ಬೆಂಗಳೂರು:ಓಲಾ-ಊಬರ್ ಚಾಲಕರನ್ನು ಗುರಿಯಾಗಿಸಿ ಈ ಖದೀಮ ದರೋಡೆ ಮಾಡುತ್ತಿದ್ದ. ಚಾಲಕರು ಪೊಲೀಸರಿಗೆ ದೂರು ನೀಡುವುದಿಲ್ಲ ಎನ್ನುವ ಆಧಾರದ ಮೇಲೆ ಕುಕೃತ್ಯ ಮಾಡುತ್ತಿದ್ದು ಇದೀಗ ಕಡೆಗೂ ಪ್ರಕರಣಗಳು ಬೆಳಕಿಗೆ ಬಂದಿವೆ.
ಉತ್ತರ ಕರ್ನಾಟಕ ಭಾಗದ ಓಲಾ, ಊಬರ್​ ಚಾಲಕರನ್ನು ಈ ಖದೀಮ, ಪ್ರಯಾಣಿಕನ ಸೋಗಿನಲ್ಲಿ ಈತ ಬುಕ್​ ಮಾಡಿ ಕಾರನ್ನು ಏರುತ್ತಿದ್ದ. ನಂತರ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ. ಇದೀಗ ಈತನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿನಯ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಬೆಂಗಳೂರು ಕ್ಯಾಬ್​ ಚಾಲಕನ ಸ್ಫೂರ್ತಿಯ ಕತೆಗೆ ನೆಟ್ಟಿಗರು ಫಿದಾ!
ಈ ವಿನಯ್​, ಎಚ್ಎಎಲ್, ಬಾಣಸವಾಡಿ, ಹೈ ಗ್ರೌಂಡ್ಸ್, ಎಂ.ಜಿ ರೋಡ್ ಭಾಗಗಳಿಂದ ಕ್ಯಾಬ್ ಬುಕ್ ಮಾಡಿ ಚಾಲಕರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದ. ನಂತರ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ ಎನ್ನಲಾಗಿದೆ.

ನಿರ್ಜನ ಪ್ರದೇಶದಲ್ಲಿ ಚಾಕು ತೋರಿಸುತ್ತಿದ್ದ ಈತ, ಬೆದರಿಕೆ ಹಾಕಿ ಫೋನ್ ಪೇ ಮೂಲಕ ಹಣ ಹಾಕಿಸಿಕೊಳ್ಳುತ್ತಿದ್ದ. ಚಾಲಕನ ಕೈಯಲ್ಲಿ ಆತನ ಕುಟುಂಬದವರಿಗೂ ಕರೆ ಮಾಡಿಸಿ ಹಣ ಹಾಕಿಸುವಂತೆಯ ಹೆದರಿಸುತ್ತಿದ್ದ‌. ನನಗೆ ಆ್ಯಕ್ಸಿಡೆಂಟ್ ಆಗಿದ್ದು ಆಸ್ಪತ್ರೆಯಲ್ಲಿದ್ದೇನೆ ಎಂದು ಹೇಳಿಸಿ ಹಣ ಹಾಕಿಸಿಕೊಳ್ಳುವಂತೆ ಈ ವಿನಯ್ ಚಾಲಕರಿಗೆ ಒತ್ತಡ ತರುತ್ತಿದ್ದ. ನಂತರ ಆ ಹಣವನ್ನೂ ಫೋನ್​ ಪೇ ಮೂಲಕ ಹಾಕಿಸಿಕೊಂಡು ಪರಾರಿ ಆಗುತ್ತಿದ್ದ.
ಇದನ್ನೂ ಓದಿ:VIDEO: ಒಳಗೆ ಸೇರಿದರೆ ಗುಂಡು… ರಸ್ತೆ ಮಧ್ಯೆ ಫುಲ್​ ಟೈಟ್​- ಪೊಲೀಸರೂ ಸುಸ್ತು, ಕ್ಯಾಬ್​ ಚಾಲಕನೂ ಬೇಸ್ತು- ವಿಡಿಯೋ ವೈರಲ್
ಈ ಆರೋಪಿ ವಿನಯ್ ಬಂಧನದಿಂದ ನಾಲ್ಕು ಸುಲಿಗೆ ಪ್ರಕರಣಗಳು ಬೆಳಕಿಗೆ ಬಂದಿದ್ದು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ಪಿತಪ್ಪಿ ಈ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಿದರೆ ದುರ್ಬಳಕೆ ಆಗಬಹುದು ನಿಮ್ಮ ಮೊಬೈಲ್ ನಂಬರ್!
ಮಣ್ಣಿನಲ್ಲಿ ಹೂತಿದ್ದರೂ ಇನ್ನೂ ಹೊಳೆಯುತ್ತಿದೆ 3 ಸಾವಿರ ವರ್ಷ ಹಳೆ ಖಡ್ಗ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + six =
Remember me
