ವಿಜಯಪುರ:ಕರೊನಾ ಸೋಂಕಿನ ಭೀತಿಯಿಂದಾಗಿ ಆನ್​​ಲೈನ್​ನಲ್ಲೇ ಮದುವೆ, ಆನ್​ಲೈನ್​ ಕ್ಲಾಸ್​ಗಳೂ ಬಂದಾಯ್ತು. ಇದೀಗ ಜಾನಪದ ಸಮ್ಮೇಳನವೂ ಆನ್​ಲೈನ್​ಮಯವಾಗಲಿದೆ. ಜಾನಪದ ಅಂದಾಕ್ಷಣ ಹಳ್ಳಿ ಸೊಗಡು, ಕಲಾಮೆರಗು ಮೇಳೈಸಲಿದೆ. ಗ್ರಾಮೀಣ ಕಲೆಗಳ ಮಹಾ ಸಂಗಮದಂತಿರುವ ಜಾನಪದ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ಮೊದಲ ಬಾರಿಗೆ ಜಾಲತಾಣದ​ಲ್ಲಿ ಝೂಮ್ ಆ್ಯಪ್​ ಮೂಲಕ ರಾಷ್ಟ್ರಮಟ್ಟದ ಪ್ರಥಮ ಜಾನಪದ ಸಮ್ಮೇಳನ ಭಾನುವಾರ(ಜು.26) ನಡೆಯಲಿದೆ.
ಕನ್ನಡ ಜಾನಪದ ಪರಿಷತ್​, ಜಾನಪದ ಯುವ ಬ್ರಿಗೇಡ್​ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಈ ಸಮ್ಮೇಳನ ನಡೆಯಲಿದ್ದು ವಿವಿಧ ಗಣ್ಯರು ತಾವು ಇರುವಲ್ಲಿಂದಲೇ ಆನ್​ಲೈನ್​ ಮೂಲಕ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿರಿಇನ್ನೂ 30 ವರ್ಷ ಕರೊನಾ ಹೋಗಲ್ಲ; ಬ್ರಹ್ಮಾಂಡ ಗುರೂಜಿ ಭವಿಷ್ಯ
ರಾಷ್ಟ್ರಮಟ್ಟದ ಜಾನಪದ ಸಮ್ಮೇಳನ ಅಂಗವಾಗಿ ಗದಗದಲ್ಲಿ ಬೆಳಗ್ಗೆ 9ಕ್ಕೆ ಎಂಎಲ್​ಸಿ ಎಸ್​.ವಿ. ಸಂಕನೂರು ಅವರು ರಾಷ್ಟ್ರಧ್ವಜ, ವಿದ್ಯಾಸಂಸ್ಥೆ ಕಾರ್ಯದರ್ಶಿ ವೀರನಗೌಡ ಪಾಟೀಲ ನಾಡಧ್ವಜ, ಕಜಾಪ ಜಿಲ್ಲಾಧ್ಯಕ್ಷ ಶಾಂತಕುಮಾರ ಭಜಂತ್ರಿ ಪರಿಷತ್​ ಧ್ವಜಾರೋಹಣ ನೆರವೇರಿಸುವರು.
ಬೆಳಗ್ಗೆ 10ಕ್ಕೆ ಜಾಲತಾಣದಲ್ಲಿ ಹಲಸಂಗಿ ಗೆಳೆಯರ ಬಳಗದ ವೇದಿಕೆ ವತಿಯಿಂದ ಡಾ.ಗಣನಾಥ ಶೆಟ್ಟಿ ಎಕ್ಕಾರು ಅವರು ಮಂಗಳೂರಿನಲ್ಲಿ ಸಮ್ಮೇಳನ ಉದ್ಘಾಟಿಸುವರು. ವಿಜಯಪುರದಲ್ಲಿ ಕಜಾಪ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಬೆಂಗಳೂರಿನಲ್ಲಿ ಡಾ. ರಂಗಾರೆಡ್ಡಿ ಕೋಡಿರಾಂಪುರ ಅವರು ಕೃತಿ ಬಿಡುಗಡೆ ಮಾಡುವರು. ಕಜಾಪ ಅಧ್ಯಕ್ಷ ಡಾ. ಎಸ್​.ಬಾಲಾಜಿ ಬೆಂಗಳೂರಿನಲ್ಲಿ ಅಧ್ಯಕ್ಷತೆ ಭಾಷಣ ಮತ್ತು ರಾಯಚೂರಿನಲ್ಲಿ ಸಾನ್ನಿಧ್ಯ ವಹಿಸಿಸುವ ಇಂಗಳೇಶ್ವರ ಸಿದ್ಧಲಿಂಗ ಸ್ವಾಮೀಜಿ ಆರ್ಶೀವಚನ ನೀಡುವರು.
