ಬೆಂಗಳೂರು: ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಇಂದು ಬೆಳಗ್ಗೆಯೇ ಫೇಸ್​ಬುಕ್​ನಲ್ಲಿ ಒಂದು ಪ್ರೇರಣಾದಾಯಿ ಘಟನೆಯನ್ನು ಹಂಚಿಕೊಂಡಿದ್ದಾರೆ. ಎಲ್ಲರಿಗೂ ಆ ಘಟನೆ ಸ್ಪೂರ್ತಿಯನ್ನು ತುಂಬಲಿ, ಪ್ರೇರಣೆಯನ್ನು ನೀಡಲಿ ಎಂಬ ಸದುದ್ದೇಶದಿಂದ ಅವರು ಕೆಲವು ಫೋಟೋಗಳೊಂದಿಗೆ ಶೇರ್ ಮಾಡಿದ್ದಾರೆ. ಅವರದೇ ಮಾತುಗಳಲ್ಲಿ ಈ ಘಟನೆಯ ವಿವರಣೆ ಇಲ್ಲಿದೆ.
” ಇಂದು ಬೆಳಬೆಳಗ್ಗೆಯೇ ನನಗೆ ಆಶ್ಚರ್ಯ ಮತ್ತು ಸ್ಫೂರ್ತಿ ತಂದ ಘಟನೆ ಯನ್ನು ತಮ್ಮೆಲ್ಲರ ಜೊತೆ ಹಂಚಿಕೊಳ್ಳಲು ಬಯಸುತ್ತೇನೆ. ಬೆಳಿಗ್ಗೆ ಏಳಕ್ಕೇ ನಾಗರಬಾವಿ ವ್ಯಾಪ್ತಿಯ ವಿನಾಯಕ ನಗರ 9ನೇ ಬ್ಲಾಕ್ ನಲ್ಲಿರುವ ಸ್ಲಂ‌ ಪ್ರದೇಶಕ್ಕೆ ಹೋಗಿದ್ದೆ. ಕಟ್ಟಡ ಕಾರ್ಮಿಕರ ಕುಟುಂಬಗಳಿಂದ ಕೂಡಿರುವ ಪ್ರದೇಶವಿದು.‌ ಅಲ್ಲಿ ಅನ್ನಪೂರ್ಣೇಶ್ವರಿ ನಗರ #ಪೊಲೀಸ್ ಠಾಣೆಯ ಸಬ್ಇನ್​ಸ್ಪೆಕ್ಟರ್  ಶಾಂತಪ್ಪ_ಜಡಮ್ಮನವರ್ ಎಂಬುವರು ಆ ಸ್ಲಂ ಪ್ರದೇಶದ ಬಡಕುಟುಂಬಗಳ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ ದೃಶ್ಯ ನನ್ನ ಹೃದಯ ಮುಟ್ಟಿತು.
ಇದನ್ನೂ ಓದಿ:ಸರಳ ದಸರಾ ನಿಶ್ಚಿತ, ಜಂಬೂಸವಾರಿ ಉತ್ಸವ ಅನಿಶ್ಚಿತ
ಮೂರನೇ ತರಗತಿಯಿಂದ ಏಳನೇ ತರಗತಿಗಳ ಮಕ್ಕಳಿಗೆ ಗಣಿತ ಹಾಗೂ ಸಾಮಾನ್ಯ ಜ್ಞಾನದ ವಿಷಯಗಳನ್ನು ಶಾಂತಪ್ಪ ಹೇಳಿಕೊಡುತ್ತಿದ್ದಾರೆ. ಸುಮಾರು ಹದಿನೈದು ದಿನಗಳಿಂದ ಈ ಪೊಲೀಸ್ ಅಧಿಕಾರಿ ತನ್ನ ಈ ಕಾಯಕದಲ್ಲಿ ತೊಡಗಿದ್ದಾರೆ. ಆ ಮಕ್ಕಳೊಂದಿಗೆ ಮಾತನಾಡಿ ಕೆಲ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನೂ ಪಡೆದುಕೊಂಡೆ‌.
