ಬೆಂಗಳೂರು: ಈದ್ ಉಲ್ ಫಿತ್ರ್ ಹಬ್ಬವನ್ನು ಸೋಮವಾರ ಆಚರಿಸಲು ಮರ್ಕಝಿ ರುಯಾತ್​ ಏ ಹಿಲಾಲ್ ಕಮಿಟಿ ತೀರ್ಮಾನಿಸಲಾಗಿದೆ. ಇಂದು ಚಂದ್ರ ಕಾಣಿಸದೇ ಇರುವ ಕಾರಣ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕಮಿಟಿಯ ಸದಸ್ಯ ಮೌಲಾನಾ ಮಕ್ಸೂದ್​ ಇಮ್ರಾನ್ ರಷ್ದಿ ಸಾಹೇಬ್ ತಿಳಿಸಿದ್ದಾರೆ.
ಇದನ್ನೂ ಓದಿ:PHOTOS/VIDEO| ಯುವತಿಯರ ಹೃದಯಚೋರ ಈ ಲಿಪ್​ಸ್ಟಿಕ್​ ಕಿಂಗ್​- ಈತನ ಸಿಂಗಲ್ಸ್​ ವಹಿವಾಟು 1,100 ಕೋಟಿ ರೂಪಾಯಿ!
ಬೆಂಗಳೂರಿನ ಕನ್ನಿಂಗ್​ಹ್ಯಾಂ ರಸ್ತೆಯಲ್ಲಿರುವ ದಾರ್ ಉಲ್ ಔಕಫ್ ನಲ್ಲಿ ಹಜರತ್ ಮೌಲಾನಾ ಸಗೀರ್ ಅಹಮದ್ ಖಾನ್​ ರಷ್ದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಮಿಟಿ ಸಭೆ ಈ ತೀರ್ಮಾನ ತೆಗೆದುಕೊಂಡಿದೆ. ಬೆಂಗಳೂರು ಮತ್ತು ಸುತ್ತಮುತ್ತ, ಚಿಕ್ಕಬಳ್ಳಾಪುರ, ಬೆಳಗಾವಿ, ಧಾರವಾಡ, ಬೀದರ್, ಹರಿಹರ, ಚಿಕ್ಕಮಗಳೂರು, ಬಾಳೆಹೊನ್ನೂರು ರಾಯಚೂರು, ಗದಗ, ಮೈಸೂರು ಮತ್ತು ತುಮಕೂರುಗಳಲ್ಲಿ ಶನಿವಾರ ಚಂದ್ರ ಗೋಚರಿಸದೇ ಇರುವ ಕಾರಣ ಕಮಿಟಿ ಸದಸ್ಯರೆಲ್ಲರೂ ಸೇರಿ ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ಹಾವು ಕಚ್ಚಿ ಮೃತಪಟ್ಟ ಮಹಿಳೆಯ ಸಾವಿನ ಸುತ್ತ ಅನುಮಾನದ ಹುತ್ತ: ಚಿನ್ನಾಭರಣವೂ ನಾಪತ್ತೆ!
ರಾಜ್ಯದ ಹೊರತಾಗಿಯೂ ದೆಹಲಿ, ಮೇವತ್, ಭೋಪಾಲ್, ಗೋಧ್ರಾ, ಗುಜರಾತ್, ಮುಂಬೈ, ಅಲಹಾಬಾದ್, ಚೆನ್ನೈ, ಪಾಲಂಪುರ, ಕಾನ್ಪುರ, ಜುನಾಪುರ, ಲಖನೌ, ಹೈದರಾಬಾದ್​, ದೇವಬಂದ್ ಮತ್ತು ಇತರೆ ಪ್ರದೇಶಗಳಲ್ಲೂ ಚಂದ್ರ ಗೋಚರಿಸಿಲ್ಲ. ಹೀಗಾಗಿ ಎಲ್ಲ ಉಲೇಮಾಗಳೂ ಸೇರಿ ಸೋಮವಾರ ಮೇ 25ರಂದು ಈದ್ ಉಲ್ ಫಿತ್ರ್ ಆಚರಿಸಲು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಮೌಲಾನಾ ಮಕ್ಸೂದ್ ಇಮ್ರಾನ್ ರಷ್ದಿ ಸಾಹೇಬ್ ತಿಳಿಸಿದ್ದಾರೆ.

ಗುರುವಾರ ಪತ್ತೆಯಾಗಿದ್ದವು ನಾಲ್ಕು ಶವಗಳು, ಶುಕ್ರವಾರ ಇನ್ನೈದು! ನಿಗೂಢವಾಗಿದೆ ವಾರಂಗಲ್​ ಕೃಷಿ ಹೊಂಡದ ರಹಸ್ಯ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:20 − fourteen =
Remember me
