ಬೆಂಗಳೂರು:ಆತ್ಮಹತ್ಯೆಗೆ ಶರಾಣದ ಡಿವೈಎಸ್ಪಿ ಲಕ್ಷ್ಮೀ ಅವರು ಕೋಲಾರ ಮೂಲದವರಾಗಿದ್ದಾರೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿಮ ತುರುವಾಲಟ್ಟಿ ಗ್ರಾಮದವರು. ತಂದೆ ವೆಂಕಟೇಶಪ್ಪ ಡಿಸಿಸಿ ಬ್ಯಾಂಕ್​ನಲ್ಲಿ ಮ್ಯಾನೇಜರ್ ಆಗಿದ್ದು, ಮಗಳ ಸಾವು ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.
ಆತ್ಮಹತ್ಯೆಗೆ ಶರಣಾದ ಲಕ್ಷ್ಮೀ ಕಳೆದ ಎಂಟು ವರ್ಷಗಳ ಹಿಂದೆ ಪೋಷಕರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಕಾರಣ ಪೋಷಕರಿಂದ ದೂರ ಇದ್ದರು ಎನ್ನಲಾಗಿದೆ. ಅಲ್ಲದೆ ಸದ್ಯ ಪೋಷಕರಿಂದ ದೂರವಿದ್ದ ಲಕ್ಷ್ಮೀ ಬೆಂಗಳೂರಿನಲ್ಲಿ ವಾಸವಾಗಿದ್ದರು. ಇನ್ನು ಮದ್ಯಾಹ್ನ 3 ಗಂಟೆ ಸುಮಾರಿಗೆ ಸ್ವಗ್ರಾಮ ತುರುವಾಲಟ್ಟಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಮಾಡುವುದಾಗಿ ಲಕ್ಷ್ಮೀ ಕುಟುಂಬ ಸದಸ್ಯರಿಂದ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ:ಆ್ಯಪ್​ ಮೂಲಕ ಇನ್​ಸ್ಟಂಟ್ ಲೋನ್ ಪಡೆದ ಯುವಕರ ಮಾನ ಜಾಲತಾಣದಲ್ಲಿ ಹರಾಜು: ಆತ್ಮಹತ್ಯೆಗೂ ಯತ್ನ
ನನಗೆ ಇಬ್ಬರ ಮೇಲೆ ಅನುಮಾನ ಇದೆ. ನಿನ್ನೆ ನನ್ನ ಮಗಳು ಮನು ಹಾಗೂ ಪ್ರಜ್ವಲ್ ಎಂಬುವರ ಜೊತೆ ಪಾರ್ಟಿ ಮಾಡಿದ್ಳು. ಒಟ್ಟು ಆರು ಜನ ಸೇರಿ ನಿನ್ನೆ ಪಾರ್ಟಿ ಮಾಡಿದ್ರು. ಅವರಿಬ್ಬರು ಹೇಳಿದಂತೆ ಶಾಲ್ ತೆಗೆದುಕೊಂಡು ರೂಮ್ ಒಳಗೆ ಹೋಗಿ ಲಕ್ಷ್ಮಿ ಬಾಗಿಲು ಮುಚ್ಚಿದಳಂತೆ. ಆ ಬಳಿಕ ತುಂಬಾ ಹೊತ್ತು ಏನೂ ಸದ್ದು ಗದ್ದಲ‌ ಇರಲಿಲ್ಲವಂತೆ. ಆಮೇಲೆ ನೋಡಿದರೆ ನೇಣು ಬಿಗಿದ ಸ್ಥಿತಿಯಲ್ಲಿ ಇದ್ಳು ಅಂತಿದ್ದಾರೆ. ಆದ್ರೆ ಅವರಿಬ್ಬರು ಹೇಳುವುದು ಸುಳ್ಳು ಅಂತನ್ನಿಸ್ತಿದೆ. ನಂಗೆ ಅವರಿಬ್ಬರ ಮೇಲೆ ಅನುಮಾನ ಇದೆ. ಅದನ್ನು ಪೊಲೀಸರಿಗೂ ಹೇಳಿದ್ದೇನೆ ಎಂದು ಲಕ್ಷ್ಮೀ ತಂದೆ ವೆಂಕಟೇಶಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:VIDEO| ರುಂಡವೇ ಇಲ್ದಿದ್ರೂ ದಾಳಿಗೆ ಯತ್ನಿಸಿದ ಹಾವು: ನೀವು ನೋಡಿರದ ಭಯಾನಕ ವಿಡಿಯೋ ಇದು!
ಸ್ನೇಹಿತನ ಮನೆಯಲ್ಲೇ ಸಿಐಡಿ ಡಿವೈಎಸ್​ಪಿ ನೇಣಿಗೆ ಶರಣಾಗಿದ್ದೇಕೆ? ನಿನ್ನೆ ರಾತ್ರಿ ನಡೆದಿದ್ದೇನು?

ಪ್ರೇಮ ವಿವಾಹ, ಒಳ್ಳೆಯ ಹುದ್ದೆಯಲ್ಲಿದ್ರೂ ಸಿಐಡಿ ಡಿವೈಎಸ್​ಪಿ ಲಕ್ಷ್ಮೀ ಆತ್ಮಹತ್ಯೆ ಶರಣಾಗಿದ್ದೇಕೆ: ಇಲ್ಲಿದೆ ಸ್ಫೋಟಕ ಮಾಹಿತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − three =
Remember me
