ಹಾಸನ:ಮದುವೆಯಾಗಿರುವ ವಿಷಯ ಮುಚ್ಚಿಟ್ಟು ಮತ್ತೊಂದು ಮದ್ವೆ ಆಗಲು ಸಿದ್ಧನಾಗಿದ್ದ ವಂಚಕನ ಬಣ್ಣ ಕಲ್ಯಾಣ ಮಂಟಪದಲ್ಲಿ ನವವಧುವಿಗೆ ತಾಳಿಕಟ್ಟುವ ಕೊನೇ ಕ್ಷಣದಲ್ಲಿ ಬಯಲಾಗಿದೆ!
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ ಆಗಿರುವ ಮಧುಸೂದನ್​ ಎಂಬಾತ 4 ವರ್ಷಗಳ ಹಿಂದೆಯೇ ವಸುಧಾ ಎಂಬಾಕೆಯನ್ನು ಮದುವೆ ಆಗಿದ್ದ. ಆದರೆ ಆಕೆಯೊಂದಿಗೆ ಸಂಬಂಧ ಹಳಸಿತ್ತು ಎನ್ನಲಾಗಿದೆ. ಮೊದಲ ಪತ್ನಿಗೆ ವಿಚ್ಛೇದನವನ್ನೂ ನೀಡದೆ, ಎರಡನೇ ಮದುವೆಯಾಗಲು ಗುಟ್ಟಾಗಿ ತನ್ನ ಸಹೋದರಿಯರ ಮೂಲಕ ಹಾಸನದ ಹುಡುಗಿಯೊಂದಿಗೆ ಮಧುಸೂದನ್​ ಸಂಬಂಧ ಕುದುರಿಸಿದ್ದ. ಶುಕ್ರವಾರ ನಗರದ ಕಲ್ಯಾಣ ಮಂಟಪವೊಂದರಲ್ಲಿ ಹಸೆಮಣೆ ಏರಲು ಸಿದ್ಧನಾಗಿದ್ದ. ಅದಕ್ಕಾಗಿ ಎಲ್ಲ ಸಿದ್ಧತೆಯೂ ನಡೆದಿತ್ತು. ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ನಡೆದಿದ್ದೇ ಬೇರೆ.
ಮಧುಸೂದನ್​ ಹಾಸನದಲ್ಲಿ ಮತ್ತೊಂದು ಮದುವೆ ಆಗುತ್ತಿರುವ ವಿಷಯ ಮೊದಲ ಪತ್ನಿ ವಸುಧಾಗೆ ಗುರುವಾರ ಸಂಜೆ ಗೊತ್ತಾಗಿದೆ. ತಕ್ಷಣ ಆಕೆ ಗೂಗಲ್​ನಲ್ಲಿ ಹಾಸನದ ಎಲ್ಲ ಕಲ್ಯಾಣ ಮಂಟಪಗಳ ವಿವರ ಮತ್ತು ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ ಕರೆ ಮಾಡಿ ವಿಷಯ ತಿಳಿಸುವ ಪ್ರಯತ್ನ ಮಾಡಿದ್ದಾಳೆ. ಮಧುಸೂದನ್​ ಮದುವೆ ನಡೆಯಲಿದ್ದ ಕಲ್ಯಾಣ ಮಂಟಪದ ದೂರವಾಣಿ ಸಂಖ್ಯೆ ಲಭ್ಯವಾಗಿ ಕರೆ ಮಾಡುವಷ್ಟರಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆ ದಾಟಿತ್ತು. ಆದರೆ ನವವಧುವಿನ ಅದೃಷ್ಟವೋ ಏನೋ ಇನ್ನೂ ಮುಹೂರ್ತ ನಡೆದಿರಲಿಲ್ಲ. ಹೆಣ್ಣಿನ ಮನೆಯವರಿಗೆ ವಸುಧಾ ವಿಷಯ ತಿಳಿಸಿದ್ದಾಳೆ.
ವಿಷಯ ತಿಳಿದ ತಕ್ಷಣ ಹೆಣ್ಣಿನ ಮನೆಯವರು ವಂಚಕ ಮಧುಸೂದನನ್ನು ಎಳೆದೊಯ್ದು ಕೊಠಡಿಯಲ್ಲಿ ಕೂಡಿಹಾಕಿ ಪೊಲೀಸರಿಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ಮಧುಸೂದನ್​ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ.
ಹನಿಮೂನ್​ಗೆಂದು ಮಾಲ್ಡೀವ್ಸ್​ಗೆ ಹೋಗಲು ಸಿದ್ಧನಾಗಿದ್ದ: ಮದುವೆ ಆಗಿರುವ ವಿಷಯ ಗೊತ್ತಾದರೆ ಕಷ್ಟ ಎಂದು ಮೊದಲೇ ಯೋಚಿಸಿದ್ದ ವಂಚಕ ಮಧುಸೂದನ್​, ಶುಕ್ರವಾರ ಮದುವೆ ಆಗಿ ಶನಿವಾರವೇ ಮಾಲ್ಡೀವ್ಸ್​ಗೆ ಹನಿಮೂನ್​ಗೆ ತೆರಳಲು ತನ್ನ ಮತ್ತು ನವವಧುವಿನ ಪಾಸ್​ಪೋರ್ಟ್​, ವೀಸಾ ಮಾಡಿಸಿ ವಿಮಾನ ಪ್ರಯಾಣದ ಟಿಕೆಟ್​ ಸಹ ಬುಕ್​ ಮಾಡಿಸಿದ್ದ. ಮಧುಚಂದ್ರ ಮುಗಿದ ನಂತರ ವಿಷಯ ಗೊತ್ತಾದರೆ ಏನೂ ಮಾಡಲು ಸಾಧ್ಯವಿಲ್ಲ ಎಂಬ ಲೆಕ್ಕಾಚಾರ ಆತನದ್ದಾಗಿತ್ತು.
ಒಂದು ಕಡೆ ವಂಚಕನೊಂದಿಗೆ ಮದುವೆ ಆಗುವುದು ತಪ್ಪಿತಲ್ಲ ಎಂಬ ಸಮಾಧಾನ, ಮತ್ತೊಂದೆಡೆ ಮಹೂರ್ತದ ಸಮಯದಲ್ಲಿ ಮದುವೆ ನಿಂತು ಹೋಗಿ ಮಗಳ ಭವಿಷ್ಯದ ಮೇಲೆ ಆತಂಕ ಕವಿಯಿತಲ್ಲ ಎಂಬ ದುಃಖ ಹೆಣ್ಣಿನ ಮನೆಯವರದ್ದಾಗಿದೆ.
ಸರ್ಕಾರಿ ಮಹಿಳಾ ನಿಲಯದ ಹುಡುಗಿಯ ಕೈಹಿಡಿದ ದಾವಣಗೆರೆ ಯುವಕ! ಶಾಸ್ತ್ರೋಕ್ತವಾಗಿ ಮದ್ವೆ ನಡೆಸಿಕೊಟ್ಟ ಅಧಿಕಾರಿಗಳು- ಶಾಸಕರು

ಇನ್​ಸ್ಪೆಕ್ಟರ್ ನಂದೀಶ್ ಸತ್ತದ್ದು ಬರೀ ಹೃದಯಾಘಾತದಿಂದಲ್ಲ… ಎನ್ನುತ್ತಲೇ ಸರ್ಕಾರದ ವಿರುದ್ಧ ಸಿಡಿದೆದ್ದ ಎಚ್​ಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 2 =
Remember me
