದ ಬೈಜು ಸಂಸ್ಥೆ, ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್. ಎಡ್ಟೆಕ್ ಕಂಪನಿಯು ಆರ್ಥಿಕ ಮುಗ್ಗಟ್ಟು ಸೇರಿದಂತೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ.
ಇದನ್ನೂ ಓದಿ:ಕಾವಾಡಿಗರ ವಿಡಿಯೋ ವೈರಲ್: ‘ಅರ್ಜುನ’ನ ಸಾವಿನ ಸುತ್ತ ಅನುಮಾನದ ಹುತ್ತ… ಅರಣ್ಯ ಇಲಾಖೆ ಸಿಬ್ಬಂದಿ ಮತ್ತೊಂದು ಎಡವಟ್ಟು ಬಯಲು?
ರವೀಂದ್ರನ್ ಅವರು ತಮ್ಮ ಎಲ್ಲಾ ಷೇರುಗಳನ್ನು ಮಾತೃ ಸಂಸ್ಥೆಯಲ್ಲಿ ಅಡವಿಟ್ಟು, ಸುಮಾರು 400 ಮಿಲಿಯನ್ ಡಾಲರ್ ಹಣವನ್ನು ಪಡೆಯಲು ಮುಂದಾಗಿದ್ದಾರೆ. ಇದಲ್ಲದೆ ಅವರು ಕಳೆದೆರಡು ವರ್ಷಗಳಲ್ಲಿ ಷೇರು ಮಾರಾಟದ ಮೂಲಕ ಸಂಗ್ರಹಿಸಿದ 800 ಮಿಲಿಯನ್ ಡಾಲರ್‌ ಹಣವನ್ನೂ ಕಂಪನಿಗೆ ಹೂಡಿಕೆ ಮಾಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಅವರು ಭಾರೀ ನಗದು ಕೊರತೆ ಎದುರಿಸುತ್ತಿದ್ದಾರೆ.
ಕಳೆದ ವರ್ಷ ಕಂಪನಿಯು ಹಣವನ್ನು ಉಳಿಸಲು 2,500 ಉದ್ಯೋಗಿಗಳನ್ನು ವಜಾಗೊಳಿಸಿದಾಗ ಬೈಜುಸ್‌ಗೆ ಹಲವು ಸವಾಲುಗಳು ಎದುರಾದವು. ಈ ವರ್ಷದ ಆರಂಭದಲ್ಲಿ, ಎಡ್-ಟೆಕ್ ಕಂಪನಿಯು ಸುಮಾರು 1,000 ಉದ್ಯೋಗಿಗಳನ್ನು ವಜಾಗೊಳಿಸಿತು ಮತ್ತು ಇತರ ಉದ್ಯೋಗಿಗಳನ್ನು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡುವಂತೆ ಕೇಳಿಕೊಂಡಿತು ಎಂದು ವರದಿ ತಿಳಿಸಿದೆ.
ಮತ್ತೊಂದು ವರದಿ ಪ್ರಕಾರ, ಬೈಜುಸ್ ಎಂಟ್ರಿಯಾಗುತ್ತಿದ್ದ ಉದ್ಯೋಗಿಗಳಿಗೆ ಆಫರ್ ಲೆಟರ್‌ಗಳನ್ನು ಆರು ತಿಂಗಳವರೆಗೆ ಮುಂದೂಡಿದೆ. ಇನ್ನು ಕೆಲವರಿಗೆ ತಮ್ಮ ಸೇರ್ಪಡೆಯನ್ನು ಜನವರಿ 2024 ರವರೆಗೆ ವಿಳಂಬಗೊಳಿಸಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ:Gold, Silver Price; ಬೆಂಗಳೂರಿನಲ್ಲಿ 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ?
ನವೆಂಬರ್ 21 ರಂದು, ಜಾರಿ ನಿರ್ದೇಶನಾಲಯವು (ED) ರವೀಂದರನ್ ಮತ್ತು ಅವರ ಕಂಪನಿ ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್ಗೆ ಸಂಬಂಧಿಸಿದ ಪ್ರಕರಣದಲ್ಲಿ ಬೆಂಗಳೂರಿನ ಮೂರು ಸ್ಥಳಗಳಲ್ಲಿ ಶೋಧದ ಬಳಿಕ ಬೈಜು 9,000 ಕೋಟಿ ರೂಪಾಯಿ ಮೊತ್ತದ ವಿದೇಶಿ ವಿನಿಮಯ ಉಲ್ಲಂಘನೆಯನ್ನು ಪತ್ತೆ ಹಚ್ಚಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ಮೇ. ಇದನ್ನು ಫೆಮಾಗೆ ಲಿಂಕ್ ಮಾಡುವ ವರದಿಗಳನ್ನು ಬೈಜು ನಿರಾಕರಿಸಿತ್ತು ಎಂಬುದನ್ನು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).
BBKS10: ‘ಬೇರು ಬಿಡಬೇಕು ಅಂದ್ರೆ ಅದಕ್ಕೊಂದು ಬೀಜ ನೆಡಬೇಕಲ್ವಾ’!; ವಿನಯ್​ ಟಾಂಗ್ ಯಾರಿಗೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × four =
Remember me
