|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ನಡುವೆ ವಿವಿಧ ಕಾರಣಕ್ಕೆ ತಿಕ್ಕಾಟ ನಡೆದುಕೊಂಡೇ ಬಂದಿದೆ. ಸಾವಿರಾರು ಕೋಟಿ ರೂ. ವ್ಯವಹಾರ ನಡೆಯುವ ಕ್ಷೇತ್ರದಲ್ಲಿ ಪಾರದರ್ಶಕತೆ ಕೊರತೆ ಎದ್ದು ಕಾಣುತ್ತಿದ್ದು, ಸರ್ಕಾರ ಈಗ ‘ಬೆಸ್ಟ್ ಪ್ರಾಕ್ಟೀಸಸ್’ ಕಲ್ಪನೆಯಲ್ಲಿ ಡಿಜಿಟಲೀಕರಣಕ್ಕೆ ಮೊರೆ ಹೋಗಿದೆ.
ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಿ, ಆ ಮಾಹಿತಿಯನ್ನು ಸಾರ್ವಜನಿಕವಾಗಿ ಮುಕ್ತವಾಗಿಸಲು ಬಯಸಿದೆ. ಇದಕ್ಕಾಗಿ ಸಾಫ್ಟ್ ವೇರ್ ಸಿದ್ಧಪಡಿಸಲಾಗಿದ್ದು, ಮುಂದಿನ 15 ದಿನಗಳೊಳಗೆ ರಾಜ್ಯದ ಎಲ್ಲ್ಲ ಸಕ್ಕರೆ ಕಾರ್ಖಾನೆ ಸಿಬ್ಬಂದಿಗೆ ತರಬೇತಿ ನೀಡಿ ಮಾಹಿತಿಯನ್ನು ಪ್ರತಿದಿನ ಆನ್​ಲೈನ್​ನಲ್ಲಿ ದಾಖಲಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
ಮುಂದುವರಿದು ಮುಂದಿನ ಕಬ್ಬು ಸೀಸನ್ ವೇಳೆಯೊಳಗೆ ಅಂದರೆ 2-3 ತಿಂಗಳಲ್ಲಿ ಮೊಬೈಲ್​ನಲ್ಲಿ ಬಳಸುವ ಆಪ್ ಅಭಿವೃದ್ಧಿಪಡಿಸಿ ರೈತರಿಗೆ ನೋಂದಣಿ ಮಾಡಿಕೊಂಡು ಮಾಹಿತಿ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ.
ತಕ್ಷಣಕ್ಕೆ ಮೊದಲ ಆದ್ಯತೆಯಾಗಿ ಪ್ರತಿ ದಿನ ಸಕ್ಕರೆ ಕಾರ್ಖಾನೆ ಎಷ್ಟು ಕಬ್ಬು ಅರೆಯುತ್ತದೆ? ಸಕ್ಕರೆ ಉತ್ಪಾದನೆ ಎಷ್ಟು ಪ್ರಮಾಣದಲ್ಲಾಯಿತು? ಎಂಬುದನ್ನು ವಿವಿಧ ಪ್ಯಾರಾ ಮೀಟರ್ ಅಡಿ ದಾಖಲೀಕರಣ ಮಾಡಲಾಗುತ್ತದೆ.
ಇನ್ನು ಕಬ್ಬು ಬೆಳೆಗಾರರು ಮೊಬೈಲ್ ಆಪ್​ನಲ್ಲಿ ನೋಂದಣಿ ಮಾಡಿಕೊಂಡು ಬೆಳೆಯ ವಿವರವನ್ನು ದಾಖಲಿಸುವ ವ್ಯವಸ್ಥೆ ಬರಲಿದೆ. ಹೀಗೆ ಮಾಡುವುದರಿಂದ ಕಟಾವಿನ ವೇಳೆ ರೈತರ ಪರದಾಟ ತಪ್ಪಲಿದೆ ಎಂಬುದು ಕಬ್ಬು ಮತ್ತು ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ವಿವರಣೆಯಾಗಿದೆ.
