ಹಾಸನ:ತಾಯಿಯೊಬ್ಬಳು ತನ್ನಿಬ್ಬರು ಮಕ್ಕಳಿಗೆ ಇಲಿ ಪಾಷಾಣ ಉಣಿಸಿ, ತಾನು ಸೇವಿಸಿರುವ ಹೃದಯ ವಿದ್ರಾವಕ ಘಟನೆ ಹಾಸನದಲ್ಲಿ ನಡೆದಿದೆ. ತಾಯಿ ಮಾಡಿದ ತಪ್ಪಿಗೆ ಏನೂ ಅರಿಯದ ಕಂದಮ್ಮ ಮೃತಪಟ್ಟಿದೆ.
ಮೂರೂವರೆ ವರ್ಷದ ಮೊಹಮ್ಮದ್​ ಆರಾನ್​ ಮೃತಪಟ್ಟರೆ, 7 ವರ್ಷದ ಮಗಳು ಸುನೈನಾ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಹಾಲಿನಲ್ಲಿ ವಿಷ ಕೊಟ್ಟ ತಾಯಿ ಜೀನತ್ ಭಾನು ಸಹ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತವರು ಮನೆಯವರು ತನ್ನನ್ನು ನೋಡಲು ಬರಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡು ಜೀನತ್​ ಭಾನು ಈ ದುಷ್ಕೃತ್ಯ ಎಸಗಿದ್ದಾಳೆ.
ಉಪ್ಪಿನಂಗಡಿ ಮೂಲದ ಜೀನತ್ ಭಾನುವನ್ನು ಹಾಸನದ ಚಿಪ್ಪಿನ ಕಟ್ಟೆಗೆ ಮದುವೆ ಮಾಡಿಕೊಡಲಾಗಿತ್ತು. ದಿಲ್​ದಾರ್ ಎಂಬುವರನ್ನ ಮದುವೆ ಆಗಿ 12 ವರ್ಷ ಆಗಿತ್ತು. ಜ. 7ರಂದು ಸಂಜೆ ತನ್ನ ಮಕ್ಕಳಾದ ಸುನೈನಾ ಹಾಗೂ ಮಹಮ್ಮದ್ ಆರಾನ್​ಗೆ ಹಾಲಿನಲ್ಲಿ ವಿಷ ನೀಡಿ, ತಾನು ವಿಷ ಸೇವಿಸಿದ್ದಳು.
ವಿಷ ಉಣಿಸಿದ ಬಳಿಕವೂ ಆ ಸಂಗತಿಯನ್ನು ಜೀನತ್​ ಯಾರಿಗೂ ಹೇಳಿರಲಿಲ್ಲ. ಜ.8ರಂದು ಬೆಳಗಿನ ಸಮಯದಲ್ಲಿ ಮಕ್ಕಳು ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡರೂ ಜೀನತ್​ ಸತ್ಯ ಮುಚ್ಚಿಟ್ಟಿದ್ದಳು. ತಕ್ಷಣ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೇ ಅದೇ ದಿನ ಮಧ್ಯಾಹ್ನ ಮೂರುವರೆ ವರ್ಷದ ಮಹಮ್ಮದ್ ಆರೂನ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆಯಿತು.
ಮಗು ಮೃತಪಟ್ಟ ಬಳಿಕ ಜೀನತ್​ ಭಾನು ಅಸಲಿ ಸಂಗತಿಯನ್ನು ಕೊನೆಗೂ ವೈದ್ಯರ ಮುಂದೆ ಬಿಚ್ಚಿಟ್ಟಳು. ತವರು ಮನೆಯವರು ತನ್ನನ್ನು ನೋಡಲು ಬರಲಿಲ್ಲ ಎಂಬ ಬೇಸರದಿಂದ ಕೃತ್ಯ ಎಸಗಿದ್ದಾಗಿ ಬಾಯಿಬಿಟ್ಟಿದ್ದಾಳೆ. ಇದೀಗ ಜೀನತ್ ಭಾನು ವಿರುದ್ಧ ಹಾಸನದ ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಏಲಕ್ಕಿಯಲ್ಲಿ 95 ಬಗೆಯ ಕ್ರಿಮಿನಾಶಕ ಪತ್ತೆ: 6.5 ಕೋಟಿ ರೂ. ಮೌಲ್ಯದ ಅಯ್ಯಪ್ಪ ಸ್ವಾಮಿ ಪ್ರಸಾದ ನಿರುಪಯುಕ್ತ!

ವಿಧಾನಸಭಾ ಚುನಾವಣೆಗೆ ಸ್ಪರ್ಧೆ! ಸ್ವಾಭಿಮಾನಿ ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಿಷ್ಟು…

ಬಟ್ಟೆ ಧರಿಸದೆ ಮಲಗುವುದರಿಂದ ಏನು ಪ್ರಯೋಜನ?; ಇಲ್ಲಿದೆ ಅಧ್ಯಯನದ ಅಂಶಗಳು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 8 =
Remember me
