ಯಾವುದೇ ಶುಭ ಕಾರ್ಯಕ್ಕೆ ಮೊದಲು ಗಣೇಶನಿಗೆ ಪೂಜೆ ಮಾಡುವುದು ವಾಡಿಕೆ. ಅದೇ ಗಣೇಶನ ಹಬ್ಬ ಬಂದ್ರೆ ಸಾಕು ಮನೆಯಲ್ಲಿ ಗಣೇಶನನ್ನು ಕೂರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹಬ್ಬದಂದು ಸಿದ್ಧಿವಿನಾಯಕನಿಗೆ ಇಷ್ಟವಾದ ಖಾದ್ಯಗಳನ್ನು ತಯಾರಿಸಿ ನೈವೇದ್ಯ ರೂಪದಲ್ಲಿ ಇಡುತ್ತಾರೆ. ಗಣಪತಿಗೆ ಹೆಚ್ಚಾಗಿ ಸಿಹಿ ತಿಂಡಿಗಳನ್ನೇ ಇಷ್ಟಪಡುವುದರಿಂದ ಗಜಾನನಿಗೆ ನೈವೆದ್ಯಕ್ಕೆ ಇಡುವ ಒಬ್ಬಟ್ಟನ್ನು ಯಾವ ರೀತಿ ತಯಾರಿಸಬಹುದೆಂದು ತಿಳಿಯೋಣ ಬನ್ನಿ…

ಬೇಕಾಗುವ ಸಾಮಾಗ್ರಿಗಳು:
ಮಾಡುವ ವಿಧಾನ:* ಮೊದಲಿಗೆ ಒಂದು ಕುಕ್ಕರ್​ಗೆ ನೆನೆಸಿದ ಕಡ್ಲೆಬೇಳೆಯನ್ನು ಹಾಕಿ ಚೆನ್ನಾಗಿ ಬೇಯಿಸಿಕೊಂಡು ತಣ್ಣಗಾದ ನಂತರ ಮಿಕ್ಸಿಜಾರಿನಲ್ಲಿ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ.
*ಒಂದು ಬೌಲ್​ಗೆ ಎರಡು ಕಪ್ ಮೈದಾ ಹಿಟ್ಟು ,ಎರಡು ಚಮಚ ತುಪ್ಪ,ಚಿಟಿಕೆ ಉಪ್ಪು ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ.ನಂತರ ಒಂದು ಪ್ಯಾನ್​ಗೆ ಮೂರು ಚಮಚ ತುಪ್ಪ ಒಂದು ಕಪ್ ಬೆಲ್ಲ ಹಾಕಿ ಕರಗುವ ತನಕ ಕೈಯಾಡಿಸುತ್ತಿರಿ. ಬೆಲ್ಲ ಕರಗಿದ ನಂತರ ಅದಕ್ಕೆ ರುಬ್ಬಿದ ಕಡ್ಲೆಬೇಳೆಯನ್ನು ಸೇರಿಸಿ ಹೂರಣ ತಯಾರಿಸಿಕೊಳ್ಳಿ.
* ಕಡ್ಲೆಬೇಳೆಯನ್ನು ಸೇರಿಸಿ ಹೂರಣ ತಣ್ಣಗಾದ ನಂತರ ಉಂಡೆಗಳನ್ನಾಗಿ ಮಾಡಿಕೊಳ್ಳಿ.

* ನಾದಿಕೊಂಡಿರುವ ಮೈದಾವನ್ನು ಸಹ ಉಂಡೆಗಳನ್ನಾಗಿ ಮಾಡಿಕೊಂಡು ಅದರ ಒಳಗೆ ಕಡ್ಲೆಬೇಳೆ ಮಿಶ್ರಣವನ್ನಿಟ್ಟು ಮತ್ತೆ ಉಂಡೆ ಮಾಡಿಕೊಳ್ಳಿ.ಬಟರ್ ಪೇಪರ್​ನ ಮೇಲೆ ಒಂದೊಂದೇ ಉಂಡೆಗಳನ್ನಿಟ್ಟು ಚಪಾತಿ ರೀತಿ ಲಟ್ಟಿಸಿಕೊಳ್ಳಿ.
* ನಂತರ ಒಂದು ಪ್ಯಾನ್​ಗೆ ತುಪ್ಪ ಹಾಕಿ ಲಟ್ಟಿಸಿದ ಒಬ್ಬಟ್ಟನ್ನು ಎರಡೂ ಬದಿ ಚೆನ್ನಾಗಿ ಕಾಯಿಸಿಕೊಂಡರೆ ರುಚಿಯಾದ ಒಬ್ಬಟ್ಟು ಸವಿಯಲು ಸಿದ್ಧವಾಗುತ್ತದೆ.
* ತೆಳ್ಳಗಿನ ತುಪ್ಪ ಮತ್ತು ಸಕ್ಕರೆ ಪಾಕ ಈ ಹೋಳಿಗೆಗೆ ಒಳ್ಳೆಯ ಕಾಂಬಿನೇಶನ್!
Ganesh Chaturthi: ಗಣೇಶನಿಗೆ ಗರಿಕೆ ಹುಲ್ಲು ಯಾಕೆ ಇಷ್ಟ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 8 =
Remember me
