| ರಾಘವ ಶರ್ಮ ನಿಡ್ಲೆ ನವದೆಹಲಿ
ಸಂಪುಟ ವಿಸ್ತರಣೆ ಸಲುವಾಗಿ ದೆಹಲಿಗೆ ಬಂದು 3 ದಿನಗಳ ಕಾಲ ವರಿಷ್ಠರೊಂದಿಗೆ ಸಭೆಗಳ ಮೇಲೆ ಸಭೆ ಮಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆಗೆ ಮಂತ್ರಿ ಸ್ಥಾನ ನೀಡುವುದು ಬೇಡ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಇದಕ್ಕೆ ಮುಖ್ಯ ಕಾರಣ- ಮೊಟ್ಟೆ ಡೀಲ್ ಪ್ರಕರಣದಲ್ಲಿ ಲಂಚ ಕೇಳುತ್ತಿರುವ ಗಂಭೀರ ಆರೋಪ. ಇದು ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ಶಾಸಕಿ, ಗೊಲ್ಲ ಸಮುದಾಯದ ಪೂರ್ಣಿಮಾ ಶ್ರೀನಿವಾಸ್​ಗೆ ಮಂತ್ರಿ ಸ್ಥಾನ ನೀಡಬಹುದೆಂದು ಸಿಎಂ ತಮ್ಮ ಪಟ್ಟಿಯಲ್ಲಿ ದಾಖಲಿಸಿದ್ದರು. ಅಚ್ಚರಿ ಎಂಬಂತೆ ಕೊನೇ ಕ್ಷಣದಲ್ಲಿ ಶಶಿಕಲಾ ಜೊಲ್ಲೆಗೆ ಮಂತ್ರಿ ಸ್ಥಾನ ನೀಡಬೇಕು ಎಂದು ವರಿಷ್ಠರು ಸೂಚನೆ ನೀಡಿದ್ದರಿಂದ ಬೊಮ್ಮಾಯಿ ಕೂಡ ತಲೆಯಾಡಿಸಿ ಬೆಂಗಳೂರಿಗೆ ವಾಪಸಾಗಿದ್ದಾರೆ. ದಿಲ್ಲಿಯಲ್ಲಿ ಇದ್ದಾಗಲೂ ಬೊಮ್ಮಾಯಿ, ಜೊಲ್ಲೆಗೆ ಮಂತ್ರಿ ಸ್ಥಾನ ಇಲ್ಲ ಎಂಬ ಖಚಿತ ಧೋರಣೆ ಹೊಂದಿದ್ದರು.
ಪತಿ ಅಣ್ಣಾ ಸಾಹೇಬ್ ಜೊಲ್ಲೆ ಸಂಸದರು ಮತ್ತು ಪತ್ನಿ ಶಶಿಕಲಾ ಜೊಲ್ಲೆ ಶಾಸಕಿ. ಇಬ್ಬರಿಗೂ ಅಧಿ ಕಾರವಿದೆ. ಲಂಚ ಕೇಳಿದ ಆರೋಪವಿದ್ದರೂ ಶಶಿಕಲಾಗೆ ಮಂತ್ರಿ ಸ್ಥಾನ ನೀಡಿ ಇವರು ಸಾಧಿಸಿದ್ದೇನು? ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತ ನಾಡಲು ನಮ್ಮಲ್ಲಿ ನೈತಿಕತೆ ಎಲ್ಲಿ ಉಳಿದು ಕೊಂಡಿತು ಎಂದು ಪಕ್ಷದ ಪ್ರಮುಖರೊಬ್ಬರು ಬೇಸರ ತೋಡಿಕೊಂಡಿದ್ದಾರೆ. ಕಳೆದ 10-12 ದಿನಗಳಿಂದ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದ ಶಶಿಕಲಾ ಜೊಲ್ಲೆ, ತಮ್ಮ ಪತಿ ಅಣ್ಣಾ ಸಾಹೇಬ್ ಜತೆಗೆ ಹಲವು ನಾಯಕರನ್ನು ಭೇಟಿ ಮಾಡಿದ್ದಾರೆ. ನಳಿನ್ ಕುಮಾರ್ ಕಟೀಲ್ ದಿಲ್ಲಿ ನಿವಾಸಕ್ಕೆ ತೆರಳಿ, ಮಂತ್ರಿ ಮಾಡುವಂತೆ ಕೋರಿದ್ದರು. ಬಿ.ಎಲ್.ಸಂತೋಷ್​ರನ್ನೂ ದಂಪತಿ ಭೇಟಿ ಮಾಡಿದ್ದಾರೆನ್ನಲಾಗಿದೆ.
ಕೋಟಗೆ ಲಕ್:ಕಾರ್ಕಳ ಶಾಸಕ, ಈಡಿಗ ಸಮಾಜದ ಸುನಿಲ್​ಕುಮಾರ್​ಗೆ ಮಂತ್ರಿ ಸ್ಥಾನ ನೀಡಿದಲ್ಲಿ ಅದೇ ಸಮಾಜದ ಕೋಟ ಶ್ರೀನಿವಾಸ ಪೂಜಾರಿಗೆ ಮಂತ್ರಿಗಿರಿ ತಪ್ಪಲಿದೆ ಎಂದು ಭಾವಿಸಲಾಗಿತ್ತು. ಕೋಟಗೂ ಮಂತ್ರಿ ಸ್ಥಾನ ನೀಡಿ, ಹಿಂದೆ ಡಿಸಿಎಂ ಆಗಿದ್ದ ಲಕ್ಷ್ಮಣ ಸವದಿಗೆ ಸಚಿವ ಸ್ಥಾನವನ್ನೇ ನೀಡದಿರುವುದು ಬಿಜೆಪಿ ನಾಯಕರಲ್ಲೇ ಅಚ್ಚರಿ ಮೂಡಿಸಿದೆ.
ಸೈನಿಕನಿಗೆ ದುಃಖ
ಯಡಿಯೂರಪ್ಪ ವಿರುದ್ಧ ಕಳೆದೊಂದು ವರ್ಷದಿಂದ ದೆಹಲಿಗೆ ಬಂದು ದೂರುಗಳ ಮೇಲೆ ದೂರು ನೀಡುತ್ತಿದ್ದ ಯೋಗೇಶ್ವರ್, ಬಿಎಸ್​ವೈ ರಾಜೀನಾಮೆ ನೀಡಿದ್ದಾಗ ಭಾರಿ ಖುಷಿ ಪಟ್ಟಿದ್ದರು. ನನ್ನ ಹೋರಾಟಕ್ಕೆ ಬೆಲೆ ಸಿಕ್ಕಿತು ಎಂದು ಸಂಭ್ರಮಿಸಿದ್ದ ಯೋಗೇಶ್ವರ್ ಮಂತ್ರಿ ಸ್ಥಾನ ಸಿಕ್ಕದೆ ಸಪ್ಪೆ ಮೋರೆ ಹಾಕಿದ್ದಾರೆ. ಈ ಬಿಜೆಪಿ ಸಹವಾಸ ಸಾಕಪ್ಪಾ ಎಂದು ಸುಸ್ತಾಗಿರುವ ಸೈನಿಕ, ಮುಂದಿನ ಚುನಾವಣೆಯನ್ನು ಪಕ್ಷೇತರನಾಗಿಯೇ ಎದುರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
