ಬೆಂಗಳೂರು:ಉದ್ಯೋಗದಾತರು ಕರೊನಾ ಕರ್ಫ್ಯೂ ಅವಧಿಯಲ್ಲಿ ಉದ್ಯೋಗಸ್ಥರನ್ನು ಕೆಲಸದಿಂದ ತೆಗೆಯದಂತೆ ಮತ್ತು ವೇತನವನ್ನೂ ಕಡಿತ ಮಾಡದಂತೆ ಸರ್ಕಾರ ಮನವಿ ಮಾಡಿದೆ.
ರಾಜ್ಯದಲ್ಲಿ ಕರೊನಾ ಪ್ರಕರಣ ಸಂಖ್ಯೆ ಏರುಗತಿಯಲ್ಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಪ್ರಸರಣದ ಸರಪಳಿ ತುಂಡರಿಸಲು ಅತ್ಯಂತ ಕಠಿಣ ನಿರ್ಬಂಧ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ. ಇಂತಹ ದುಸ್ಥ್ಥಿತಿಯಲ್ಲಿ ಹಲವು ಭೂ ಮಾಲಿಕರು, ಮನೆ, ವಸತಿಗೃಹ, ಪಿಜಿ, ಅಂಗಡಿ ಮಾಲಿಕರು ಬಾಡಿಗೆ ಮತ್ತು ಭೋಗ್ಯದ ಆಧಾರದ ಮೇಲೆ ನೀಡಿರುವ ಸ್ಥಳಗಳನ್ನು ಬಾಡಿಗೆದಾರರಿಂದ ತೆರವುಗೊಳಿಸುತ್ತಿದ್ದಾರೆ, ಇದು ಸರ್ಕಾರದ ಗಮನಕ್ಕೂ ಬಂದಿದೆ ಎಂದು ಪ್ರಸ್ತಾಪಿಸಿದೆ.
ಮಂಗಳವಾರದಿಂದ 14 ದಿನಗಳವರೆಗೆ ಕರೊನಾ ಕರ್ಫ್ಯೂ ಜಾರಿಯಲ್ಲಿದ್ದು, ಬಹುತೇಕ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಯಾವುದೇ ಉದ್ಯೋಗದಾತರು ತನ್ನ ಉದ್ಯೋಗಸ್ಥರನ್ನು ಕೆಲಸದಿಂದ ವಜಾಗೊಳಿಸಬಾರದು ಮತ್ತು ವೇತನ ಕಡಿತ ಮಾಡದಂತೆ ಮನವಿ ಮಾಡಿದೆ.
ಇದೇ ರೀತಿ ಕಟ್ಟಡ ಮಾಲೀಕರು ಅಂಗಡಿ ಮತ್ತು ಇತರ ಚಟುವಟಿಕೆಗಳನ್ನು ನಡೆಸುವ ಬಾಡಿಗೆಯವರನ್ನು ತೆರವುಗೊಳಿಸುವುದು ಸಹ ಗಮನಕ್ಕೆ ಬಂದಿದೆ. ಮನೆ ಅಥವಾ ಕಟ್ಟಡ ಮಾಲೀಕರು ಬಾಡಿಗೆದಾರರನ್ನು, ಪಿಜಿಯಲ್ಲಿರುವವರನ್ನು ವಾಸದಿಂದ ಬಲವಂತವಾಗಿ ಹೊರಕಳಿಸದಂತೆಯೂ ಕೋರಿದೆ.
ಶೀಘ್ರದಲ್ಲಿ 18 ರಿಂದ 44 ವಯಸ್ಸಿನವರಿಗೆ 3ನೇ ಹಂತದ ಕೋವಿಡ್19 ಲಸಿಕಾ ಯೋಜನೆ: ಮುಖ್ಯ ಕಾರ್ಯದರ್ಶಿ ರವಿಕುಮಾರ್

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:3 + 3 =
Remember me
