ಬೆಂಗಳೂರು: ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಡ ರೋಗಿಗಳ ವೈದ್ಯಕೀಯ ಚಿಕಿತ್ಸೆಗೆ ಪರಿಹಾರ ವಿತರಿಸಲು ಅನುಸರಿಸಬೇಕಾಗಿರುವ ಕ್ರಮಗಳ ಕುರಿತು ಸರ್ಕಾರ ಅಧಿಕೃತ ಜ್ಞಾಪನಾ ಪತ್ರ ಹೊರಡಿಸಿದೆ.
ಶಾಸಕರು ಹಾಗೂ ಸಂಸದರು ಅವರ ಮತ ಕ್ಷೇತ್ರ ಒಳಗೊಂಡ ಜಿಲ್ಲೆಯ ವ್ಯಾಪ್ತಿಯ ಸಂಬಂಧಿಸಿದ ಜಿಲ್ಲೆಯ ವಿಳಾಸದಾರರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಒದಗಿಸುವ ಕುರಿತು ಶಿಾರಸು ಮಾಡಿದಲ್ಲಿ ಅಂತಹ ಅರ್ಜಿಗಳನ್ನು ಆದ್ಯತೆ ಮೇಲೆ ಪರಿಗಣಿಸಬೇಕು. ಮುಖ್ಯಮಂತ್ರಿಗಳ ಪತ್ರದ ಮೇಲೆ ನೀಡಿರುವ ಸೂಚನೆಯಂತೆ ನಿಯಮಾನುಸಾರ ಕ್ರಮ ಕೈಗೊಂಡು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ವಿತರಿಸಬೇಕು. ಮತ ಕ್ಷೇತ್ರ ಒಳಗೊಂಡ ವ್ಯಾಪ್ತಿಯ ಜಿಲ್ಲೆಯ ವಿಳಾಸದಾರರನ್ನು ಹೊರತುಪಡಿಸಿ ಬೇರೆ ಜಿಲ್ಲೆಯ ವಿಳಾಸದಾರರಿಗೆ ಶಾಸಕರು ಹಾಗೂ ಸಂಸದರು ಶಿಾರಸು ಮಾಡಿದ್ದಲ್ಲಿ ಅಂತಹ ಪತ್ರಗಳ ಮೇಲೆ ಸೂಚನೆ ನೀಡಿದ್ದೂ ನಿಯಮಾನುಸಾರ ಸಾಮಾನ್ಯ ಪ್ರಕರಣವೆಂದು ಭಾವಿಸಿ ಪರಿಹಾರ ವಿತರಿಸಬೇಕು.
ಮುಖ್ಯಮಂತ್ರಿಗಳು ಪರಿಹಾರ ಮಂಜೂರು ಮಾಡುವ ಸಂದರ್ಭದಲ್ಲಿ ಅರ್ಜಿ ಅಥವಾ ಶಿಾರಸು ಪತ್ರದ ಮೇಲೆ ನಮೂದಿಸಲಾಗಿರುವ ಚಿಕಿತ್ಸಾ ವೆಚ್ಚವನ್ನು ಪರಿಗಣಿಸಿ ಪರಿಹಾರ ಮಂಜೂರು ಮಾಡಿರುತ್ತಾರೆ. ಕೆಲವೊಂದು ಪ್ರಕರಣಗಳಲ್ಲಿ ಶಾಸಕರು, ಸಂಸದರು ಹಾಗೂ ಸಾರ್ವಜನಿಕರು ಪರಿಹಾರ ಕೋರಿ ಸಲ್ಲಿಸುತ್ತಿರುವ ಶಿಾರಸು ಪತ್ರದಲ್ಲಿ ಅಥವಾ ಅರ್ಜಿಯಲ್ಲಿ ನಮೂದಿಸುತ್ತಿರುವ ಚಿಕಿತ್ಸಾ ವೆಚ್ಚದ ಮೊತ್ತದಂತೆ ಅರ್ಜಿಯೊಂದಿಗೆ ಲಗತ್ತಿಸಿರುವ ಬಿಲ್ಲುಗಳ ಇಲ್ಲದೇ ಇರುವುದು ಕಂಡು ಬಂದಿವೆ. ಆದ್ದರಿಂದ ಶಿಾರಸು ಪತ್ರ ಅಥವಾ ಅರ್ಜಿಯಲ್ಲಿ ನಮೂದಿಸಿರುವ ಒಟ್ಟು ಚಿಕಿತ್ಸಾ ವೆಚ್ಚದಂತೆ ಆಸ್ಪತ್ರೆಯ ಬಿಲ್ಲುಗಳ ಲಭ್ಯವಿಲ್ಲದ ಪಕ್ಷದಲ್ಲಿ ಅಂತಹ ಪ್ರಕರಣಗಳಿಗೆ ಅನುಪಾತದಂತೆ ಲೆಕ್ಕ ಮಾಡಿ ನಿಯಮಾನುಸಾರ ಪರಿಹಾರದ ಮೊತ್ತ ಬಿಡುಗಡೆ ಮಾಡಬೇಕು ಎಂದು ಸೂಚಿಸಲಾಗಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × 2 =
Remember me
