ಬೆಂಗಳೂರು:ಏಳನೇ ವೇತನ ಆಯೋಗ ಯಾವಾಗ ಜಾರಿಯಾಗುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರು ಕಾದು ಕುಳಿತಿದ್ದು, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಿರುವ ಮಾತು ನೌಕರರ ಮುಖದಲ್ಲಿ ಸಂತಸ ಉಂಟುಮಾಡಲಿದೆ. ಏಕೆಂದರೆ, 7ನೇ ವೇತನ ಆಯೋಗ ಜಾರಿಗೊಳಿಸುವ ಬಗ್ಗೆ ಸಿಎಂ ಸಿದ್ದು ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ವಿಧಾನ ಮಂಡಲದ ಅಧಿವೇಶನದಲ್ಲಿ ಬಜೆಟ್​ ಮೇಲಿನ ಚರ್ಚೆ ನಡೆಯುತ್ತಿದ್ದು, ವಿಧಾನ ಪರಿಷತ್​ನಲ್ಲಿ ಬಿಜೆಪಿಯ ಡಾ. ವೈ.ಎ. ನಾರಾಯಣಸ್ವಾಮಿ ಅವರು ವೇತನ ಆಯೋಗದ ಬಗ್ಗೆ ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಅವರು ಉತ್ತರ ನೀಡಿದ್ದಾರೆ.
ಇದನ್ನೂ ಓದಿ:ಅಪಘಾತ ತಡೆಯದಿದ್ದರೆ ಟೋಲ್ ಸಂಗ್ರಹಕ್ಕೆ ಬಿಡಲ್ಲ ಹೆದ್ದಾರಿ ಅಧಿಕಾರಿಗಳಿಗೆ ಸಂಸದ ಸುರೇಶ್ ಎಚ್ಚರಿಕೆ
ಪ್ರಸ್ತುತ ರಾಜ್ಯ ಸರ್ಕಾರಿ ನೌಕರರಿಗೆ ಎಷ್ಟನೇ ವೇತನ ಆಯೋಗವನ್ನು ನೀಡಲಾಗಿದೆ? ಯಾವಾಗ ನೀಡಲಾಗಿದೆ? ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಪ್ರಸ್ತುತ 6ನೇ ವೇತನ ಆಯೋಗ ಶಿಫಾರಸ್ಸು ಜಾರಿಯಲ್ಲಿದೆ. ಇದು ಬಂದು 6 ವರ್ಷ ಆಯಿತು. 7ನೇ ವೇತನ ಆಯೋಗದ ಮಧ್ಯಂತರ ವರದಿ ಕೊಟ್ಟಿದೆ ಎಂದು ಹೇಳಿದರು
ಎಷ್ಟು ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸಲಾಗುವುದು? ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ನಡುವೆ ವೇತನ ತಾರತಮ್ಯ ಇರುವುದು ಸರ್ಕಾರದ ಗಮನಕ್ಕ ಬಂದಿದೆಯೇ? ಬಂದಿದ್ದಲ್ಲಿ ಎಷ್ಟು ಪ್ರಮಾಣದಲ್ಲಿ ತಾರತಮ್ಯ ಇದೆ? ಕೇಂದ್ರ ಸರ್ಕಾರದ ಸರಿಸಮನಾದ ವೇತನ ರಾಜ್ಯ ನೌಕರರಿಗೆ ಕೊಡಲು ಸಾಧ್ಯವೆ ಎಂಬ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದು, ನಾರಾಯಣಸ್ವಾಮಿ ಅವರು ನಾವು ಕೊಟ್ಟ ಉತ್ತರ ಅದ್ಭುತ ಎಂದು ಹೇಳಿದ್ದಾರೆ. ಆದರೆ ಕೆಲವು ಉಪ ಪ್ರಶ್ನೆ ಕೇಳಿದ್ದಾರೆ. ನಿಮ್ಮ ಪ್ರಶ್ನೆಗಳು ಕೂಡ ಅತ್ಯದ್ಭುತವಾಗಿದೆ. 7ನೇ ಆಯೋಗದವರು ನಮಗೆ ಸಮಯ ಬೇಕು ಎಂದು ಕೇಳಿದ್ದಾರೆ. 6 ತಿಂಗಳು ಸಮಯ ಕೊಡಲಾಗಿದೆ. ಸದ್ಯಕ್ಕೆ ಮಧ್ಯಂತರ ವರದಿಯಂತೆ ಜಾರಿ ಮಾಡಿದ್ದೇವೆ. ಅವರು ಪೂರ್ಣ ವರದಿ ಕೊಟ್ಟಾಗ ನಮ್ಮ ಆರ್ಥಿಕ ಪರಿಸ್ಥಿತಿ ನೋಡಿಕೊಂಡು 7ನೇ ಆಯೋಗವನ್ನು ಜಾರಿ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ:ರೈತರು, ಜನರ ಬವಣೆ ಮರೆತು ಗ್ಯಾರಂಟಿಗಳ ಬೆನ್ನು ತಟ್ಟಿಕೊಳ್ಳುತ್ತಿರುವ ಸರ್ಕಾರ: ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಟೀಕೆ
ಕೇಂದ್ರದವರು 10 ವರ್ಷಕ್ಕೊಮ್ಮೆ ಆಯೋಗವನ್ನು ರಚನೆ ಮಾಡುತ್ತಾರೆ. ನಾವು 5 ವರ್ಷಕ್ಕೆ ಒಮ್ಮೆ ಮಾಡುತ್ತೇವೆ. 2022ನೇ ಇಸವಿಯಲ್ಲೇ ಆಯೋಗವನ್ನು ಮಾಡಲಾಗಿದೆ. ಹಿಂದೆ ಪೇ ಕಮಿಟಿ ಶಿಫಾರಸ್ಸು ಕೊಡ್ತಿದ್ರು, ಅದರಂತೆ ಸಂಬಳ ಭತ್ಯೆ, ಕೊಡುತ್ತಿದ್ದರು. ಒಂದು ಬಾರಿ 6,7,8 ವರ್ಷವೂ ಆಗಿದೆ. ಈ ಬಾರಿ 5 ವರ್ಷಕ್ಕೆ ಆಯೋಗ ಮಾಡಲಾಗಿದೆ. ಪೂರ್ಣ ವರದಿ ಬಂದ ಮೇಲೆ ಆಯೋಗದ ಶಿಫಾರಸ್ಸಿನ ಮೇಲೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಉತ್ತರಿಸಿದರು.(ದಿಗ್ವಿಜಯ ನ್ಯೂಸ್​)
LIVE| ರಾಜ್ಯ ವಿಧಾನಮಂಡಲ ಅಧಿವೇಶನದ ನೇರ ಪ್ರಸಾರ- 14/07/2023

ರಾಜಧಾನಿಯಲ್ಲಿ ಡೆಂಘಿ ನರ್ತನ; 11 ದಿನಗಳಲ್ಲಿ 178 ಪ್ರಕರಣಗಳು ಪತ್ತೆ!

ಏಕಕಾಲದಲ್ಲಿ ಯುವಕರಿಬ್ಬರನ್ನು ಮದ್ವೆಯಾಗಲು ಯುವತಿಯಿಂದ ಅರ್ಜಿ ಸಲ್ಲಿಕೆ! ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ಗೊಂದಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + five =
Remember me
