ಬೆಂಗಳೂರು:ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ಬುಧವಾರ ಸಿಲಿಕಾನ್ ಸಿಟಿಯಲ್ಲಿ ಧಾರಾಕಾರ ಮಳೆಯಾಗಿದೆ.
ಹಲವು ಬಡಾವಣೆಗಳಲ್ಲಿ ಮರದ ರೆಂಬೆ- ಕೊಂಬೆಗಳು ಬಿದ್ದಿವೆ. ಸಂಜೆ ನಂತರ ವಾಹನ ಸಂಚಾರ ವಿರಳ ವಾಗಿದ್ದ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ, ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದರಿಂದ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸಿದರು.
ಯೆಲ್ಲೋ ಅಲರ್ಟ್:ಜು.9 ಮತ್ತು 10ರಂದು ನಗರದಲ್ಲಿ ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ. ಈ ಅವಧಿಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಎಲ್ಲೆಲ್ಲಿ ಎಷ್ಟು ಮಳೆ?: ಆನೇಕಲ್​ನಲ್ಲಿ 41 ಮಿ.ಮೀ, ದೊಡ್ಡಬೊಮ್ಮಸಂದ್ರ 36, ರಾಮೋಹಳ್ಳಿ 27, ಶಿವಕೋಟೆ 44, ಕೊಡಿಗೇಹಳ್ಳಿ 30, ಮಹದೇವಪುರ 27, ಹೊರಮಾವು 25, ಜ್ಞಾನಭಾರತಿ 25, ಬಸವನಪುರ 19, ರಾಮಮೂರ್ತಿನಗರ 17, ಬಾಣಸವಾಡಿ 16, ಕೆ.ಆರ್. ಪುರ 15, ಗರುಡಾಚಾರ್ ಪಾಳ್ಯ 14, ಕೋಣನಕುಂಟೆ 16, ಬೇಗೂರು 15, ಹೇರೋಹಳ್ಳಿ 16, ಹೆಸರಘಟ್ಟ 15 ಹಾಗೂ ಬನ್ನೇರುಘಟ್ಟದಲ್ಲಿ 20 ಮಿ.ಮೀ ಮಳೆಯಾಗಿದೆ.
ಕನ್ನಡಿಯಿಂದ ಕ್ಯಾಮೆರಾ ಎದುರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 4 =
Remember me