ಕಬ್ಬು ಮತ್ತು ಸಕ್ಕರೆ ಉದ್ಯಮಕ್ಕೆ ಸಂಬಂಧಿಸಿದಂತೆ ದೇಶದ ವಿವಿಧ ಕಡೆಯ ಬೆಸ್ಟ್ ಪ್ರಾಕ್ಟೀಸಸ್ ಗುರುತಿಸಿ ನಾವು ಅಳವಡಿಸಿಕೊಳ್ಳುತ್ತಿದ್ದೇವೆ. ಈ ರೀತಿ ಸಾಫ್ಟ್​ವೇರ್ ಹಾಗೂ ಅಪ್ಲಿಕೇಶನ್ ಬಳಕೆ ಮಾಡುವುದರಿಂದ ದೊಡ್ಡ ಸಮಸ್ಯೆ ನಿವಾರಣೆಯಾಗಿ ಪಾರದರ್ಶಕತೆ ಬರಲಿದೆ ಎಂದು ಇಲಾಖೆ ಆಯುಕ್ತರಾದ ಶಿವಾನಂದ್ ‘ವಿಜಯವಾಣಿ’ಗೆ ವಿವರಣೆ ನೀಡಿದರು.
ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ಉಪಯೋಗ ವಾಗುವಂಥ, ಇಡೀ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಮತ್ತು ರೈತರಿಗೆ ಹೆಚ್ಚಿನ ಅನುಕೂಲವಾಗುವ ಸಾಫ್ಟ್​ವೇರ್ ಅಭಿವೃದ್ಧಿಪಡಿಸಲಾಗಿದೆ.
|ಶಂಕರ್ ಪಾಟೀಲ್ ಮುನೇನಕೊಪ್ಪಸಕ್ಕರೆ ಸಚಿವ
ವಿಶೇಷ ಮೊಬೈಲ್ ಅಪ್ಲಿಕೇಶನ್:ಕಬ್ಬು ಬೆಳೆಗಾರರು ಬೆಳೆ ಮಾಹಿತಿಯನ್ನು ನೇರವಾಗಿ ಸಕ್ಕರೆ ಕಾರ್ಖಾನೆಗಳೊಂದಿಗೆ ನೋಂದಾಯಿಸಲು ಸಾಫ್ಟ್​ವೇರ್ ನೆರವಾಗಲಿದೆ. ರೈತರು ತಮ್ಮ ನೋಂದಣಿಯ ಸ್ಥಿತಿ, ಕಬ್ಬು ಕಡಿತದ ಮಾಹಿತಿ ಮತ್ತು ಪಾವತಿ ಮಾಹಿತಿಯನ್ನು ವೀಕ್ಷಿಸುವಂತೆ ಸಿದ್ಧಪಡಿಸಲಾಗಿದೆ. ಅಲ್ಲದೆ ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ವಿವಿಧ ರೀತಿಯ ಕಬ್ಬು ಬೆಳೆಯುವ ವರದಿಗಳು, ಕಬ್ಬು ಕತ್ತರಿಸುವ ನಿಖರ ಮಾಹಿತಿ, ಪೂರ್ಣಗೊಂಡ ಮತ್ತು ಬಾಕಿ ಉಳಿದಿರುವ ಸ್ಥಿತಿ ಬೆರಳ ತುದಿಯಲ್ಲಿ ಸಿಗಲಿದೆ.
ಒಬ್ಬನೇ ಇರ್ತಿದ್ದ, ಮೊಬೈಲ್​ಫೋನ್​ ಗೀಳು ಹೊಂದಿದ್ದ ಬಾಲಕ ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಮಾಡಿ ಕೊಂದ!

ಹುಣಸೆಹಣ್ಣಿಗೆ ಆಸೆಪಟ್ಟು ಪ್ರಾಣ ಕಳೆದುಕೊಂಡ ಮಹಿಳೆ; ಹಣ್ಣು ಕೈಗೆ ಸಿಕ್ತು ಎನ್ನುವಷ್ಟರಲ್ಲೇ ಜೀವವೇ ಹೋಯ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + two =
Remember me
