ಗದಗ:ಕರೊನಾ ವೈರಸ್​ ಭೀತಿಯಿಂದ ಇಡೀ ದೇಶದಲ್ಲಿ ಸೃಷ್ಟಿಯಾಗಿರುವ ಭೀಕರತೆ ಯಾವ ಮಟ್ಟಿಗೆ ಇದೆ ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದ್ದು, ಕಣ್ಣಂಚಲ್ಲಿ ನೀರು ಬರುವಂತಿದೆ.
ಇಡೀ ದೇಶಕ್ಕೆ ದೇಶವೇ ಸ್ತಬ್ಧವಾಗಿದೆ. ಜನರು ಮನೆಯಲ್ಲೇ ಲಾಕ್​ ಆಗಿರುವುದರಿಂದ ದಿನನಿತ್ಯದ ಚಟುವಟಿಕೆಗಳು ಬಂದ್​ ಆಗಿದೆ. ಇದರ ನಡುವೆ ಹಸಿವಿನಿಂದ ಪರದಾಡುತ್ತಿದ್ದ ಮಾನಸಿಕ ಅಸ್ವಸ್ಥನೊಬ್ಬ ಹಸಿವು ನೀಗಿಸಿಕೊಳ್ಳಲು ಕಸದಲ್ಲಿ ಏನಾದರೂ ಸಿಗಲಿದೆಯೇ ಎಂದು ಹುಡುಕಾಡಿದ ಮನಕಲಕುವ ಘಟನೆ ಗದಗದ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.
ಪುರಸಭೆ ಇಲಾಖೆ ಹಾಕಿದ್ದ ಕಸದಲ್ಲಿ ಆಹಾರಕ್ಕಾಗಿ ಹುಡುಕಾಡುತ್ತಿದ್ದ ವಯೋವೃದ್ಧನನ್ನು ಕಂಡು ಸ್ಥಳೀಯರು ಉಪಹಾರ ಹಾಗೂ ನೀರು ನೀಡಿ ಮಾನವೀಯತೆ ಮೆರೆದರು.
ಸದ್ಯ ಭಾರತದಲ್ಲಿ ಕೋವಿಡ್​-19 ತಗುಲಿರುವ ಸಂಖ್ಯೆ 511ಕ್ಕೇರಿದ್ದು, 12 ಹೊಸ ಪ್ರಕರಣಗಳು ವರದಿಯಾಗಿವೆ. ಈವರೆಗೂ ಒಟ್ಟು 11 ಮಂದಿ ಬಲಿಯಾಗಿದ್ದಾರೆ.(ಏಜೆನ್ಸೀಸ್​)
https://www.facebook.com/VVani4U/videos/644223909480053/
ಕರೊನಾ ಭೀತಿಯಿಂದ ತರಾತುರಿಯಲ್ಲಿ ಊರಿಗೆ ತೆರಳುತ್ತಿದ್ದಾಗ ಕಾರು ಅಪಘಾತ: ಮೂವರ ದಾರುಣ ಸಾವು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × 3 =
Remember me
