ಬೆಂಗಳೂರು:ಅನ್​ಲೋಡ್ ಮಾಡುವಾಗ ಮಿನಿ ಟೆಂಪೋ ಚಾಲಕನೊಬ್ಬ ಪ್ರಾಣ ಕಳೆದುಕೊಂಡಂಥ ದುರಂತವೊಂದು ಸಂಭವಿಸಿದೆ. ಟೆಂಪೋದಲ್ಲಿ ತುಂಬಿದ್ದ ಗಾಜು ಹೃದಯಕ್ಕೆ ಹಾನಿ ಮಾಡಿದ್ದು, ಚಾಲಕ ನಿಂತಲ್ಲೇ ಸಾವಿಗೀಡಾಗಿದ್ದಾನೆ.
ಅಮೃತಹಳ್ಳಿ ನಿವಾಸಿ ಜಿ. ಶಂಕರ್ (38) ಸಾವಿಗೀಡಾದ ಚಾಲಕ. ಮಿನಿ ಟೆಂಪೋದ ಮಾಲೀಕನೂ ಆಗಿದ್ದ ಶಂಕರ್, ಸರಕು ಸಾಗಾಣಿಕೆ ಬಾಡಿಗೆಗೆ ಹೋಗುತ್ತಿದ್ದರು. ಬುಧವಾರ ಬೆಳಗ್ಗೆ 10.45ಕ್ಕೆ ಅಮೃತಹಳ್ಳಿಯ ಗೀತಾ ಗ್ಲಾಸ್ ಆ್ಯಂಡ್ ಹಾರ್ಡ್‌ವೇರ್ ಅಂಗಡಿಯಲ್ಲಿ ಗ್ಲಾಸ್ ಲೋಡ್ ಮಾಡಿಕೊಂಡಿದ್ದರು. ಅಲ್ಲಿಂದ ಸುಬ್ರಹ್ಮಣ್ಯಪುರ ಸಮೀಪದ ವಸಂತಪುರದ ಗಣೇಶ್ ಗ್ಲಾಸ್ ಆ್ಯಂಡ್ ಪ್ಲೈವುಡ್ ಅಂಗಡಿಗೆ ತೆಗೆದುಕೊಂಡು ಬರುತ್ತಿದ್ದರು.
ಮಧ್ಯಾಹ್ನ 2.30ಕ್ಕೆ ವಸಂತಪುರದ ಗಣೇಶ್ ಅಂಗಡಿ ಬಳಿಗೆ ಬಂದಿರುವ ಶಂಕರ್, ರಸ್ತೆಬದಿ ವಾಹನ ನಿಲ್ಲಿಸಿ ಗ್ಲಾಸ್ ಅನ್‌ಲೋಡ್ ಮಾಡಲು ಮುಂದಾಗಿದ್ದರು. ಗ್ಲಾಸ್‌ಗೆ ಕಟ್ಟಿದ್ದ ಹಗ್ಗ ಬಿಚ್ಚಿದಾಗ ಗ್ಲಾಸ್ ಲೋಡ್ ಚಾಲಕನ ಮೇಲೆ ವಾಲಿದೆ. ಭಾರಿ ತೂಕ ಇದ್ದ ಕಾರಣ ತಡೆಯಲು ಸಾಧ್ಯವಾಗದೆ ಇದ್ದಾಗ ಗ್ಲಾಸ್​ಗಳು ಎದೆಯ ಮೇಲೆ ಬಿದ್ದಿವೆ. ತಕ್ಷಣ ಸ್ಥಳೀಯರು ಸಹಾಯಕ್ಕೆ ಬಂದು ಗ್ಲಾಸ್ ತೆರವು ಮಾಡಿ ಶಂಕರ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಎದೆಯ ಮೇಲೆ ಹೆಚ್ಚು ಭಾರ ಬಿದ್ದ ಕಾರಣ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಚಾಲಕನ ರಕ್ಷಣಾ ಕಾರ್ಯಾಚರಣೆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸಂಜೆ 4 ಗಂಟೆ ಹೊತ್ತಿಗೆ ವಿಷಯ ತಿಳಿದ ಸುಬ್ರಹ್ಮಣ್ಯಪುರ ಪೊಲೀಸರು, ಆಸ್ಪತ್ರೆಗೆ ಹೋಗಿ ವರದಿ ಪಡೆದು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. ಚಾಲಕನ ಬಳಿ ಸಿಕ್ಕ ದಾಖಲೆಗಳ ಆಧಾರದ ಮೇಲೆ ವಿಳಾಸ, ಹೆಸರು ಪತ್ತೆಹಚ್ಚಲಾಗಿದೆ. ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಎಸ್​ಐ ನೇಮಕಾತಿಗಾಗಿ ಶೀಘ್ರದಲ್ಲೇ ಮರುಪರೀಕ್ಷೆ: ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
