ದಾವಣಗೆರೆ:ಮೂವರು ತನ್ನನ್ನು ಅಪಹರಿಸಿ, ಅತ್ಯಾಚಾರ ಮಾಡಿದ್ದಾರೆ ಎಂದು ಸುಳ್ಳು ಕತೆ ಕಟ್ಟಿ ಡಿಪ್ಲೊಮಾ ವಿದ್ಯಾರ್ಥಿನಿಯೊಬ್ಬಳು ದೂರು ನೀಡಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಶಿವಮೊಗ್ಗದ 16 ವರ್ಷದ ಡಿಪ್ಲೊಮಾ ವಿದ್ಯಾರ್ಥಿನಿ ನಗರದ ಹಾಸ್ಟೆಲ್‌ನಲ್ಲಿದ್ದುಕೊಂಡು ಕಾಲೇಜಿಗೆ ಹೋಗುತ್ತಿದ್ದಳು. ಮೂವರು ಅಪಹರಣ ಮಾಡಿ ಹೊನ್ನಾಳಿಯ ತುಂಗಭದ್ರಾ ನದಿಯ ಸಮೀಪ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ವಿದ್ಯಾರ್ಥಿನಿಯು ಸೋಮವಾರ ಸಂಜೆ ಪೊಲೀಸರಿಗೆ ದೂರು ನೀಡಿದ್ದಳು.ಹಿರಿಯ ಅಧಿಕಾರಿಗಳ ತಂಡಗಳು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ದವು.
ವಿದ್ಯಾರ್ಥಿನಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಮಾಜಿ ಪ್ರಿಯಕರನನ್ನು ಭೇಟಿ ಮಾಡುವ ಸಲುವಾಗಿ ಅತ್ಯಾಚಾರ ಪ್ರಕರಣ ಹೆಣೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಪೊಲೀಸ್ ವ್ಯವಸ್ಥೆಯನ್ನೇ ದುರುಪಯೋಗ ಮಾಡಿಕೊಂಡಿರುವುದಕ್ಕೆ ಆಕೆಯ ವಿರುದ್ಧವೇ ದೂರು ದಾಖಲಿಸಿಕೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ವಿದ್ಯಾರ್ಥಿನಿ 5 ಇನ್‌ಸ್ಟಾಗ್ರಾಂ ಅಕೌಂಟ್‌ಗಳನ್ನು ಹೊಂದಿದ್ದಳು. ಇನ್‌ಸ್ಟಾಗ್ರಾಂ ಮೂಲಕ ಹೊನ್ನಾಳಿಯ ಯುವಕನೊಬ್ಬನ ಪರಿಚಯವಾಗಿತ್ತು. ಆತನೊಂದಿಗೆ ಕೆಲ ದಿನ ನಗರದಲ್ಲಿ ಸುತ್ತಾಡಿದ್ದಳು. ತಾನು ಪ್ರೀತಿಸುತ್ತಿರುವ ಯುವಕ ಇತ್ತೀಚೆಗೆ ಫೋನ್ ಕರೆ ಸ್ವೀಕರಿಸುತ್ತಿಲ್ಲ, ಭೇಟಿ ಮಾಡುತ್ತಿಲ್ಲ ಎಂಬುದು ಆಕೆಗೆ ಚಿಂತೆಗೀಡು ಮಾಡಿತ್ತು.ಹೀಗಾಗಿ ಸೋಮವಾರ ಮಧ್ಯಾಹ್ನ ಆಕೆ ಬಸ್‌ನಲ್ಲಿ ಹೊನ್ನಾಳಿಗೆ ತೆರಳಿ, ತುಂಗಭದ್ರಾ ನದಿಯ ಬಳಿ ಬಟ್ಟೆ ತೊಳೆಯುತ್ತಿದ್ದ ವ್ಯಕ್ತಿಯೊಬ್ಬರಿಂದ ಮೊಬೈಲ್​​ಫೋನ್​ ತೆಗೆದುಕೊಂಡು, ‘ನಿನ್ನ ಹುಡುಗಿಯನ್ನು ಅಪಹರಣ ಮಾಡಿದ್ದೇವೆ. ನೀನು ಇಲ್ಲಿಗೆ ಬಾರದೇ ಇದ್ದರೆ ಅವಳನ್ನು ಸಾಯಿಸುತ್ತೇವೆ’ ಎಂದು ಮಾಜಿ ಪ್ರಿಯಕರನ ಮೊಬೈಲ್​ಫೋನ್​​ಗೆ ಮೆಸೇಜ್ ಮಾಡಿದ್ದಾಳೆ.
ಆದರೆ, ಆತ ಅದಕ್ಕೆ ಸ್ಪಂದಿಸಿಲ್ಲ. ಸ್ಥಳಕ್ಕೂ ಬಂದಿರಲಿಲ್ಲ. ದಿನವಿಡೀ ಮೊಬೈಲ್ ಫೋನ್​ ಏಕೆ ಬಂದಾಗಿತ್ತು ಎಂದು ಪಾಲಕರು ಆಕೆಯನ್ನು ವಿಚಾರಿಸಿದಾಗ, ಅತ್ಯಾಚಾರದ ಸುಳ್ಳು ಕಥೆ ಹೇಳಿದ್ದಳು ಎಂದು ತಿಳಿದು ಬಂದಿದೆ.
ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ; ಆರ್ಥಿಕ ಮುಗ್ಗಟ್ಟಿನಿಂದಾಗಿ ಸಾವಿಗೆ ಶರಣು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 13 =
Remember me