ಇದನ್ನೂ ಓದಿ:ಐವರು ನಕ್ಸಲರ ಬಂಧನ, ಜೈಲ್ಲಿನಲ್ಲಿದ್ದ ನಕ್ಸಲ್ ಒಬ್ಬನ ಸಾವು
ಈ ರೀತಿ ಮಾಡುವ ಯೋಚನೆ ನಿಮಗೆ ಹೇಗೆ ಬಂತು ಎಂದು ಕೇಳಿದ್ದಕ್ಕೆ ಶಾಂತಪ್ಪ ಕೊಟ್ಟ ಉತ್ತರ “ಸರ್. ನಾನು ಸಹ ಒಬ್ಬ ಬಳ್ಳಾರಿಯ migrant labourer ಮಗ. ನನಗೆ ಈ‌ ಕಷ್ಟ ಎಲ್ಲಾ ಗೊತ್ತಿದೆ. ಅದಕ್ಕಾಗಿ ಈ ಕಾರ್ಯದಲ್ಲಿ ತೊಡಗಿದ್ದೇನೆ. ಪ್ರತಿದಿನ ಠಾಣೆಗೆ ಕರ್ತವ್ಯಕ್ಕೆ ಹೋಗುವ ಮುನ್ನ ಈ ಕೆಲಸ ಮುಗಿಸಿ ಹೋಗುತ್ತೇನೆ” ಎಂದು.‌
ಇದನ್ನೂ ಓದಿ:ಗ್ರೂಪ್ ಆಫ್ 23 ಯಲ್ಲಿ ಬಿರುಕು?- ವಿಷಯ ಮುಚ್ಚಿ ಹಾಕಲು ಒಪ್ಪದ ಭಿನ್ನಮತೀಯರು
ನನಗೆ ನಿಜಕ್ಕೂ ಪೊಲೀಸ್ ಅಧಿಕಾರಿಯ ಮೇಲೆ ತುಂಬು ಹೆಮ್ಮೆ ಬಂದಿದೆ. ಕೇವಲ ಕೆಟ್ಟ ಕಾರಣಗಳೇ ಸುದ್ದಿ ಮಾಡುವ ಈ ದಿನಗಳಲ್ಲಿ ಇಂತಹ ಪ್ರಸಂಗಗಳು ಪೊಲೀಸ್ ಇಲಾಖೆಯ ಗರಿಮೆಯನ್ನು ಹೆಚ್ಚಿಸುತ್ತದೆ. ನಾನು ಅಲ್ಲಿನ‌ ಎಲ್ಲ ಕುಟುಂಬಗಳ ಜೊತೆ ಮಾತಾಡಿ ಯಾವುದೇ ಕಾರಣಕ್ಕೂ ಮಕ್ಕಳ ಶಿಕ್ಷಣ ಅರ್ಧಕ್ಕೆ ನಿಲ್ಲಿಸಬಾರದು ಹಾಗೂ ಯಾವುದೇ ಕಾರಣಕ್ಕೂ ಹೆಣ್ಣುಮಕ್ಕಳಿಗೆ ಬೇಗ ವಿವಾಹ ಮಾಡಬಾರದು ಎಂದು ಪ್ರಮಾಣ ಮಾಡಿಸಿಕೊಂಡಿದ್ದೇನೆ.ಇಂತಹ ಮಾನವೀಯ ಹೃದಯದಿಂದ ಉತ್ತಮ ಸೇವೆ ಮಾಡುತ್ತಿರುವ ಪೋಲಿಸ್ ಸಬ್ ಇನ್​ಸ್ಪೆಕ್ಟರ್ ಶಾಂತಪ್ಪ ಜಣಮ್ಮನವರ್ ರಿಗೆ ನನ್ನದೊಂದು #ಸಲ್ಯೂಟ್. ಶಾಂತಪ್ಪನವರ ಮೊ.ನಂ : 8660682092.”
ರಾಗಿಣಿ ಆಪ್ತ ರವಿಶಂಕರ್​ ಸಿಸಿಬಿ ಬಲೆಗೆ ಹೇಗೆ ಬಿದ್ದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 13 =
Remember me
