ಬೆಂಗಳೂರು:ರಾಜ್ಯದಲ್ಲಿ ಕರೊನಾ ಸೋಂಕಿಗೆ ಮೃತಪಟ್ಟವರ ದೇಹವನ್ನು ಕುಟುಂಬ ಸದಸ್ಯರು ಜವಾಬ್ದಾರಿ ಹೊತ್ತುಕೊಂಡು ಅಂತ್ಯಸಂಸ್ಕಾರ ನೆರವೇರಿಸದ ಕಾರಣ, ಸರ್ಕಾರವೇ ಸೋಂಕಿತ ದೇಹಗಳ ಅಂತ್ಯಸಂಸ್ಕಾರಕ್ಕೆ ವಿಶೇಷ ತಂಡ ರಚಿಸಲು ಮುಂದಾಗಿದೆ. ಪ್ರತ್ಯೇಕ ಆಂಬುಲೆನ್ಸ್​ಗಳನ್ನು ಸಿದ್ಧಗೊಳಿಸುತ್ತಿದೆ.
ರಾಜ್ಯದಲ್ಲಿ ಈವರೆಗೆ 191 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಕರೊನಾದ ಕರಾಳ ಪ್ರಭಾವಕ್ಕೆ ಬೆಚ್ಚಿಬಿದ್ದ ಜನತೆ ತಮ್ಮ ಕುಟುಂಬ ಸದಸ್ಯರ ಮೃತದೇಹ ನೋಡಲೂ ಬಾರದಿರುವ ಪ್ರಕರಣಗಳು ಶೇ.40ಕ್ಕಿಂತ ಹೆಚ್ಚಾಗಿವೆ. ಪ್ರಸ್ತುತ ಸೋಂಕಿತರ ಸಂಖ್ಯೆ, ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುವವರು ಹಾಗೂ ಸಾವಿನ ಪ್ರಮಾಣದಲ್ಲಿಯೂ ತೀವ್ರ ಏರಿಕೆಯಾಗುತ್ತಿದೆ. ಸಾವಿಗೀಡಾದ ದೇಹಗಳನ್ನು ಅಂತ್ಯಸಂಸ್ಕಾರ ನಡೆಸಲು ಸರ್ಕಾರವೇ ತಂಡಗಳನ್ನು ರಚಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಪೌರ ಕಾರ್ವಿುಕರು, ಸ್ಮಶಾನದಲ್ಲಿ ಕೆಲಸ ಮಾಡುವವರು ತಂಡದ ಸದಸ್ಯರಾಗಿರಲಿದ್ದಾರೆ. ಕರೊನಾಗೆ ಕುಟುಂಬದಲ್ಲಿ ಯಾರೊಬ್ಬರಿಗೆ ಕಾಣಿಸಿಕೊಂಡರೂ ಅವರ ಸಂಪರ್ಕದವರನ್ನು ಪ್ರಾಥಮಿಕ ಸಂರ್ಪತರೆಂದು ಪರಿಗಣಿಸಿ, ಕ್ವಾರಂಟೈನ್ ಮಾಡಲಾಗುತ್ತದೆ. ಮೃತ ವ್ಯಕ್ತಿಯ ಕುಟುಂಬದಲ್ಲಿ ಚಿಕ್ಕ ಮಕ್ಕಳು, ಗರ್ಭಿಣಿಯರು ಹಾಗೂ ವೃದ್ಧರು ಇದ್ದಲ್ಲಿ ಅವರು ಅಂತ್ಯಸಂಸ್ಕಾರಕ್ಕೆ ಬಂದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆಯೆಂದು ಹಿಂಜರಿಯುತ್ತಾರೆ. ಕೆಲವು ಅನಿವಾರ್ಯತೆ ಸಂದರ್ಭಗಳು ಹಾಗೂ ಕೆಲವರು ಬೇಕಂತಲೇ ದೇಹ ನೋಡಲು ಬಾರದ ಘಟನೆಗಳು ನಡೆದಿವೆ.
ಇದನ್ನೂ ಓದಿ:ಬೇಳೆ ಸಂಸ್ಕರಣಾ ಯಂತ್ರದಲ್ಲಿ ಬಿದ್ದು ಛಿದ್ರವಾಯ್ತು ಮಹಿಳೆಯ ದೇಹ…
ಗೋಮಾಳದಲ್ಲಿ ಅಂತ್ಯಕ್ರಿಯೆ: ಸೋಂಕಿಗೆ ಬಲಿಯಾದ ವ್ಯಕ್ತಿ ಮೃತದೇಹದ ಅಂತ್ಯಕ್ರಿಯೆಗೆ ಈಗಿರುವ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲು ಜನರು ವಿರೋಧಿಸುತ್ತಿದ್ದಾರೆ. ಹೀಗಾಗಿ, ಸರ್ಕಾರ ನೇಮಕ ಮಾಡಿದ ತಂಡಗಳು ಜಿಲ್ಲಾ ವ್ಯಾಪ್ತಿಯ ಸರ್ಕಾರಿ ಗೋಮಾಳದ ಜಾಗದಲ್ಲಿ ಹೂಳುವ ಅಥವಾ ಸುಡುವ ಕಾಯರ್åವನ್ನು ಮಾಡಲಿದ್ದಾರೆ. ಈವರೆಗೆ, ಮೃತರ ಕುಟುಂಬ ಸದಸ್ಯರು ಬಾರದಿದ್ದರೆ, ಈ ತಂಡಗಳೇ ಅಂತ್ಯಕ್ರಿಯೆ ಮಾಡಲಿವೆ. ಬೆಂಗಳೂರು ನಗರದಲ್ಲಿ 10, ಬೆಂಗಳೂರು ಗ್ರಾಮೀಣ ಜಿಲ್ಲೆಯಲ್ಲಿ 4 ಹಾಗೂ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ತಲಾ 1 ಆಂಬುಲೆನ್ಸ್​ಗಳಿದ್ದು ಮೃತರ ಸಂಖ್ಯೆಗನುಗುಣವಾಗಿ ವ್ಯವಸ್ಥೆ ಮಾಡಲಾಗುತ್ತದೆ.
ಹೇಗೆ ನಡೆಯುತ್ತಿದೆ ಅಂತ್ಯಕ್ರಿಯೆ?:ಸೋಂಕಿನಿಂದ ಮೃತಪಟ್ಟ ದೇಹಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸಾರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸದೆ ಪಿಪಿಇ ಕಿಟ್ ಮೂಲಕ ಮುಚ್ಚಿ ಮುಖ ಮಾತ್ರ ಪಾರದರ್ಶಕ ವಸ್ತುವಿ ನೊಳಗಿಂದ ಕಾಣುವಂತೆ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