ಇದನ್ನೂ ಓದಿರಿಎಚ್​ಡಿಕೆ- ಡಿಕೆಶಿ ಇಬ್ಬರೂ ನಿವೃತ್ತ ಕುದುರೆಗಳು: ಸಿ.ಪಿ.ಯೋಗೇಶ್ವರ್
ವಿಜಯಪುರದಲ್ಲಿ ಸಮ್ಮೇಳನ ಸರ್ವಾಧ್ಯಕ್ಷ ಸಿದ್ರಾಮಯ್ಯ ಪೂಜಾರಿ ಅವರಿಗೆ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಸನ್ಮಾನಿಸಲಿದ್ದಾರೆ. ವಿದ್ವಾಂಸರಾದ ಅಂಬಳಿಕೆ ಹಿರಿಯಣ್ಣ ಮತ್ತು ಸೋಮಶೇಖರ ಇಮ್ರಾಪುರ ಅವರಿಗೆ ಸನ್ಮಾನ ನಡೆಯಲಿದೆ.
ಮಧ್ಯಾಹ್ನ 1.30ರಿಂದ ಸಂಜೆ 5ರವೆಗೂ 3 ಗೋಷ್ಠಿಗಳು ನಡೆಯಲಿವೆ. ಸಂಜೆ 5.30ಕ್ಕೆ ಸಮಾರೋಪ ನಡೆಯಲಿದ್ದು, ಡಾ. ಎಸ್​. ಬಾಲಾಜಿ ಅವರ ಅಧ್ಯಕ್ಷತೆಯಲ್ಲಿ ಡಾ. ಅಪ್ಪಗೆರೆ ತಿಮ್ಮರಾಜು ಸಮಾರೋಪ ಭಾಷಣ ಮಾಡಲಿದ್ದಾರೆ. ರಾಜ್ಯದ 30 ಜಿಲ್ಲೆಗಳಲ್ಲಿ 30 ಜಾನಪದ ಕಲಾವಿದರಿಗೆ ಆಯಾ ಜಿಲ್ಲೆಯಲ್ಲಿ ಸನ್ಮಾನ ನಡೆಯಲಿದೆ.
ವಿಜಯಪುರ ಜಿಲ್ಲೆ ಇಂಡಿಯ ಕಲಾವಿದರಿಂದ ಗೊಂದಳಿ ಪದ, ಜೈನಾಪುರದ ಕಲಾವಿದರಿಂದ ಹೆಜ್ಜೆಮೇಳ, ಪ್ರಕಾಶ ಚಲವಾದಿ ಅವರ ಶಹನಾಯಿ, ಬಾಗಲಕೋಟೆಯ ಕೆರೂರಿನ ಮಹಿಳಾ ಡೊಳ್ಳು, ಚಾಮರಾಜನಗರದ ಮಹಾಕಾವ್ಯ ಗಾಯನ, ಚಿತ್ರದುರ್ಗದ ಕಲಾತಂಡಗಳಿಂದ ಜೋಗಿಪದಗಳ ಕಲಾಪ್ರದರ್ಶನ ನಡೆಯಲಿದೆ.
ನಿಖಿಲ್​ ಕುಮಾರಸ್ವಾಮಿಗೆ ಜೆಡಿಎಸ್​ ಕಾರ್ಯಕರ್ತರಿಂದಲೇ ಹಿಗ್ಗಾಮುಗ್ಗಾ ತರಾಟೆ.. ರಾಜೀನಾಮೆ ಕೊಡುವಂತೆ ಖಡಕ್ ವಾರ್ನಿಂಗ್​ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
