ಬೆಂಗಳೂರು:ಮನಸ್ಸು ಮತ್ತು ಛಲ ಇದ್ದರೆ ಏನನಾದ್ದರೂ ಸಾಧಿಸಬಹುದು ಎಂಬುದನ್ನು ಬಿಎಂಟಿಸಿ ಕಂಡಕ್ಟರ್ ಒಬ್ಬರು ಮಾಡಿ ತೋರಿಸಿದ್ದಾರೆ. ಹೌದು, ಮಳವಳ್ಳಿ ಮೂಲದ ಎನ್.ಸಿ. ಮಧು ಕಂಡಕ್ಟರ್ ಆಗಿ ಕೆಲಸ ಮಾಡುತ್ತಲೇ ಯುಪಿಎಸ್​ಸಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಸಾಧನೆ ಮಾಡಲು ಪ್ರೋತ್ಸಾಹ ನೀಡುತ್ತಿರುವವರು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಎಂಬುದು ಮತ್ತೊಂದು ವಿಶೇಷ.
ನಿತ್ಯ 8 ಗಂಟೆ ಕಂಡಕ್ಟರ್ ಕೆಲಸ ಮಾಡುವ ಮಧು, ನಿತ್ಯವೂ 5 ಗಂಟೆ ಯುಪಿಎಸ್​ಸಿ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದರು. ಮುಖ್ಯಪರೀಕ್ಷೆಯಲ್ಲಿ ಉತ್ತೀರ್ಣರಾದ ಅವರು ಮಾರ್ಚ್​ನಲ್ಲಿ ನಡೆವ ಸಂದರ್ಶನಕ್ಕೆ ಸಿ.ಶಿಖಾ ಮಾರ್ಗದರ್ಶನದಲ್ಲಿ ಸಿದ್ಧತೆಯನ್ನೂ ನಡೆಸುತ್ತಿದ್ದಾರೆ.
2019ರ ಜೂನ್​ನಲ್ಲಿ ಮಧು ಯುಪಿಎಸ್​ಸಿ ಪೂರ್ವಭಾವಿ ಪರೀಕ್ಷೆ ಬರೆದಿದ್ದರು. ಇದರ ಫಲಿತಾಂಶ ಅಕ್ಟೋಬರ್​ನಲ್ಲಿ ಬಂದಿತು. ಪರೀಕ್ಷೆಗೆ ರಾಜ್ಯಶಾಸ್ತ್ರ ಮತ್ತು ಅಂತಾರಾಷ್ಟ್ರೀಯ ಸಂಬಂಧ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಕನ್ನಡದಲ್ಲೇ ಪೂರ್ವಭಾವಿ ಪರೀಕ್ಷೆ ಬರೆದಿದ್ದರು. ಮುಖ್ಯ ಪರೀಕ್ಷೆಯನ್ನು ಆಂಗ್ಲ ಭಾಷೆಯಲ್ಲಿ ಎದುರಿಸಿದ್ದರು.
ಕೆಲಸದ ನಡುವೆ ಓದು:ಮಧು 19ನೇ ವಯಸ್ಸಿಗೆ ವೃತ್ತಿ ಜೀವನ ಆರಂಭಿಸಿದವರು. ಓದುವ ಹಂಬಲ ಇದ್ದ ಕಾರಣ ಕೆಲಸ ಮಾಡುತ್ತಲೇ ದೂರ ಶಿಕ್ಷಣದ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಐಎಎಸ್ ಮಾಡಲೇಬೇಕು:2014ರಲ್ಲಿ ಕೆಎಎಸ್​ನಲ್ಲಿ ಉತ್ತೀರ್ಣರಾದರೂ ಐಎಎಸ್ ಮಾಡಲೇಬೇಕು ಎಂಬ ಛಲ ಮಧು ಅವರಲ್ಲಿತ್ತು. 2018ರಲ್ಲಿ ಯುಪಿಎಸ್​ಸಿ ಪರೀಕ್ಷೆ ಬರೆದು ಅನುತ್ತೀರ್ಣರಾದರು. 2019ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮಾರ್ಚ್​ನಲ್ಲಿ ಸಂದರ್ಶನ ಎದುರಿಸಲು ಅಣಕು ಸಂದರ್ಶನದ ವಿಡಿಯೋ ನೋಡುತ್ತ ಕಲಿಕೆ ಮುಂದುವರಿಸಿದ್ದಾರೆ.
ನನಗೆ ಮೊದಲಿನಿಂದಲೂ ಐಎಎಸ್ ಮಾಡಬೇಕೆಂಬ ಆಸೆ ಇದ್ದು, ಅದನ್ನು ಪೂರೈಸಿಕೊಳ್ಳ ಬೇಕೆಂದು ವ್ಯಾಸಂಗ ಮಾಡುತ್ತಿದ್ದೇನೆ. ನಮ್ಮ ಕುಟುಂಬದಲ್ಲಿ ಹೆಚ್ಚು ಓದಿರುವವನು ನಾನೇ. ಶಿಖಾ ಮೇಡಂ ರೀತಿ ಅಧಿಕಾರಿ ಆಗಬೇಕು.
| ಎನ್.ಸಿ.ಮಧುಬಿಎಂಟಿಸಿ ಕಂಡಕ್ಟರ್
ಐಎಎಸ್ ಮಾಡಬೇಕೆಂಬ ಹಂಬಲವನ್ನು ಬಿಎಂಟಿಸಿ ಎಂಡಿ ಸಿ.ಶಿಖಾ ಬಳಿ ಮಧು ಹೇಳಿದಾಗ ಸಹಾಯ ಮಾಡುವುದಾಗಿ ಅವರು ಹೇಳಿದ್ದಾರೆ. ಮುಖ್ಯಪರೀಕ್ಷೆಗೆ ಸಿದ್ಧತೆ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ವಾರದಲ್ಲಿ 2 ಗಂಟೆ ತರಬೇತಿ ಸಹ ನೀಡುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
