ದಾವಣಗೆರೆ:ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಒಟ್ಟು 88ಕ್ಕೆ ಏರಿದೆ. ಇಂದು ಮೂರು ಹೊಸ ಪ್ರಕರಣಗಳು ಕಂಡು ಬಂದಿವೆ.
ಸೋಂಕಿನಿಂದ ಇಬ್ಬರು ಗುಣಮುಖರಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು 82 ಎಂದು ಇಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ.
ಇಂದು ಸೋಂಕು ದೃಢಪಟ್ಟ ಮೂವರಲ್ಲಿ ಓರ್ವ ಪೊಲೀಸ್ ಕಾನ್​ಸ್ಟೆಬಲ್​ ಆಗಿದ್ದು, ಇವರು ಕಂಟೇನ್​ಮೆಂಟ್​ ಝೋನ್​ನಲ್ಲಿ ಕರ್ತವ್ಯದಲ್ಲಿದ್ದರು.
ಇದನ್ನೂ ಓದಿ:ಕರೊನಾ ಸಂಕಷ್ಟ- ಒಂದು ವರ್ಷ ಶೇ.30ರಷ್ಟು ಸಂಬಳ ಬಿಡಲಿದ್ದಾರೆ ರಾಷ್ಟ್ರಪತಿ: ಇತರ ಖರ್ಚುವೆಚ್ಚಕ್ಕೂ ಬ್ರೇಕ್​
ದಾವಣಗೆರೆಯಲ್ಲಿ ದಿನೇದಿನೆ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದರ ಬಗ್ಗೆ ಮಾತನಾಡಿದ ಎಸ್ಪಿ ಹನುಮಂತರಾಯ ಅವರು, ದಾವಣಗೆರೆಯಲ್ಲಿ ಇಂದು ಪಿಜೆ ಬಡಾವಣೆಯ ಸಮೀಪದ ರೈತರ ಬೀದಿಯನ್ನು ಕಂಟೇನ್​ಮೆಂಟ್ ಏರಿಯಾ ಎಂದು ಗುರುತಿಸಲಾಗಿದೆ.
ಈ ಏರಿಯಾಗಳಲ್ಲಿ ಬೆಳ್ಳುಳ್ಳಿ, ಈರುಳ್ಳಿ ವ್ಯಾಪಾರಿಗಳಿಂದಲೇ ಸೋಂಕು ಹರಡಿರುವ ಶಂಕೆ ಬಲವಾಗಿದೆ. ಹಾಗಾಗಿ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಉತ್ಪನ್ನಗಳು ಎಲ್ಲಿಂದ ಸಾಗಣೆ ಬಂದಿವೆ ಎಂಬುದನ್ನೂ ಪರಿಶೀಲನೆ ನಡೆಸುತ್ತಿದ್ದೇವೆ. ಕಂಟೇನ್​ಮೆಂಟ್​ ಏರಿಯಾಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಪಿಪಿಇ ಕಿಟ್​ ನೀಡಲಾಗುವುದು. ಟ್ರಿಪಲ್​ ಲೇಯರ್ ಮಾಸ್ಕ್​ ಒದಗಿಸಲಾಗುವುದು ಹಾಗೂ ಯೂನಿಫಾರ್ಮ್​ನ್ನು ಸ್ಯಾನಿಟೈಸ್ ಮಾಡುವ ಬಗ್ಗೆಯೂ ಅರಿವು ಮೂಡಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ರೈತರು, ಕಾರ್ಮಿಕರಿಗೆ ಕೇಂದ್ರದ ಕೊಡುಗೆ: ತಜ್ಞರು ಏನಂತಾರೆ?
ದಾವಣೆಗರೆಯಲ್ಲಿ ಬಾಷಾನಗರ, ಜಾಲಿನಗರ, ಇಮಾಮ್​ನಗರ, ಬೇತೂರು ರಸ್ತೆ, ಕೆಟಿಜಿ ನಗರ, ಶಿವನಗರ, ಪಿಜೆಬಡಾವಣೆಯ ರೈತರ ಬೀದಿಗಳು ಕಂಟೇನ್​ಮೆಂಟ್​ ವಲಯಗಳೆಂದು ಗುರುತಿಸಲ್ಪಟ್ಟಿವೆ. (ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + fourteen =
Remember me
