ಬೆಂಗಳೂರು:ಕರೊನಾ ಪೀಡಿತರೊಬ್ಬರು ಮೃತಪಟ್ಟರೆ ಅವರ ಕುಟುಂಬದ ಸದಸ್ಯರು ಅಂತಿಮ ದರ್ಶನ ಪಡೆಯಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ವಣವಾಗಿದೆ. ಈ ಸಂದರ್ಭದಲ್ಲಿ ಅನೇಕ ಶವಗಳು ಅನಾಥವಾಗುವ ಸನ್ನಿವೇಶ ಬಂದೊದಗಿದೆ. ಬೆಂಗಳೂರಿನ ವಿಚಾರಕ್ಕೆ ಬರುವುದಾದರೆ ಈವರೆಗೆ 76 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ 53 ಮೃತದೇಹದ ಅಂತ್ಯಕ್ರಿಯೆ ಯಾರು ಮಾಡಬೇಕೆಂಬ ಪ್ರಶ್ನೆ ಎದುರಾದಾಗ ಮುಂದೆ ಬಂದಿದ್ದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಮತ್ತು ಅವರ ತಂಡ ಎಂಬ ಕುತೂಹಲದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಮನೆಯ ಒಬ್ಬ ಸದಸ್ಯನಿಗೆ ಕರೊನಾ ಬಂದಾಗ ಉಳಿದವರನ್ನು ಪ್ರಾಥಮಿಕ ಸಂಪರ್ಕದ ಕಾರಣಕ್ಕೆ ಕ್ವಾರಂಟೈನ್ ಮಾಡುವುದು ಮಾಮೂಲು. ಒಂದು ವೇಳೆ ಕರೊನಾ ಸೋಂಕಿತ ಮೃತಪಟ್ಟರೆ ಅವರ ಮೃತದೇಹ ನೋಡಲೂ ಸಾಧ್ಯವಾಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಜಮೀರ್ ಅಹ್ಮದ್ ನಿಯೋಜಿಸಿರುವ 20 ಜನರ ತಂಡ ನೆರವಾಗುತ್ತಿದೆ. ಮುಸ್ಲಿಮರಷ್ಟೇ ಅಲ್ಲ, 19 ಅನ್ಯಧರ್ವಿುಯರಿಗೂ ಅವರವರ ಧರ್ಮದ ವಿಧಿವಿಧಾನದಂತೆ ಅಂತ್ಯಕ್ರಿಯೆ ನಡೆಸಲಾಗಿದೆ. ಹೂಳುವ ಪದ್ಧತಿ ಇದ್ದರೆ ಹೂಳಲಾಗಿದೆ, ಕಟ್ಟಿಗೆಯಲ್ಲಿ ಸುಡುವ ಪದ್ಧತಿ ಇದ್ದರೆ ಸುಡಲಾಗಿದೆ, ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಬಹುದೆಂದಿದ್ದರೆ ಅದನ್ನೂ ಮಾಡಲಾಗಿದೆ. ಇತ್ತೀಚೆಗೆ ಮೃತರಾದ ಪೊಲೀಸ್ ಹೆಡ್ ಕಾನ್​ಸ್ಟೆಬಲ್ ಅಂತ್ಯಕ್ರಿಯೆಯನ್ನೂ ಇದೇ ತಂಡ ನಡೆಸಿದೆ. ಪಿಪಿಇ ಕಿಟ್ ತೊಟ್ಟು, ಸಾಕಷ್ಟು ಮುಂಜಾಗ್ರತೆ ವಹಿಸಿ ಅಂತ್ಯಕ್ರಿಯೆ ನಡೆಸುತ್ತಿದೆ ಎಂಬುದು ಗಮನಾರ್ಹ.
ಲಾಕ್​ಡೌನ್ ವೇಳೆ ಜನರಿಗೆ ನೆರವು
ಲಾಕ್​ಡೌನ್ ಸಂದರ್ಭದಲ್ಲಿ ನನ್ನ ಕ್ಷೇತ್ರದಲ್ಲಿ ಬಿಬಿಎಂಪಿಯಿದ ನೀಡಲಾದ 43 ಸಾವಿರ ರೇಷನ್ ಕಿಟ್ ವಿತರಿಸಲಾಗಿದೆ. ಒಟ್ಟಾರೆ 60 ಸಾವಿರ ಮನೆಗೆ ದಿನಸಿ ಕಿಟ್ ನೀಡಲಾಗಿದೆ. ಸೀಲ್​ಡೌನ್ ಆದ ಪ್ರದೇಶದ ಜನರಿಗೆ ಸ್ವಂತ ಹಣದಲ್ಲಿ 14 ಸಾವಿರ ಜನರಿಗೆ ಊಟ, ನೀರು ಕೊಟ್ಟಿದ್ದೇನೆ. ಒಂದೂವರೆ ತಿಂಗಳು 3 ಸಾವಿರ ಮನೆಗೆ 5 ಕೆಜಿ ತರಕಾರಿ ತಲುಪಿಸಿದ್ದೇನೆ. ರಂಜಾನ್ ಉಪವಾಸವಿದ್ದ 5 ಸಾವಿರ ಜನರಿಗೆ ನಿತ್ಯ ಹಣ್ಣು ವಿತರಿಸಿದ್ದೇನೆ ಎಂದು ಜಮೀರ್ ಅಹಮದ್ ಹೇಳಿದರು.
FACT-CHECK|ಕ್ವಾರಂಟೈನ್​ ನಿಯಮ ಬದಲಾವಣೆ ಆಗಿದ್ಯಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − six =
Remember me
